ಬಿಸಿ ಬಿಸಿ ಸುದ್ದಿ

ಮಾಲತಿ ಎಂಬ ಸಮುದಾಯ ಪ್ರಜ್ಞೆ ಮತ್ತು ಕಾರಂತ ಪ್ರಶಸ್ತಿ

YES.,ಈ ಹೆಸರೇ ಕನ್ನಡ ರಂಗಭೂಮಿಯಲ್ಲಿ ಯಾವತ್ತೂ ಸಂಘರ್ಷಮಯದ ಹೆಸರು. ಈ ಸಂಘರ್ಷಶೀಲತೆಯನ್ನು ಅವರು ತಮ್ಮ ಸಾವಿನೊಂದಿಗೆ ಕಟ್ಟಿಕೊಂಡು ಹೋದವರಲ್ಲ. Yes.. ಮಾಲತಿ, ಸಂಘರ್ಷಮಯ ಬದುಕಿನ ಹೋರಾಟಗಳನ್ನೇ ಬದುಕಿನುದ್ದಕ್ಕೂ ಬದುಕಿದವರು. ಸತ್ತಮೇಲೂ ಅವರ ಸಂಘರ್ಷ ಸಾಯಲಿಲ್ಲ. ಅದು ಸಾವಿಲ್ಲದ ಸಂಘರ್ಷ. ಅವರಿಗೆ ಇಹದ ಬಗ್ಗೆ ಅನನ್ಯ ಪ್ರೀತಿ ಇದ್ದುದಕ್ಕೆ ಅದನ್ನಿಲ್ಲೇ ಬಿಟ್ಟು ಹೋಗಿದ್ದಾರೆ. ಪರಲೋಕದ ಪರಿವೆಗಿಂತ ಇಹದಲ್ಲೆ ಎಲ್ಲ ಹುಡುಕಿಕೊಂಡವರು ಅವರು. ಅವರೊಬ್ಬ ರಂಗಕರ್ಮಿ ಮಾತ್ರವಲ್ಲ ಸೃಜನಶೀಲ ಲೇಖಕಿಯೂ ಆಗಿದ್ದರು. ಕನ್ನಡ ಸಾಂಸ್ಕೃತಿಕ ಲೋಕಪ್ರ ಜ್ಞೆಯ ಗಟ್ಟಿಗಿತ್ತಿ ನಮ್ಮ ಮಾಲತಿ.

ಅವರ ಪಾರ್ಥಿವ ಶರೀರ ಇರುವಾಗಲೇ ೦೧.೦೪.೨೦೧೯ ರಂದು ಶುರುವಾದ ಸಾಮಾಜಿಕ ಜಾಲತಾಣಗಳ ಶೀತಲ ಸಮರ., ಮತ್ತೆ ನಿನ್ನೆಯಿಂದ ಚುರುಕುಗೊಂಡಿದೆ. ನಿನ್ನೆಯಷ್ಟೇ ಸರ್ಕಾರ ಸಾಂಸ್ಕೃತಿಕ ಲೋಕದ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಉನ್ನತ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಪ್ರಶಸ್ತಿಗೆ ಭಾಜನರಾದ ಎಲ್ಲರು ಸಾಂಸ್ಕೃತಿಕ ಲೋಕದ ಅನನ್ಯರು ಮತ್ತು ಅಭಿನಂದನಾರ್ಹರು.

ಅಂತೆಯೇ ಅನೇಕ ಗಣ್ಯರು ಅವರನ್ನು ಅಭಿನಂದಿಸಿದ್ದಾರೆ. ಆಧುನಿಕ ರಂಗಭೂಮಿಗೆ ಸಂಬಂಧಿಸಿದಂತೆ ಎಸ್. ಮಾಲತಿ ಅವರಿಗೆ ಬಿ.ವಿ.ಕಾರಂತ ಪ್ರಶಸ್ತಿ ಘೋಷಣೆ ಆಗದಿರುವುದಕ್ಕೆ ಕೆ.ಎಸ್.ವಿಮಲ, ಡಾ.ವಿಜಯಮ್ಮ, ಕಪ್ಪಣ್ಣ, ಸಿ.ಕೆ. ಗುಂಡಣ್ಣ, ಬಾರಿಘಾಟ್, ಮಹಾಮನೆ,ಸಾಸ್ವೆಹಳ್ಳಿ… ಹೀಗೆ ಅನೇಕರು ಮಾಲತಿ ಅವರಿಗೆ ಸರ್ಕಾರ ಕಾರಂತ ಪ್ರಶಸ್ತಿ ಪ್ರಕಟಿಸಬೇಕೆಂದು ಸಾ.ಜಾ.ತಾಣಗಳಲ್ಲಿ ಒತ್ತಾಯಿಸಿರುವುದನ್ನು ನಾನು ಆಯ್ಕೆ ಸಮಿತಿ ಸದಸ್ಯನಾಗಿ ಸ್ವಾಗತಿಸುತ್ತೇನೆ.

ನೆನಪಿರಲಿ; ಆಯ್ಕೆ ಸಮಿತಿಯು ಮರಣೋತ್ತರರನ್ನು ಆಯ್ಕೆ ಮಾಡಿಲ್ಲ. ದಿ: ೦೫.೦೨.೨೦೧೯ ರಂದು ಕಾರಂತ ಪ್ರಶಸ್ತಿಗೆ ಮಾಲತಿ ಅವರ ಹೆಸರನ್ನು ಆಯ್ಕೆ ಮಾಡಿದೆ. ಸುಮಾರು ಆರು ತಿಂಗಳು ತಡವಾಗಿ ಪ್ರಶಸ್ತಿ ಪ್ರಕಟವಾಗಿದೆ. ದಿ೦೧.೦೪.೨೦೧೯ರಂದು ಮಾಲತಿ ನಿಧನರಾದರು. ಸರ್ಕಾರದ ವಿಳಂಬದಿಂದಾಗಿ ಮಾಲತಿ ಅವರು ಪ್ರಶಸ್ತಿ ಪಡೆಯದೇ ನಿರ್ಗಮಿಸಿದರು. ಮರಣೋತ್ತರ ಅವರಿಗೆ ಪ್ರಶಸ್ತಿ ನೀಡುವ ಅವಕಾಶ ಕುರಿತು ಚರ್ಚೆಗಳು ಅಪ್ರಸ್ತುತ. ಏಕೆಂದರೆ ಆಯ್ಕೆ ಸಮಿತಿ ಮರಣೋತ್ತರರನ್ನು ಆಯ್ಕೆ ಮಾಡಿಲ್ಲ.

ಮಾಲತಿ ಮಹಿಳೆ ಎಂಬ ರಿಯಾಯಿತಿಯೂ ಪ್ರಸ್ತಾಪಗೊಳ್ಳಬೇಕಿಲ್ಲ. ಈ ಎಲ್ಲ ರಿಯಾಯಿತಿಗಳನ್ನು ಮೀರಿ ಬೆಳೆದವರು ಮಾಲತಿ. ಕುವೆಂಪು ಅವರಿಗೆ ನಾಡೋಜ ಪ್ರಶಸ್ತಿ ನೀಡಿದ ಅಪರೂಪದ ಸಾಂಸ್ಕೃತಿಕ ಸಂದರ್ಭವನ್ನು ನೆನಪಿಸಿಕೊಳ್ಳುತ್ತಾ…ಮಾಲತಿ ಅವರಿಗು ಮರಣೋತ್ತರ ಎಂದು ಹೆಸರಿಸದೆ ಕಾರಂತ ಪ್ರಶಸ್ತಿ ಸರ್ಕಾರ ಪ್ರಕಟಿಸಬೇಕೆಂದು ಕೋರುತ್ತೇನೆ. ಆ ಮೂಲಕ ಮರಣದ ನಂತರವೂ ಮಾಲತಿ ಅವರ ಹೆಸರಿಗೆ ಸಿಲುಕುತ್ತಿರುವ ಸಂಘರ್ಷದ, ತಳಕಿನ ಕವಲುಗಳಿಗೆ ವಿರಾಮ ದೊರಕಲಿ.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

5 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

7 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

7 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

8 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

8 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

8 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420