ಸುರಪುರ:ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ರಾಜಾ ಮುಕುಂದ ನಾಯಕ

0
11

ಸುರಪುರ: ತಾಲೂಕು ಸಿವಿಲ್ ಗುತ್ತಿಗೆದಾರರ ಸಂಘವನ್ನು ರಚನೆ ಮಾಡಲಾಗಿದ್ದು,ಅಧ್ಯಕ್ಷರನ್ನಾಗಿ ರಾಜಾ ಮುಕುಂದ ನಾಯಕ ಅವರು ನೇಮಕಗೊಂಡಿದ್ದಾರೆ.ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಸಭೆ ನಡೆಸಿದ ಅನೇಕ ಜನ ಹಿರಿಯ ಗುತ್ತಿಗೆದಾರರು ತಾಲೂಕು ಘಟಕವನ್ನು ರಚಿಸಿದರು.

ಸಭೆಯಲ್ಲಿ ಭಾಗವಹಿಸಿದ್ದ ಸರ್ವ ಸದಸ್ಯರು ಸುರಪುರ ತಾಲೂಕು ಸಿವಿಲ್ ಗುತ್ತಿಗೆದಾರರ ಸಂಘವನ್ನು ರಚಿಸಿ ಸಂಘದ ಗೌರವಾಧ್ಯಕ್ಷರನ್ನಾಗಿ ಎಸ್.ಎನ್ ಪಾಟೀಲ್ ಸೂಗುರು ಅವರನ್ನು ಹಾಗು ಸಂಘದ ತಾಲೂಕು ಅಧ್ಯಕ್ಷರನ್ನಾಗಿ ರಾಜಾ ಮುಕುಂದ ನಾಯಕ ಅವರನ್ನು,ಉಪಾಧ್ಯಕ್ಷರನ್ನಾಗಿ ಎಮ್.ಡಿ ಅಸ್ಲಾಂ ಮಾಸ್ತರ್ ಮತ್ತು ಕಾಳಪ್ಪ ಕವಾತಿಯವರನ್ನು,ಕಾರ್ಯದರ್ಶಿಗಳನ್ನಾಗಿ ದೇವರಾಜ ನಾಯಕ ಹಾಗು ಜಗದೀಶ ಪಾಟೀಲ್ ಸೂಗುರು ಅವರನ್ನು,ಖಜಾಂಚಿಯನ್ನಾಗಿ ಕುಮಾರಸ್ವಾಮಿ ಗುಡ್ಡಡಗಿಯವರನ್ನು ನೇಮಕಗೊಳಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಾಗಿ ನೇಮಕಗೊಂಡ ರಾಜಾ ಮುಕುಂದ ನಾಯಕ ಮಾತನಾಡಿ,ಈಗಾಗಲೇ ರಾಜ್ಯದಲ್ಲಿನ ಗುತ್ತಿಗೆದಾರರು ಅನೇಕ ಸಮಸ್ಯೆಗಳನ್ನು ಹೆದರಿಸುವಂತಾಗಿದೆ.ಅಲ್ಲದೆ ಕೊರೊನಾ ಸಂದರ್ಭದಲ್ಲಿ ಅನೇಕ ಜನ ಗುತ್ತಿಗೆದಾರರು ಸಮಸ್ಯೆಯಿಂದ ಬೇಸತ್ತಿದ್ದಾರೆ.ಅಲ್ಲದೆ ಇನ್ನೂ ಅನೇಕ ಸಂಗತಿಗಳಿಗಾಗಿ ಇಂದು ಎಲ್ಲಾ ಗುತ್ತಿಗೆದಾರರು ಒಗ್ಗಟ್ಟಾಗಿ ನಮಗಿರುವ ಸಮಸ್ಯೆಗಳನ್ನು ಪರಿಹರಿಸಲು ಸರಕಾರಕ್ಕೆ ಒತ್ತಾಯಿಸುವ ಅನಿವಾರ್ಯತೆ ಇದೆ.

ಆದ್ದರಿಂದ ಇಂದು ಸುರಪುರ ತಾಲೂಕು ಸಿವಿಲ್ ಗುತ್ತಿಗೆದಾರರ ಸಂಘವನ್ನು ರಚನೆ ಮಾಡಿಕೊಂಡಿದ್ದು ಮುಂದಿನ ದಿನಗಳಲ್ಲಿ ನಮ್ಮೆಲ್ಲ ಗುತ್ತಿಗೆದಾರರ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಯತ್ನಿಸಲಾಗುವುದು ಎಂದು ತಿಳಿಸಿದರಲ್ಲದೆ,ಇಂದು ನಡೆದ ಸಭೆಯಲ್ಲಿ ನಮ್ಮೆಲ್ಲರನ್ನು ಪದಾಧಿಕಾರಿಗಳನ್ನಾಗಿ ನೇಮಕಗೊಳಿಸಿ ಜವಬ್ದಾರಿಯನ್ನು ನೀಡಿದ ಎಲ್ಲರಿಗೂ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಗುತ್ತಿಗೆದಾರರಾದ ಪ್ರಕಾಶ ಸಜ್ಜನ್, ರಾಜಾ ಪಿಡ್ಡನಾಯಕ,ರಾಜಾ ರಾಮಪ್ಪ ನಾಯಕ (ಜೇಜಿ),ಮಾರ್ಥಂಡಪ್ಪ ದೇವರಗೋನಾಲ,ಕಾಳಪ್ಪ ಬಡಿಗೇರ,ರಾವುತರಾಯ ಕಮತಗಿ,ವಿರೇಶ ನಿಷ್ಠಿ ದೇಶಮುಖ,ಶಿವರಾಜ ಆವಂಟಿ,ನದೀಮ ಮುಲ್ಲಾ, ವಿಜಯಕುಮಾರ ಯಾದವ್,ಅಜಯ್ ಪಾಟೀಲ್,ಭೀಮಣ್ಣ ಯಲಗೋಡ,ಪರಶುರಾಮ ನಾಯಕ ಗುಡ್ಡಕಾಯಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here