ಕಲಬುರಗಿ: ಪರಿಸರ ಮಾಲಿನ್ಯ ತಪ್ಪಿಸಿ ಉತ್ತಮ ವಾತಾವರಣ ಹೊಂದಲು ಮತ್ತು ಇಂಧನ ಹೊರೆಯನ್ನು ಕಡಿಮೆ ಮಾಡಲು ಎಲೆಕ್ಟಿçಕಲ್ ದ್ವಿಚಕ್ರ ವಾಹನ (ಇ-ಬೈಕ್) ಬಳಕೆ ಮಾಡಬೇಕು ಎಂದು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ (ಕ್ರೆಡಲ್) ಅಧ್ಯಕ್ಷ ಚಂದು ಪಾಟೀಲ್ ಹೇಳಿದರು.
ನಗರದ ಜೇವರ್ಗಿ ರಸ್ತೆಯಲ್ಲಿ ಹೊಸದಾಗಿ ಯುಗಾದಿ ಹಬ್ಬ ಶನಿವಾರದಂದು ಆರಂಭಗೊAಡಿರುವ ಆಡಮ್ಸ್ ಇ ಬೈಕ್ಗಳ ಶೋ ರೂಮ್ ಶರಣಬಸವೇಶ್ವರ ವೆಂಚುರ್ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರವು ನವೀಕರಿಸಬಹುದಾದ ಇಂಧನ ಬಳಕೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಹಲವು ಪ್ರೋತ್ಸಾಹದಾಯಕ ಯೋಜನೆಗಳನ್ನು ಹಾಕಿಕೊಂಡಿದೆ ಎಂದರು.
ಪೆಟ್ರೋಲ್ ಬೈಕ್ಗಳ ಬಳಕೆಯಿಂದ ಆರ್ಥಿಕ ಹೊರೆ ಹೆಚ್ಚಾಗಲಿದೆ. ಪ್ರತಿ ಕಿಲೋಮೀಟರ್ಗೆ ಕೇವಲ ೨೦ ಪೈಸೆ ವೆಚ್ಚದಲ್ಲಿ ಇ-ಬೈಕ್ ಓಡಿಸಬಹುದಾಗಿದೆ. ಒಂದು ಸಲ ಚಾರ್ಜ್ ಮಾಡಿದರೆ, ೧೦೦ಕ್ಕೂ ಹೆಚ್ಚು ಕಿಮೀ ಓಡುತ್ತದೆ. ಪರಿಸರ ರಕ್ಷಣೆಗೂ ಪೂರಕವಾಗಿದೆ. ಅಲ್ಲದೆ ಲೈಸನ್ಸ್ ಬೇಕಾಗಿಲ್ಲ. ನೋಂದಣಿ ಬೇಕಾಗಿಲ್ಲ ಎಂದು ಚಂದು ಪಾಟೀಲ್ ತಿಳಿಸಿದರು.
ಶೋ ರೂಂವನ್ನು ಕೆಕೆಆರ್ಡಿಬಿ ಅಧ್ಯಕ್ಷರು ಆಗಿರುವ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಉದ್ಘಾಟಿಸಿ,ಕರ್ನಾಟಕ ಮೂಲದ ಸ್ಟಾರ್ಟ್ಅಪ್ ಕಂಪನಿಯ ಉತ್ಪಾದನೆ ಮಾಡಿರುವ ಇ-ಬೈಕ್ಗಳು ಉತ್ತಮವಾಗಿವೆ. ನಮ್ಮವನ್ನು ನಾವು ಪ್ರೋತ್ಸಾಹಿಸಬೇಕು. ಯುವಜನರು ಸಹ ವೆಚ್ಚ ಕಡಿಮೆ ಮಾಡಿಕೊಳ್ಳಲು ಇಂತಹ ಬೈಕ್ ಬಳಸಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಶಹಾಪುರ ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ಅವರು ಮೊದಲ ಗ್ರಾಹಕರಿಗೆ ಎಲೆಕ್ಟಿçಕ್ ಬೈಕ್ ಕೀಯನ್ನು ಹಸ್ತಾಂತರಿಸಿದರು. ಬ್ಯಾಂಕ್ ಆಫ್ ಇಂಡಿಯಾ ಮುಖ್ಯ ವ್ಯವಸ್ಥಾಪಕರಾದ ಬಾಬುರಾವ ಸುಂಟನೂರಕರ್, ಶರಣಬಸವೇಶ್ವರ ವೆಂಚುರ್ ನಿರ್ದೇಶಕರಾದ ಅಶೋಕ ಪಾಟೀಲ್ ಮತ್ತು ಶರಣು ಅರಕೇರಾ, ಪ್ರಮುಖರಾದ ಸೋಮಶೇಖರ ಗೋನಾಯಕ. ಪ್ರೊ.ಅಣ್ಣಾರಾವ ಪಾಟೀಲ್, ಡಾ.ಡಾ.ವಿಶಾಲಾಕ್ಷಿ ಕರಡ್ಡಿ, ಪತ್ರಕರ್ತರಾದ ಗಣೇಶ ಚಂದನಶಿವ, ಬಾಬುರಾವ ಯಡ್ರಾಮಿ, ಸೂರ್ಯಕಾಂತ ಜಮಾದಾರ, ರಮೇಶ ಬಳ್ಳಾ ಮೊದಲಾದವರಿದ್ದರು.
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…