ಕುರುಬ ಸಮುದಾಯದ ಏಳ್ಗೆಗಾಗಿ ಶ್ರಮಿಸಿ: ಮಹಾಂತೇಶ ಕೌಲಗಿ

ಶಹಾಬಾದ:ಕುರುಬ ಸಮುದಾಯದ ಎಲ್ಲಾ ಜನರು ಒಂದಾಗಿ ಸಮಾಜದ ಏಳ್ಗೆಗಾಗಿ ಶ್ರಮಿಸಿ ಎಂದು ಗೊಂಡ ಕುರುಬ ಸಂಘದ ಅಧ್ಯಕ್ಷ ಮಹಾಂತೇಶ ಕೌಲಗಿ ಹೇಳಿದರು.

ಅವರು ಸೋಮವಾರ ನಗರದ ಮರಗೋಳ ಕಾಲೇಜಿನ ಬಳಿಯ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಆಯೋಜಿಸಲಾದ ಗೊಂಡ ಕುರುಬ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಪದಾಧಿಕಾರಿಗಳು ಆಯ್ಕೆಯಾದ ನಂತರ ಸಮಾಜದ ಏಳ್ಗೆಗೆ ಸದಾಕಾಲ ಶ್ರಮಿಸಬೇಕು.ಸಮಾಜದ ಜನರನ್ನು ಸರಿಯಾದ ದಿಕ್ಕಿಗೆ ಸಾಗಲು ಪ್ರೇರೇಪಿಸಬೇಕು.ಅಲ್ಲದೇ ಸಮುದಾಯದ ಮಕ್ಕಳು ಒಳ್ಳೆಯ ಶಿಕ್ಷಣ ಪಡೆಯಬೇಕು.ಶೈಕ್ಷಣಿಕವಾಗಿ,ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಮುಂದೆ ಬರುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳು ನಡೆಯಬೇಕಾಗಿದೆ.ಅದಕ್ಕಾಗಿ ಸಮುದಾಯದಲ್ಲಿ ಯಾವುದೇ ಭಿನ್ನಾಭಿಪ್ರಾಯ ಬಾರದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ.ಎಲ್ಲರೂ ಒಂದಾಗಿ, ಇತರ ಸಮಾಜದೊಂದಿಗೆ ಒಳ್ಳೆಯ ರೀತಿಯಲ್ಲಿ ಬೆರೆಯೋಣ ಎಂದರು.

ಮಲ್ಲಿಕಾರ್ಜುನ ಪೂಜಾರಿ ಭಂಕೂರ ಮಾತನಾಡಿದರು. ಕುರುಬ ಸಮಾಜದ ಮುಖಂಡ ನಿಂಗಪ್ಪ ಹೇರೂರ್, ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಜಿಲ್ಲಾ ಗೌರವ ಅಧ್ಯಕ್ಷ ಡಿ.ಸಿ. ಹೊಸಮನಿ, ರೇವಣಸಿದ್ದಪ್ಪ ಹರಸೂರ, ನಿಂಗಣ್ಣ ಪೂಜಾರಿ ಇವರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು.

ತಾಲೂಕು ಅಧ್ಯಕ್ಷ-ಸಾಯಬಣ್ಣ ಕೊಲ್ಲೂರ್, ಗೌರವ ಅಧ್ಯಕ್ಷ-ದಶರಥ ಗಿರಿಣಿ, ಕಾರ್ಯಧ್ಯಕ್ಷರಾದ- ಸುರೇಶ ಕುಂಟನ,ಶಿವಾಜಿ ಧರೆಪಗೋಳ, ಉಪಾಧ್ಯಕ್ಷರಾದ- ಹುಣಚಪ್ಪ ಮರತೂರ, ವಿಜಯಕುಮಾರ್ ಮುಗಳನಾಗಾವ,ಸಂತೋ? ಪೂಜಾರಿ, ಬಸವರಾಜ ಮುಡಬುಳ ಹಾಗೂ ಶಿವಾನಂದ ಹಳೆ ಶಹಾಬಾದ, ಪ್ರಧಾನ ಕಾರ್ಯದರ್ಶಿ- ಸದಾಶಿವ ಮದ್ರಿಕಿ, ಖಂಜಾಚಿ- ಶಿವುಕುಮಾರ ತರನಳ್ಳಿ, ಸಹಕಾರ್ಯದರ್ಶಿ-ಭೂತಳಿ ಪೂಜಾರಿ,ಆಕಾಶ ಹಳೆ ಶಹಾಬಾದ, ಭೀಮಾಶಂಕರ ಕಡಿಹಳ್ಳಿ, ಸಂಘಟನೆ ಕಾರ್ಯದರ್ಶಿಗಳಾದ- ಯಲ್ಲಾಲಿಂಗ ಕರಗಾರ, ಯಲ್ಲಾಲಿಂಗ ನಾಗೂರೆ,ಶಿವುಕುಮಾರ ಶಂಕರವಾಡಿ,ದೇವಿಂದ್ರಪ್ಪ ಭಂಕೂರ,ಮಹೇಶ ಕಡೆಹಳ್ಳಿ, ಸಿದ್ದಪ್ಪ ಮುತ್ತಗಿ, ಮಲಗೊಂಡ ತರನಳ್ಳಿ ನೇಮಕ ಮಾಡಲಾಯಿತು.

ಈ ಸಭೆಯಲ್ಲಿ ಮುಖಂಡರಾದ ಸುನೀಲ ಪೂಜಾರಿ, ಮಂಜುನಾಥ ದೊಡ್ಡಮನಿ, ವಿಜಯಕುಮಾರ ಕಂಟಿಕಾರ, ಸಂಗಪ್ಪ ಕಂಟಿಕಾರ, ಮಲ್ಲು ಜಡಿ ಇತರರು ಇದ್ದರು.

emedialine

Recent Posts

ನಾನು ಆಕಾಂಕ್ಷಿ ಅಧ್ಯಕ್ಷ ಸ್ಥಾನ ಸಿಗುವ ವಿಶ್ವಾಸವಿದೆ; ಕೋರವಿ

ಕಾಳಗಿ: ಈ ಹಿಂದೆ ಕೇಳಿ ಬಂದ ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಬದಲಾವಣೆ ಮಾಡಲು ಪಕ್ಷ ಕೈಗೊಂಡ…

33 mins ago

ಸದ್ಗುಣ ಮೈಗೂಡಿಸಿ ಪ್ರಗತಿಪರ ಬದುಕು ಕಟ್ಟೋಣ : ಬಸವರಾಜ್ ಪಾಟೀಲ್ ಸೇಡಂ

ಕಲಬುರಗಿ: ಜೀವನದಲ್ಲಿ ಎದುರಾಗುವ ಅರಿಷಡ್ ವೈರಿಗಳನ್ನು ಗೆದ್ದು ಉತ್ತಮ ಬದುಕು ಕಟ್ಟಿದರೆ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮಾಜಿ ಲೋಕಸಭಾ…

2 hours ago

ನಾಡಹಬ್ಬ ಆಚರಣೆ ಅಂಗವಾಗಿ ನಾಡ ದೇವತೆ ಸ್ತಬ್ಧ ಚಿತ್ರಗಳ ಮೆರವಣಿಗೆ

ಸುರಪುರ: ಕನ್ನಡ ಸಾಹಿತ್ಯ ಸಂಘ ಸುರಪುರ ಹಾಗೂ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ವತಿಯಿಂದ 38ನೇ ನಾಡಹಬ್ಬ ಉತ್ಸವಾಚರಣೆ ಅಂಗವಾಗಿ ನಗರದ…

16 hours ago

ವೀರಪ್ಪ ನಿಷ್ಠಿ ಕಾಲೇಜ್ ಮಹಾತ್ಮ ಗಾಂಧಿಜಿ ಲಾಲ್ ಬಹದ್ದೂರ ಶಾಸ್ತ್ರಿ ಜಯಂತಿ

ಸುರಪುರ: ನಗರದ ಶ್ರೀ. ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಸಮೂಹ ಸಂಸ್ಥೆಗಳ ಅಡಿಯಲ್ಲಿ ನಡೆದ…

16 hours ago

ಲೈಂಗಿಕ ದೌರ್ಜನ್ಯ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ 8ಕ್ಕೆ ಸುರಪುರ ಬಂದ್

ಸುರಪುರ: ಕೊಡೇಕಲ್ ಗ್ರಾಮದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಇದೇ ಅಕ್ಟೋಬರ್ 8 ರಂದು ಸುರಪುರ ಬಂದ್…

16 hours ago

ಗರ್ಭಿಣಿ ಮಹಿಳೆಯರಿಗೆ ಹಣ್ಣು ಹಂಪಲು ವಿತರಣೆ

ಕಲಬುರಗಿ:  ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ್ ಎಸ್ ಕಿಳ್ಳಿ ರವರ ಜನ್ಮ ದಿನದ ಆಂಗವಾಗಿ ಶ್ರೀನಿವಾಸ ಸರಡಗಿ…

16 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420