ಕಲಬುರಗಿ: ಚುನಾವಣೆಗೆ ನಿಲ್ಲುವವವರಿ ಗೆ(ಡಿಪೋಸಿಟ್) ಠೇವಣಿ ಹಣ ಹೆಚ್ಚು ಮಾಡುತ್ತಿರುವುದು ಸೂಕ್ತವಲ್ಲ. ಈ ನಿರ್ಧಾರ ಪ್ರತಿಭಾವಂತರಿಗೆ ಅವಕಾಶ ವಂಚಿತರಾಗುತ್ತಾರೆ ಎಂದು ಕಸಾಪ ರಾಜ್ಯಾಧ್ಯಕ್ಷ ಡಾ.ಮಹೇಶ ಜೋಶಿಗೆ ಕಲಬುರಗಿ ಕಸಾಪ ನಿ.ಪೂ.ತಾಲೂಕು ಅಧ್ಯಕ್ಷ ಸಿ.ಎಸ್.ಮಾಲಿಪಾಟೀಲ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರ ಬರೆದಿರುವ ಅವರು ಕಸಾಪ ಅವಧಿಯನ್ನು ಐದು ವರ್ಷ ಮಾಡಿದ್ದನ್ನು ಮೊದಲಿನಂತೆ ಮೂರು ವರ್ಷಕೆ ತರುವುದು ಸೂಕ್ತ, ಕಸಾಪ ಸದಸ್ಯರಾಗ ಬಯಸಿದವರಿಗೆ ಸದಸ್ಯತ್ವ ಶುಲ್ಕದಲ್ಲಿ ರೂ.250/ ಕೆ ಇಳಿ ಸುವುದು, ಅಧ್ಯಕ್ಷ ಸ್ಥಾನಕ್ಕೆ ನಿಲ್ಲುವವರಿಗೆ ಒಂದು ಬಾರಿ ಅವಕಾಶ ಮಾತ್ರ ಮಾಡುವುದು(ರಾಜ್ಯದಂತೆ).
ಮುಂದಿನ ಚುನಾವಣೆಯು ರಾಜ್ಯ,ಜಿಲ್ಲಾ,ತಾಲೂಕು ಮಟ್ಟದಲ್ಲಿ ನಡೆಯುವಂತೆ ಅವಕಾಶ ಮಾಡಿಕೊಡುವುದು, ಕಸಾಪ ಅಧ್ಯಕ್ಷ ಸ್ಥಾನಕ್ಕೆ ನಿಲ್ಲುವವರಿಗೆ ಕಡ್ಡಾಯವಾಗಿ ರಾಜ್ಯದವರು ಸೃಜನಾತ್ಮಕವಾಗಿ 5 ಕೃತಿಗಳನ್ನು ಬರೆದವರಿಗೆ.ಜಿಲ್ಲಾ ಮಟ್ಟದವರಿಗೆ 3 ಕೃತಿಗಳು.ತಾಲೂಕು ಮಟ್ಟದವರಿಗೆ1ಕೃತಿ ಕಡ್ಡಾಯವಾಗಿ ಬರೆದಿರುವಂತೆ ನಿಯಮ ತರುವುದು, ಜಿಲ್ಲಾ ಮಟ್ಟದ ಸಮ್ಮೇಳನಕ್ಕೆ ಈಗ ಕೊಡುತ್ತಿರುವ ಅನುದಾನದಲ್ಲಿ ರೂ. 5 ಲಕ್ಷ ದಿಂದ 8 ಲಕ್ಷಕ್ಕೆ ಏರಿಸುವುದು ತಾಲೂಕಿಗೆ 1ಲಕ್ಷದಿಂದ 4ಲಕ್ಷಕ್ಕೆ ಏರಿಸುವುದು. ಆಯಾವಲಯಗಳಿಗೆ ಕಡಿಮೆ ಎಂದರು 50 ಸಾವಿರ ರೂಪಾಯಿಗಳ ಅನುದಾನ ನೀಡಿದಲ್ಲಿ ಯಾವುದೇ ಸಮ್ಮೇಳನಗಳುವ್ಯ ವಸ್ಥಿತವಾಗಿ ನಡೆಯಲು ಸಾಧ್ಯವಾಗಬಹುದು.
ಕಸಾಪ ಅಧ್ಯಕ್ಷರುಗಳಿಗೆ ಕರ್ನಾಟಕ ಸುತ್ತಾಡಲು ಉಚಿತವಾದ ಸರಕಾರದಿಂದ ಪಾಸ್ ಸೌಲಭ್ಯ ಒದಗಿಸಿಕೊಡುವ ನಿಯಮ ತರಬೇಕು. ವರ್ಷಕ್ಕೆ ನಿರ್ವಹಣಾ ವೆಚ್ಚ ಅಧಿಕಗೊಳಿಸುವುದು ಸೂಕ್ತ. ರಾಜ್ಯದ ಯಾವುದೇ ಜಿಲ್ಲಾ ಅಧ್ಯಕ್ಷರು ಉತ್ತಮವಾಗಿ ಸಭೆ ಸಮಾರಂಭಗಳು, ಸಮ್ಮೇಳನಗಳು ನಡೆಸಿದ ಅಭಿಪ್ರಾಯವನ್ನು ಜನ ಮೆಚ್ಚುಗೆ ಪಡೆದರೆ ಅಂತಹವರಿಗೆ ರಾಜ್ಯಮಟ್ಟದ ಪ್ರಶಸ್ತಿ ಹಾಗೂ ನಗದು ಪುರಸ್ಕಾರವನ್ನು ನೀಡಿ ಗೌರವಿಸುವ ಕೆಲಸ ರಾಜ್ಯಾಧ್ಯಕ್ಷರಿಂದ ನಡೆಯ ಬೇಕೆಂದು ನಿಯಮದಲ್ಲಿತ್ತಿ ದ್ದುಪಡೆಗೆ ತರುವುದು. ಇನ್ನೂ ಮುಂದೆ ಕಸಾಪ ಚುನಾವಣೆಗೆ ಆಗುವ ಹಣದ ಖರ್ಚು ವೆಚ್ಚಗಳನ್ನು ಮಿತಗೊಳಿಸಿ ಚುನಾವಣೆ ನಡೆಯುವಂತೆ (app) ಅಯಪ್ ತರುವ ವ್ಯವಸ್ಥೆ ಮಾಡುವುದುಗಾಗಿ ಒತ್ತಾಯಿಸಿದ್ದಾರೆ.
ಬಸವಕಲ್ಯಾಣ: ವಿಕಲಚೇತನರು ತಮ್ಮ ಅಂಗವಿಕಲತೆ ಬಗ್ಗೆ ಅಗೌರವ ತಾಳಲಾರದೇ,ಅನುಕಂಪ ತೋರಿಸದೇ ಸ್ವ ಪ್ರತಿಭೆ ಹೊಂದಿದ ಅವರಿಗೆ ಮೂಲಭೂತ ಸೌಲಭ್ಯ ಗಳನ್ನು…
ಕಲಬುರಗಿ: ಸ್ಥಾಪಿತ ಸಿದ್ಧಾಂತ ಹೊಡೆದು ಹಾಕಿ ಅವೈದಿಕ ವಚನ ಸಾಹಿತ್ಯವನ್ನು ಜನಮಾನಸಕ್ಕೆ ಮುಟ್ಟಿಸಿದ ಡಾ.ಎಂ.ಎಂ.ಕಲಬುರ್ಗಿ ಯವರು ಸತ್ಯದ ಸಂಶೋಧಕರಾಗಿದ್ದರು ಎಂದು…
ಕಲಬುರಗಿ: ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಗುರುವಾರ ಸಂಜೆ ತಮ್ಮ ಹುಟ್ಟು ಹಬ್ಬವನ್ನು ಕಲಬುರಗಿ ನಗರದ ಆಳಂದ ನಾಕಾ ರಸ್ತೆಯಲ್ಲಿರುವ…
ಕಲಬುರಗಿ; ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಾದ ಪಹಣಿಗೆ ಆಧಾರ್ ಜೋಡಣೆ ಮತ್ತು ಸರ್ಕಾರಿ ಜಮೀನುಗಳ ಸಂರಕ್ಷಣೆಯ ಲ್ಯಾಂಡ್ ಬೀಟ್ ಅಪ್ಲಿಕೇಶನ್ ನಲ್ಲಿ…
ಸುರಪುರ: ಹಿಂದಿನ ಕಾಲದಲ್ಲಿ ಅನೇಕ ಜನ ರಾಜರು ಸ್ವತಃ ತಾವೇ ಪಾರಂಪರಿಕ ವೈದ್ಯರಾಗಿದ್ದು ಬೇಟೆಗೆ ಹೋದ ಸಂದರ್ಭದಲ್ಲಿ ತಾವೇ ಮದ್ದು…
ಸುರಪುರ: ಸಾರ್ವಜನಿಕರು ತಮ್ಮ ಕೆಸಲ ಕಾರ್ಯಗಳಿಗಾಗಿ ಕಚೇರಿಗೆ ಬಂದಾಗ ವಿಳಂಬ ಮಾಡದೆ ನ್ಯಾಯಯುತವಾದ ಅರ್ಜಿಗಳ ಕೆಲಸ ಮಾಡಿಕೊಡುವಂತೆ ಕರ್ನಾಟಕ ಲೋಕಾಯುಕ್ತ…