ಶಹಾಬಾದ : ಕೆರೆ ಕುಂಟೆಗಳನ್ನು ಕಟ್ಟುವ ಮೂಲಕ ಪ್ರಕೃತಿಯಲ್ಲಿನ ಪಶು,ಪಕ್ಷಿಗಳಿಗೆ ದಾಹ ನೀಗಿಸುವ ಕಾಯಕವನ್ನು ಮಾಡಿದವರು ಸಿದ್ಧರಾಮೇಶ್ವರ ಶರಣರೇ ಮೊದಲಿಗರು ಎಂದು ಭೋವಿ ಸಮಾಜದ ತಾಲೂಕಾಧ್ಯಕ್ಷ ಭೀಮರಾವ ಸಾಳುಂಕೆ ಹೇಳಿದರು.
ಅವರು ಶುಕ್ರವಾರ ಭೋವಿ ವಡ್ಡರ್ ಸಮಾಜದ ವತಿಯಿಂದ ನಗರದ ವಡ್ಡರ ಸಂಘದಲ್ಲಿ ಆಯೋಜಿಸಲಾದ ಸಿದ್ಧರಾಮೇಶ್ವರರ ಜಯಂತಿಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಕಾಯಕಕ್ಕಿಂತ ಮಿಗಿಲಾದುದು ಯಾವುದು ಇಲ್ಲ. ವಿಶ್ವದ ಎಲ್ಲಾ ಜೀವರಾಶಿಗಳಿಗೆ ಹೊಟ್ಟೆ ತುಂಬಿಸುವ ಕಾರ್ಯ ಕಾಯಕದಿಂದ ಮಾತ್ರ ಸಾಧ್ಯ. ಕಾಯಕ ಸತ್ಯ ಮತ್ತು ಶುದ್ಧವಾಗಿರಬೇಕು.ಯಾವುದೇ ಅನಾಚಾರದ ಮೂಲಕ ಗಳಿಸುವ ಹಣ ಸತ್ಪಾತ್ರಕ್ಕೆ ಸಲ್ಲುವುದಿಲ್ಲ. ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ಕಾಯಕ ಮಾಡುವ ಸಂಸ್ಕೃತಿಯನ್ನು ಬೆಳೆಸಿದವರು ಶರಣರು.
ಬೋವಿ ಸಮಾಜದ ಪ್ರ.ಕಾರ್ಯದರ್ಶಿ ದೇವದಾಸ ಜಾಧವ ಮಾತನಡಿ, ಸಿದ್ಧರಾಮೇಶ್ವರ ಮಹಾ ಶರಣರ ಜಯಂತಿ ಆಚರಿಸುವುದು ಸಂತೋಷದ ವಿಷಯ.ಆದರೆ ಇದು ಕೇವಲ ವರ್ಷಕ್ಕೊಮ್ಮೆ ಎಂಬಂತೆ ಕಾಟಾಚಾರಕ್ಕಾಗಿ ಆಚರಿಸದೇ, ಅವರ ನಿಜವಾದ ತತ್ವಗಳನ್ನು ಅಳವಡಿಸಿಕೊಳ್ಳುವ ಮೂಲಕ ಶರಣರು ಕಂಡಂತಹ ಕಲ್ಯಾಣ ರಾಜ್ಯವನ್ನು ಮತ್ತೆ ಮರು ಸ್ಥಾಪಿಸಬಹುದು ಎಂದು ಹೇಳಿದರು.
ವಾಡಿ=ಶಹಾಬಾದ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕನಕಪ್ಪ ದಂಡಗುಲಕರ,ರಾಮು ಕುಸಾಳೆ,ಶಂಕರ ಕುಸಾಳೆ,ಸಿದ್ರಾಮ ಕುಸಾಳೆ,ವಡ್ಡರ ಸಂಘ ಅಧ್ಯಕ್ಷರಾದ ಗೋವಿಂದ ಸ್ವಾಮಿ ಕುಸಾಳೆ,ಪ್ರ.ಕಾರ್ಯದರ್ಶಿ ಅಭಿ?ಕ ದೇವಕರ,ಸುರೆಶ ದಂಡಗುಲಕರ,ದಿನೇಶ ಕುಸಾಳೆ,ಅಮ್ಮು ಮಾನೆ,ಶ್ರೀನಿವಾಸ ಚೌಧರಿ,ಪ್ರಸನ್ನ ಕುರ್ಡೆಕರ,ಬಾಬ ಬಾತ್ಕರ,ವೇಂಕಟೆಶ ದೋತ್ರೆ,ಶಿವು ಲಿಂಗೆರಿ,ಕೋಳ್ಳಪ್ಪ,ಅಮರ ಗೋಟೆಕರ,ಆದರ್ಶರೆಡ್ಡಿ,ಹನುಮಾಜು ಕುಸಾಳೆ,ಲಕ್ಷ್ಮಣ ಬೋರ್ಗಿ,ಬಾಬು ನಿಡಗುಂದಿ,ಸುನಿಲ ದೋತ್ರೆ,ಶಾಂತಯ್ಯಸ್ವಾಮಿ,ಸಂಜು ದೋತ್ರೆ,ಮಂಜುನಾಥ ಕ್ಯಾತನೂರ,ಅನೀಕೇತ ಬೋರಗಾಂವಕರ,ವಿಶ್ವ,ದಂಡಗುಲಕರ,ಗೋಪಾಲ ನಿಂಬಾಳಕರ,ರಾಜು,ಅನಿಲ ಹಳ್ಳಿ ಸೇರಿದಂತೆ ಅನೇಕರು ಇದ್ದರು.
ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…
ಕಲಬುರಗಿ: ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…
ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…
ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…
ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…
ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…