ಸುರಪುರ: ತಾಲೂಕು ಸಿವಿಲ್ ಗುತ್ತಿಗೆದಾರರ ಸಂಘವನ್ನು ರಚನೆ ಮಾಡಲಾಗಿದ್ದು,ಅಧ್ಯಕ್ಷರನ್ನಾಗಿ ರಾಜಾ ಮುಕುಂದ ನಾಯಕ ಅವರು ನೇಮಕಗೊಂಡಿದ್ದಾರೆ.ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಸಭೆ ನಡೆಸಿದ ಅನೇಕ ಜನ ಹಿರಿಯ ಗುತ್ತಿಗೆದಾರರು ತಾಲೂಕು ಘಟಕವನ್ನು ರಚಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಸರ್ವ ಸದಸ್ಯರು ಸುರಪುರ ತಾಲೂಕು ಸಿವಿಲ್ ಗುತ್ತಿಗೆದಾರರ ಸಂಘವನ್ನು ರಚಿಸಿ ಸಂಘದ ಗೌರವಾಧ್ಯಕ್ಷರನ್ನಾಗಿ ಎಸ್.ಎನ್ ಪಾಟೀಲ್ ಸೂಗುರು ಅವರನ್ನು ಹಾಗು ಸಂಘದ ತಾಲೂಕು ಅಧ್ಯಕ್ಷರನ್ನಾಗಿ ರಾಜಾ ಮುಕುಂದ ನಾಯಕ ಅವರನ್ನು,ಉಪಾಧ್ಯಕ್ಷರನ್ನಾಗಿ ಎಮ್.ಡಿ ಅಸ್ಲಾಂ ಮಾಸ್ತರ್ ಮತ್ತು ಕಾಳಪ್ಪ ಕವಾತಿಯವರನ್ನು,ಕಾರ್ಯದರ್ಶಿಗಳನ್ನಾಗಿ ದೇವರಾಜ ನಾಯಕ ಹಾಗು ಜಗದೀಶ ಪಾಟೀಲ್ ಸೂಗುರು ಅವರನ್ನು,ಖಜಾಂಚಿಯನ್ನಾಗಿ ಕುಮಾರಸ್ವಾಮಿ ಗುಡ್ಡಡಗಿಯವರನ್ನು ನೇಮಕಗೊಳಿಸಿದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಾಗಿ ನೇಮಕಗೊಂಡ ರಾಜಾ ಮುಕುಂದ ನಾಯಕ ಮಾತನಾಡಿ,ಈಗಾಗಲೇ ರಾಜ್ಯದಲ್ಲಿನ ಗುತ್ತಿಗೆದಾರರು ಅನೇಕ ಸಮಸ್ಯೆಗಳನ್ನು ಹೆದರಿಸುವಂತಾಗಿದೆ.ಅಲ್ಲದೆ ಕೊರೊನಾ ಸಂದರ್ಭದಲ್ಲಿ ಅನೇಕ ಜನ ಗುತ್ತಿಗೆದಾರರು ಸಮಸ್ಯೆಯಿಂದ ಬೇಸತ್ತಿದ್ದಾರೆ.ಅಲ್ಲದೆ ಇನ್ನೂ ಅನೇಕ ಸಂಗತಿಗಳಿಗಾಗಿ ಇಂದು ಎಲ್ಲಾ ಗುತ್ತಿಗೆದಾರರು ಒಗ್ಗಟ್ಟಾಗಿ ನಮಗಿರುವ ಸಮಸ್ಯೆಗಳನ್ನು ಪರಿಹರಿಸಲು ಸರಕಾರಕ್ಕೆ ಒತ್ತಾಯಿಸುವ ಅನಿವಾರ್ಯತೆ ಇದೆ.
ಆದ್ದರಿಂದ ಇಂದು ಸುರಪುರ ತಾಲೂಕು ಸಿವಿಲ್ ಗುತ್ತಿಗೆದಾರರ ಸಂಘವನ್ನು ರಚನೆ ಮಾಡಿಕೊಂಡಿದ್ದು ಮುಂದಿನ ದಿನಗಳಲ್ಲಿ ನಮ್ಮೆಲ್ಲ ಗುತ್ತಿಗೆದಾರರ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಯತ್ನಿಸಲಾಗುವುದು ಎಂದು ತಿಳಿಸಿದರಲ್ಲದೆ,ಇಂದು ನಡೆದ ಸಭೆಯಲ್ಲಿ ನಮ್ಮೆಲ್ಲರನ್ನು ಪದಾಧಿಕಾರಿಗಳನ್ನಾಗಿ ನೇಮಕಗೊಳಿಸಿ ಜವಬ್ದಾರಿಯನ್ನು ನೀಡಿದ ಎಲ್ಲರಿಗೂ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗುತ್ತಿಗೆದಾರರಾದ ಪ್ರಕಾಶ ಸಜ್ಜನ್, ರಾಜಾ ಪಿಡ್ಡನಾಯಕ,ರಾಜಾ ರಾಮಪ್ಪ ನಾಯಕ (ಜೇಜಿ),ಮಾರ್ಥಂಡಪ್ಪ ದೇವರಗೋನಾಲ,ಕಾಳಪ್ಪ ಬಡಿಗೇರ,ರಾವುತರಾಯ ಕಮತಗಿ,ವಿರೇಶ ನಿಷ್ಠಿ ದೇಶಮುಖ,ಶಿವರಾಜ ಆವಂಟಿ,ನದೀಮ ಮುಲ್ಲಾ, ವಿಜಯಕುಮಾರ ಯಾದವ್,ಅಜಯ್ ಪಾಟೀಲ್,ಭೀಮಣ್ಣ ಯಲಗೋಡ,ಪರಶುರಾಮ ನಾಯಕ ಗುಡ್ಡಕಾಯಿ ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…
ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…
ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್ನ ದಾಸ್ನಾ…
ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…
ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…
ಶಹಾಬಾದ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ಇವುಗಳ ಪ್ರಗತಿಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು…