ಕಲಬುರಗಿ: ಸಪ್ನ ಕನ್ನಡ ನಾಡಿನ ಜನಪ್ರಿಯ ಪುಸ್ತಕ ಭಂಡಾರ. ಇದು ಪುಸ್ತಕಗಳಿಗಷ್ಟೇ ಸೀಮಿತವಾಗದೇ, ಶಿಕ್ಷಣಕ್ಕೆ ಸಂಬಂಧಪಟ್ಟ ಪೂರಕ ಸಾಮಗ್ರಿಗಳಿಗೂ ಹೆಸರುವಾಸಿ. ಪ್ರತಿ ಬಾರಿಯೂ ಈ ಪುಸ್ತಕ ಭಂಡಾರ ರಾಜ್ಯೋತ್ಸವದ ತಿಂಗಳಿನಲ್ಲಿ ಕನ್ನಡದ ಓದುಗರಿಗಾಗಿ ತನ್ನೆಲ್ಲಾ ಶಾಖೆಗಳಲ್ಲೂ ಕೆಲವು ಜನಪ್ರಿಯ ಯೋಜನೆಗಳನ್ನು ನೀಡುತ್ತಾ ಬಂದಿದೆ. ಈ ಬಾರಿ ಸಹ ಗ್ರಾಹಕರಿಗೆ ಮತ್ತು ಓದುಗರಿಗೆ ಹಲವು ಆಕರ್ಶಕ ಯೋಜನೆಗಳು ಮತ್ತು ಕಾರ್ಯಕ್ರಮ ನೀಡಲು ಮುಂದಾಗಿದೆ.
ರಿಯಾಯಿತಿ– ನವೆಂಬರ್ ತಿಂಗಳಿನಲ್ಲಿ ಕನ್ನಡ ಪುಸ್ತಕಗಳಿಗೆ ನಮ್ಮ ಎಲ್ಲಾ ಶಾಖೆಗಳಲ್ಲೂ ವಿಶೇಷವಾಗಿ ಶೇ.10%ರಿಂದ 20%ರಷ್ಟು ರಿಯಾಯಿತಿಯನ್ನು ಕನ್ನಡ ಪುಸ್ತಕ ಪ್ರಿಯರಿಗೆ ಸಪ್ನ ನೀಡುತ್ತಿದೆ.
ಸಪ್ನ ಸದಸ್ಯರ ಕಾರ್ಡ್– ನವೆಂಬರ್ ತಿಂಗಳಿನಲ್ಲಿ ಕೊಳ್ಳುವ ಪ್ರತಿ ರೂ. 200 ಮೌಲ್ಯದ ನಿವ್ವಳ ಬೆಲೆಗೆ ಈ ಕಾರ್ಡನ್ನು ಗ್ರಾಹಕರಿಗೆ ಕೊಡಲಾಗುತ್ತದೆ. ಇದರಿಂದ ಒಂದು ವರ್ಷದ ಅವಧಿಗೆ ಪುಸ್ತಕ ಪ್ರೇಮಿಗಳು ಕನ್ನಡ ಪುಸ್ತಕಳ ಮೇಲೆ ಯಾವುದೇ ಶಾಖೆಯಲ್ಲಾಗಲೀ ಶೇ.10% ರಷ್ಟು ರಿಯಾಯಿತಿಯನ್ನು ಪಡೆಯಲು ಅರ್ಹರಾಗಿರುತ್ತಾರೆ.
ಓದುಗರ ಆಯ್ಕೆ ಸಮೃದ್ಧ ಬೆಳೆ– ಈ ವಿಶೇಷ ಪುಸ್ತಕ ಪ್ರದರ್ಶನ ವಿಭಾಗದಲ್ಲಿ ಕೆಲವು ಜನಪ್ರಿಯ ಕೃತಿಗಳಿಗೆ ಶೇ.15%ರಷ್ಟು ರಿಯಾಯಿತಿಯನ್ನು ನವೆಂಬರ್ ತಿಂಗಳಿನಾದ್ಯAತ ನಮ್ಮ ಎಲ್ಲಾ ಶಾಖೆಗಳಲ್ಲೂ ನೀಡಲಾಗುತ್ತದೆ.
ಸಪ್ನ ಪ್ರಕಟಣೆಗಳಿಗೆ ಶೇ. 20% ರಿಯಾಯಿತಿ– ನವೆಂಬರ್ ತಿಂಗಳಿನಾದ್ಯAತ ಸಪ್ನ ಪ್ರಕಟಿಸಿರುವ ತನ್ನ ಎಲ್ಲಾ ಕನ್ನಡ ಪ್ರಕಟಣೆಗಳಿಗೆ ಶೇ.20% ವಿಶೇಷ ರಿಯಾಯಿತಿಯನ್ನು ಎಲ್ಲಾ ಶಾಖೆಗಳಲ್ಲೂ ನೀಡಲಾಗುವುದು.
ರಾಜ್ಯೋತ್ಸವದ ವಿಶೇಷ ಕಾರ್ಯಕ್ರಮಗಳು– ನವೆಂಬರ್ ತಿಂಗಳಿನ ಪ್ರತಿ ಶನಿವಾರ ಮತ್ತು ಭಾನುವಾರಗಳಂದು ಸಪ್ನ ಬುಕ್ ಹೌಸ್ ಕಲಬುರಗಿ ಶಾಖೆಯಲ್ಲಿ ಗ್ರಾಹಕರಿಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…
ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…
ಆರೋಪ ಇರೋರೆಲ್ಲಾ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್ ಖಾಲಿ ಆಗ್ತದೆ ಎಂದು ಲೇವಡಿ ಹಿಂದೆ ಗೋದ್ರಾ ಪ್ರಕರಣದಲ್ಲಿ ಎಫ್ಐಆರ್…
ಕಲಬುರಗಿ: ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಡ ಮಾಡುವ ಅತ್ಯುತ್ತುಮ ಶಿಕ್ಷಕಿ ವಾರ್ಷಿಕ ಪ್ರಶಸ್ತಿಗೆ ದೇವಾಂಗ ಶಿಕ್ಷಣ…
ಕಲಬುರಗಿ: ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪಾಲಿಕೆ ನೌಕರು ನಡೆಸುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡ ಭಾರತ ಕಮ್ಯುನಿಷ್ಟ ಪಕ್ಷ…
ಕಲಬುರಗಿ: ಇನ್ನರ್ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್ಸಿಟಿ ವತಿಯಿಂದ ನಗರದ ರಾಮತೀರ್ಥ ಮಂದಿರ ಹತ್ತಿರ ನಿರ್ಗತಿಕ ಹಾಗೂ ಕಡುಬಡುವ ಜನರಿಗೆ…