ಕಸಾಪ ರಾಜ್ಯಾಧ್ಯಕ್ಷ ಡಾ.‌ಮಹೇಶ ಜೋಶಿಯವರಿಗೆ ಸಿ.ಎಸ್. ಮಾಲಿಪಾಟೀಲ ಮನವಿ

0
39

ಕಲಬುರಗಿ: ಚುನಾವಣೆಗೆ ನಿಲ್ಲುವವವರಿ ಗೆ(ಡಿಪೋಸಿಟ್) ಠೇವಣಿ ಹಣ ಹೆಚ್ಚು ಮಾಡುತ್ತಿರುವುದು ಸೂಕ್ತವಲ್ಲ. ಈ ನಿರ್ಧಾರ ಪ್ರತಿಭಾವಂತರಿಗೆ ಅವಕಾಶ ವಂಚಿತರಾಗುತ್ತಾರೆ ಎಂದು ಕಸಾಪ ರಾಜ್ಯಾಧ್ಯಕ್ಷ ಡಾ.‌ಮಹೇಶ ಜೋಶಿಗೆ ಕಲಬುರಗಿ ಕಸಾಪ ನಿ.ಪೂ.ತಾಲೂಕು ಅಧ್ಯಕ್ಷ ಸಿ.ಎಸ್.ಮಾಲಿಪಾಟೀಲ ಮನವಿ ಮಾಡಿದ್ದಾರೆ.

ಈ ಕುರಿತು ಪತ್ರ ಬರೆದಿರುವ ಅವರು  ಕಸಾಪ ಅವಧಿಯನ್ನು ಐದು ವರ್ಷ ಮಾಡಿದ್ದನ್ನು ಮೊದಲಿನಂತೆ ಮೂರು ವರ್ಷಕೆ ತರುವುದು ಸೂಕ್ತ, ಕಸಾಪ ಸದಸ್ಯರಾಗ ಬಯಸಿದವರಿಗೆ ಸದಸ್ಯತ್ವ ಶುಲ್ಕದಲ್ಲಿ ರೂ.250/ ಕೆ ಇಳಿ ಸುವುದು, ಅಧ್ಯಕ್ಷ ಸ್ಥಾನಕ್ಕೆ ನಿಲ್ಲುವವರಿಗೆ ಒಂದು ಬಾರಿ ಅವಕಾಶ ಮಾತ್ರ ಮಾಡುವುದು(ರಾಜ್ಯದಂತೆ).

Contact Your\'s Advertisement; 9902492681

ಮುಂದಿನ ಚುನಾವಣೆಯು ರಾಜ್ಯ,ಜಿಲ್ಲಾ,ತಾಲೂಕು ಮಟ್ಟದಲ್ಲಿ ನಡೆಯುವಂತೆ ಅವಕಾಶ ಮಾಡಿಕೊಡುವುದು, ಕಸಾಪ ಅಧ್ಯಕ್ಷ ಸ್ಥಾನಕ್ಕೆ ನಿಲ್ಲುವವರಿಗೆ ಕಡ್ಡಾಯವಾಗಿ ರಾಜ್ಯದವರು ಸೃಜನಾತ್ಮಕವಾಗಿ 5 ಕೃತಿಗಳನ್ನು ಬರೆದವರಿಗೆ.ಜಿಲ್ಲಾ ಮಟ್ಟದವರಿಗೆ 3 ಕೃತಿಗಳು.ತಾಲೂಕು ಮಟ್ಟದವರಿಗೆ1ಕೃತಿ ಕಡ್ಡಾಯವಾಗಿ ಬರೆದಿರುವಂತೆ ನಿಯಮ ತರುವುದು, ಜಿಲ್ಲಾ ಮಟ್ಟದ ಸಮ್ಮೇಳನಕ್ಕೆ ಈಗ ಕೊಡುತ್ತಿರುವ ಅನುದಾನದಲ್ಲಿ ರೂ. 5 ಲಕ್ಷ ದಿಂದ 8 ಲಕ್ಷಕ್ಕೆ ಏರಿಸುವುದು ತಾಲೂಕಿಗೆ 1ಲಕ್ಷದಿಂದ 4ಲಕ್ಷಕ್ಕೆ ಏರಿಸುವುದು. ಆಯಾವಲಯಗಳಿಗೆ ಕಡಿಮೆ ಎಂದರು 50 ಸಾವಿರ ರೂಪಾಯಿಗಳ ಅನುದಾನ ನೀಡಿದಲ್ಲಿ ಯಾವುದೇ ಸಮ್ಮೇಳನಗಳುವ್ಯ ವಸ್ಥಿತವಾಗಿ ನಡೆಯಲು ಸಾಧ್ಯವಾಗಬಹುದು.

ಕಸಾಪ ಅಧ್ಯಕ್ಷರುಗಳಿಗೆ ಕರ್ನಾಟಕ ಸುತ್ತಾಡಲು ಉಚಿತವಾದ ಸರಕಾರದಿಂದ ಪಾಸ್ ಸೌಲಭ್ಯ ಒದಗಿಸಿಕೊಡುವ ನಿಯಮ ತರಬೇಕು. ವರ್ಷಕ್ಕೆ ನಿರ್ವಹಣಾ ವೆಚ್ಚ ಅಧಿಕಗೊಳಿಸುವುದು ಸೂಕ್ತ. ರಾಜ್ಯದ ಯಾವುದೇ ಜಿಲ್ಲಾ ಅಧ್ಯಕ್ಷರು ಉತ್ತಮವಾಗಿ ಸಭೆ ಸಮಾರಂಭಗಳು, ಸಮ್ಮೇಳನಗಳು ನಡೆಸಿದ ಅಭಿಪ್ರಾಯವನ್ನು ಜನ ಮೆಚ್ಚುಗೆ ಪಡೆದರೆ ಅಂತಹವರಿಗೆ ರಾಜ್ಯಮಟ್ಟದ ಪ್ರಶಸ್ತಿ ಹಾಗೂ ನಗದು ಪುರಸ್ಕಾರವನ್ನು ನೀಡಿ ಗೌರವಿಸುವ ಕೆಲಸ ರಾಜ್ಯಾಧ್ಯಕ್ಷರಿಂದ ನಡೆಯ ಬೇಕೆಂದು ನಿಯಮದಲ್ಲಿತ್ತಿ ದ್ದುಪಡೆಗೆ ತರುವುದು. ಇನ್ನೂ ಮುಂದೆ ಕಸಾಪ ಚುನಾವಣೆಗೆ ಆಗುವ ಹಣದ ಖರ್ಚು ವೆಚ್ಚಗಳನ್ನು ಮಿತಗೊಳಿಸಿ ಚುನಾವಣೆ ನಡೆಯುವಂತೆ (app) ಅಯಪ್ ತರುವ ವ್ಯವಸ್ಥೆ ಮಾಡುವುದುಗಾಗಿ ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here