ಸುರಪುರ:ಅಖಿಲ ಕರ್ನಾಟಕ ಕುಡ ಒಕ್ಕಲಿಗ ಸಮಾಜ ಸಂಘದಿಂದ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಶಿರಸಂಗಿ ಲಿಂಗರಾಜ ಅರಸರ ೧೬೧ನೇ ಜಯಂತಿ ಆಚರಿಸಲಾಯಿತು.ರುಕ್ಮಾಪುರ ಹಿರೇಮಠದ ಗುರು ಶಾಂತಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಘದ ರಾಜ್ಯಾಧ್ಯಕ್ಷ ಶಿವಕುಮಾರ ಪಾಟೀಲ್ ಗದಗ ಮಾತನಾಡಿ,ನಮ್ಮ ಸಮಾಜದ ಮಾಣಿಕ್ಯದಂತಿದ್ದವರು ಶಿರಸಂಗಿ ಲಿಂಗರಾಜ ಅರಸರು,ಅವರನ್ನು ನಾವೆಲ್ಲರು ನಿತ್ಯವು ಸ್ಮರಿಸಬೇಕು.ಅವರು ನೀಡಿದ ಕೊಡುಗೆಯಿಂದ ಇಂದು ನಾಡಿನ ಹೆಸರಾಂತ ಶಿಕ್ಷಣ ಸಂಘಗಳು ಉದಯಿಸಲು ಕಾರಣವಾಗಿದೆ, ನಾಡಿನ ಲಿಂಗಾಯತ ಸಮುದಾದ ಅಭಿವೃಧ್ಧಿಗೂ ಲಿಂಗರಾಜ ಅರಸರ ಕೊಡುಗೆ ಇದೆ ಎಂಬುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ ಎಂದರು.ಅಲ್ಲದೆ ಇಂದು ನಾಡಿನ ಎಲ್ಲಾ ಕುಡ ಒಕ್ಕಲಿಗರು ಸಂಘಟಿತರಾಗಬೇಕಿದೆ ಅಂದಾಗ ಮಾತ್ರ ನಮ್ಮ ಸಮುದಾಯದ ಅಭಿವೃಧ್ಧಿ ಸಾಧ್ಯವಿದೆ,ಆ ನಿಟ್ಟಿನಲ್ಲಿ ತಾವೆಲ್ಲರು ಸಂಘಟಿತರಾಗಿ ಏಳಿಗೆಗೆ ಹೆಗಲು ನೀಡುವಂತೆ ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಶಿರಸಂಗಿ ಲಿಂಗರಾಜ ಅರಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ವಂದಿಸಿದರು.ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲಿಂಗಾಯಕ ಕುಡ ವಕ್ಕಲಿಗ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ಸಿದ್ದನಗೌಡ ಪಾಟೀಲ್ ಹೆಬ್ಬಾಳ ಮಾತನಾಡಿದರು.ಮುಖ್ಯ ಅತಿಥಿಗಳಾಗಿ ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ್ ದೇವಾಪುರ,ಮಲ್ಲಾ ಗ್ರಾ.ಪಂ ಸದಸ್ಯ ರಮೇಶಗೌಡ,ಶ್ರೀಗುರು ಸೇವಾ ಸಂಸ್ಥೆ ಅಧ್ಯಕ್ಷ ಮಲ್ಲು ಬಾದ್ಯಾಪುರ ವೇದಿಕೆ ಮೇಲಿದ್ದರು.ಆದಿಶೇಷ ಪಾಟೀಲ್ ಹೆಮನೂರ,ರವಿಗೌಡ ಪಾಟೀಲ್ ಹೆಮನೂರ,ಚಂದ್ರು ಹೆಮ್ಮಡಗಿ,ಸಂತೋಷ ಕನ್ನೆಳ್ಳಿ ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…
ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…
ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್ನ ದಾಸ್ನಾ…
ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…
ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…
ಶಹಾಬಾದ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ಇವುಗಳ ಪ್ರಗತಿಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು…