ಶ್ರೀಲಂಕಾಕ್ಕಿಂತ ದೊಡ್ಡ ಪ್ರದೇಶ ಕಲ್ಯಾಣ ಕರ್ನಾಟಕ: ಬಿದರಿ

ಕಕ ಯುವ ಸೇನೆ ದಶಮಾನೋತ್ಸವ: ಪತ್ರಕರ್ತ ಪ್ರಕಾಶ ದೊರೆ ಸೇರಿ ಹಲವರಿಗೆ ಕ.ಕ ಸೇವಾ ರತ್ನ ಪ್ರಶಸ್ತಿ ಪ್ರದಾನ

ಶಹಾಪುರ: ಕಲ್ಯಾಣ ಕರ್ನಾಟಕ ಭವ್ಯ ಪರಂಪರೆ ಹೊಂದಿದ ಮತ್ತು ಅಪಾರ ಸಂಪನ್ಮೂಲ ಹೊಂದಿದ ಪ್ರದೇಶವಾಗಿದ್ದು, ಶ್ರೀಲಂಕಾ ದೇಶಕ್ಕಿಂತ ದೊಡ್ಡ ಪ್ರದೇಶ ಕಲ್ಯಾಣ ಕರ್ನಾಟಕವಾಗಿದೆ ಮತ್ತು ಸಂಪನ್ಮೂಲದಲ್ಲೂ ಶ್ರೀಲಂಕಾಕ್ಕಿಂತ ಮುಂದಿದೆ ಎಂದು ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಶಂಕರ ಬಿದರಿ ತಿಳಿಸಿದರು.

ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ಕಲ್ಯಾಣ ಕರ್ನಾಟಕ ಯುವ ಸೇನೆಯ ದಶಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಲವಾರು ಜನ ಸಾಧು ಸಂತರು ಶರಣರು ಜನ್ಮ ತಾಳಿ ಹೋಗಿದ್ದಾರೆ, ಇಂತಹ ಮಹತ್ವದ ಪ್ರದೇಶ ಹಿಂದುಳಿದಿರುವದು ದುರಂತ. ಈ ಪ್ರದೇಶದ ಅಭಿವೃದ್ಧಿಗೆ ಸಾಕಷ್ಟು ಪೂರಕ ಯೋಜನೆಗಳು ತಂದರೂ ಸಮರ್ಪಕವಾಗಿ ಅನುಷ್ಠಾನಗೊಳ್ಳದ ಕಾರಣ ಹಿಂದುಳಿಯುವಿಕೆಗೆ ಕಾರಣವಿರಬಹುದೇನು ಗೊತ್ತಿಲ್ಲ.

ಪತ್ರಕರ್ತ ಪ್ರಕಾಶ ದೊರೆ ಸೇರಿ ಹಲವರಿಗೆ ಕಲ್ಯಾಣ ಕರ್ನಾಟಕ ಸೇವಾ ರತ್ನ ಪ್ರಶಸ್ತಿ ಪ್ರದಾನ: ಇದೇ ಸಂದರ್ಭದಲ್ಲಿ ಪ್ರಕಾಶಗೌಡ ಬೆದವಟ್ಟಿ ಡಾ.ಅಂಬಾರಾಯ ಎಸ್. ರುದ್ರವಾಡಿ, ಡಾ.ಸಿದ್ದು ಪಾಟೀಲ್ ಜೇವರ್ಗಿ, ಡಾ.ಅಪರ್ಣಾ ಬಸವಕಲ್ಯಾಣ, ಪ್ರಕಾಶ ದೊರೆ, ಡಾ.ಸಂತೋಷ ಕಾಳೆ, ಶರಣಗೌಡ ಕರಡ್ಡಿ, ನರಸಿಂಹನಾಯಕ, ಭಾಗ್ಯ ದೊರೆ, ಸುಷ್ಮಾ ಶೀಲವಂತ ಅವರಿಗೆ ಕಲ್ಯಾಣ ಕರ್ನಾಟಕ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಆದರೆ ಈ ಪ್ರದೇಶವನ್ನು ಆಳಿ ಹೋದ ರಾಷ್ಟ್ರಕೂಟರು, ಬಹಮನಿ ಸುಲ್ತಾನರು, ಸುರಪುರ ಪಿಡ್ಡ ನಾಯಕರು ಹೀಗೆ ರಾಜರ ದೊಡ್ಡ ಇತಿಹಾಸವೇ ಇದೆ. ಅಲ್ಲದೆ ಹಿಂದೆ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ರಥ ಯಾತ್ರೆ ನಡೆದ ಸಂದರ್ಭದಲ್ಲಿ ರಾಜ್ಯದ ಹಲವಡೆ ಗಲಭೆ, ಗಲಾಟೆಗಳು ಜರುಗಿದವು, ಆದರೆ ಕಕ ಭಾಗದಲ್ಲಿ ಮುಸ್ಲಿಂ, ಹಿಂದೂಗಳು ಮತ್ತು ಇತರೆ ಧರ್ಮದವರು ಇದ್ದರೂ ಯಾವುದೇ ಗಲಭೆಗಳಿಗೆ ಸಾಕ್ಷಿಯಾಗಲಿಲ್ಲ. ಇಲ್ಲಿನ ಜನರಲ್ಲಿ ಸೌಹಾರ್ದತೆ ಮೇಳೈಸಿದೆ ಎಂದರು.

ಕಕಯುವ ಸೇನೆ ಈ ಭಾಗದ ಅಭೀವೃದ್ಧಿಗೆ ಸಾಕಷ್ಟು ಹೋರಾಟಗಳನ್ನು ಮಾಡುತ್ತಾ ಬಂದಿದೆ. ಸೇನೆಯ ರಾಜ್ಯಧ್ಯಕ್ಷ ಮತ್ತು ತಂಡದವರಿಗೆ ಕೃತಜ್ಞತೆಗಳನ್ನು ಅರ್ಪಿಸಿದರು.

ಸುರಪುರ ಶಾಸಕ ರಾಜೂಗೌಡ ಮಾತನಾಡಿ, ಕನ್ನಡ ಪರ ಸಂಘಟನೆ, ಕನ್ನಡಪರ ಹೋರಾಟಗಾರರು ಇರುವದರಿಂದಲೇ ಇಂದಿಗೂ ನಮ್ಮ ನೆಲ, ಜಲ ಮತ್ತು ಕನ್ನಡ ಭಾಷೆ ಉಳಿದದೆ. ಕನ್ನಡತನ ಉಳಿದು ಕೊಂಡಿದೆ. ಕನ್ನಡಕ್ಕೆ ಧಕ್ಕೆ ಬಂದಾಗ ಕನ್ನಡ ಸಂಘಟನೆಗಳ ಜೊತೆಗೆ ನಾವು ಇರುತ್ತೇವೆ.

ನಮ್ಮ ತಾಯಿ ಗೌರವಕ್ಕೆ ಧಕ್ಕೆ ಬಂದಾಗ ನಾವೆಲ್ಲರೂ ಒಂದೇ. ಸದಾ ಕನ್ನಡತನಕ್ಕೆ ಅವಮಾನ ಮಾಡುವ ಎಂಇಎಸ್ ಸಂಘಟನೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೆ ಕನ್ನಡಕ್ಕಾಗಿ ಹೋರಾಟ ಮಾಡಿದ ಕನ್ನಡಿಗರ ಮೇಲೆ ಐಪಿಸಿ ಕಲಂ 307 ಸೇರಿದಂತೆ ಕೊಲೆ ಪ್ರಕರಣಗಳು ಹಾಕಿರುವದು ಸರಿಯಲ್ಲ. ಈ ಕುರಿತು ಸಿಎಂ ಹಾಗೂ ಗೃಹ ಸಚಿವರ ಜೊತೆ ಚರ್ಚಿಸಿ ಇಂತಹ ಸುಳ್ಳು ಪ್ರಕರಣಗಳ ರದ್ದತಿಗೆ ಮನವಿ ಮಾಡುವದಾಗಿ ತಿಳಿಸಿದರು.

ಶಾಸಕ ಶರಣಬಸಪ್ಪಗೌಡ ದರ್ಶನಪುರ, ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ, ಕೆಂಚಪ್ಪ ನಗನೂರ, ಭೀಮಾಶಂಕರ ಬಿಲ್ಲವ್, ಗುರು ಕಾಮಾ, ಶಾಂತಪ್ಪ ಕಟ್ಟಿಮನಿ, ಬಸವರಾಜ ಹಿರೇಮಠ, ಬಸವರಾಜ ಪಡಕೋಟೆ, ಸಣ್ಣ ನಿಂಗಪ್ಪ ನಾಯ್ಕೋಡಿ ಸೇರಿದಂತೆ ಸೇನೆ ರಾಜ್ಯಧ್ಯಕ್ಷ ಅಮರೀಶ ಬಿಲ್ಲವ್ ಉಪಸ್ಥಿತರಿದ್ದರು. ಶರಣು ಗದ್ದುಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸೇನೆ ಜಿಲ್ಲಾಧ್ಯಕ್ಷ ಭೀಮಾಶಂಕರ ಕಟ್ಟಿಮನಿ ಸ್ವಾಗತಿಸಿದರು.ರಾತ್ರಿ 12 ಗಂಟೆವರೆಗೂ ಝೀ ಟವಿ ಕಲಾವಿದರ ತಂಡದಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.

emedialine

Recent Posts

ನಾಡಹಬ್ಬ ಆಚರಣೆ ಅಂಗವಾಗಿ ನಾಡ ದೇವತೆ ಸ್ತಬ್ಧ ಚಿತ್ರಗಳ ಮೆರವಣಿಗೆ

ಸುರಪುರ: ಕನ್ನಡ ಸಾಹಿತ್ಯ ಸಂಘ ಸುರಪುರ ಹಾಗೂ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ವತಿಯಿಂದ 38ನೇ ನಾಡಹಬ್ಬ ಉತ್ಸವಾಚರಣೆ ಅಂಗವಾಗಿ ನಗರದ…

13 hours ago

ವೀರಪ್ಪ ನಿಷ್ಠಿ ಕಾಲೇಜ್ ಮಹಾತ್ಮ ಗಾಂಧಿಜಿ ಲಾಲ್ ಬಹದ್ದೂರ ಶಾಸ್ತ್ರಿ ಜಯಂತಿ

ಸುರಪುರ: ನಗರದ ಶ್ರೀ. ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಸಮೂಹ ಸಂಸ್ಥೆಗಳ ಅಡಿಯಲ್ಲಿ ನಡೆದ…

13 hours ago

ಲೈಂಗಿಕ ದೌರ್ಜನ್ಯ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ 8ಕ್ಕೆ ಸುರಪುರ ಬಂದ್

ಸುರಪುರ: ಕೊಡೇಕಲ್ ಗ್ರಾಮದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಇದೇ ಅಕ್ಟೋಬರ್ 8 ರಂದು ಸುರಪುರ ಬಂದ್…

13 hours ago

ಗರ್ಭಿಣಿ ಮಹಿಳೆಯರಿಗೆ ಹಣ್ಣು ಹಂಪಲು ವಿತರಣೆ

ಕಲಬುರಗಿ:  ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ್ ಎಸ್ ಕಿಳ್ಳಿ ರವರ ಜನ್ಮ ದಿನದ ಆಂಗವಾಗಿ ಶ್ರೀನಿವಾಸ ಸರಡಗಿ…

13 hours ago

ಮಹಾತ್ಮ ಗಾಂಧೀಜಿಯವರ ತತ್ವಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು

ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರ್ಗಿ ಮತ್ತು ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರ್ಗಿಯ ಎನ್.ಎಸ್. ಎಸ್ ಘಟಕದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾತ್ಮ…

13 hours ago

ಜುಡೋಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

ಕಲಬುರಗಿ: ಶಾಲಾ ಶಿಕ್ಷಣ ಇಲಾಖೆ ಕರ್ನಾಟಕ ರಾಜ್ಯಮಟ್ಟದ ಶಾಲಾ ಮಕ್ಕಳ ಆಟೊಗಳ ಸ್ಪರ್ಧೆ 2024 25 ಈಚೆಗೆ ಬೆಂಗಳೂರಿನಲ್ಲಿ ನಡೆದ…

13 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420