ಕಲಬುರಗಿ: ಕಾಯಕದೊಂದಿಗೆ ನಿಸ್ವಾರ್ಥ ಸೇವೆ ಮಾಡುವವರು ನಮ್ಮ ಸಮಾಜದ ದೊಡ್ಡ ಆಸ್ತಿ ಅಂಥವರನ್ನು ಸಮಾಜಕ್ಕೆ ಪರಿಚಯಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹರಸೂರ ಗ್ರಾಮದ ಕಲ್ಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಕರಬಸವೇಶ್ವರ ಶಿವಾಚಾರ್ಯರು ಹೇಳಿದರು.
ತಾಲ್ಲೂಕಿನ ಹರಸೂರ ಗ್ರಾಮದಲ್ಲಿ ಕರಿಬಸವೇಶ್ವರ ಕಲ್ಮಠದ ಪೀಠಾಧಿಪತಿಗಳಾದ ಕರಸಿದ್ದೇಶ್ವರ ಪೂಜ್ಯರ ಪಟ್ಟಾಧಿಕಾರದ 15 ನೇ ವಾರ್ಷಿಕೋತ್ಸವ ಸಮಾರಂಭದ ನಿಮಿತ್ಯ ವಿವಿಧ ಕ್ಷೇತ್ರದಲ್ಲಿ ಸೇವೆ ಗೈಯುತ್ತಿರುವವರನ್ನು ಗೌರವಿಸಿ ಹಾಗೂ ಪುಸ್ತಕ ಬಿಡುಗಡೆಗೊಳಿಸಿ ಆಶೀರ್ವಚನ ನೀಡುತ್ತಾ ಬಂಧನಗಳೆ ಇಲ್ಲದ ಜಾಗದಲ್ಲಿ, ಭಾವನೆಗಳ ಸಂತೆ ನಡೆಸಿದರೆ ಬಂಡೆಗಳ ಮೇಲೆ ನೀರು ಸುರಿದಂತೆ ಆಗುತ್ತದೆ.ಅದರಂತೆ ನಾವು ಬದುಕಿನ ಹೆಜ್ಜೆ ಗುರುತನ್ನು ಉಳಿಸಿ ಹೋಗುವುದು ನಡಿಗೆಯಿಂದಲ್ಲಾ, ಉತ್ತಮ ನಡತೆಯಿಂದ ಸಾಧ್ಯವೆಂದರು. ಆಧ್ಯಾತ್ಮಿಕ ಚಿಂತನೆಯೊಂದಿಗೆ ನಾವೆಲ್ಲರೂ ಉತ್ತಮ ಸಮಾಜ ಕಟ್ಟುವ ಕಾರ್ಯ ಮಾಡೋಣ ಎಂದು ಮಾರ್ಮಿಕವಾಗಿ ನುಡಿದರು.
ಇದನ್ನೂ ಓದಿ: ಹೇಮರೆಡ್ಡಿಯ ಬದ್ದತೆ ಮತ್ತು ಸರಳತೆ ಎಲ್ಲರಿಗೂ ಆದರ್ಶ: ಸಜ್ಜನಶೆಟ್ಟಿ
ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ಮಾತನಾಡುತ್ತ ಜೀವನ ಎಂಬ ತರಗತಿಯಲ್ಲಿ ಗಂಟೆಗೊಂದು ಪಾಠ, ನಿಮಿಷಕ್ಕೊಂದು ಅನುಭವ ಆಗುತ್ತದೆ. ಜೀವನ ಚಿಕ್ಕದಾಗಿದೆ ನಿಮ್ಮನ್ನು ನಗಿಸುವ ಮತ್ತು ಪ್ರೀತಿಸುವ ಜನರೊಂದಿಗೆ ಹೆಚ್ಚಿಗೆ ಸಮಯ ಕಳೆಯುವುದರೊಂದಿಗೆ ಸುಂದರವಾದ ಜೀವನ ರೂಪಿಸಿಕೊಳ್ಳೊಣ.” ಹೂವಿನ ಮೇಲೆ ನಾವು ಮಲಗಿದರೆ ಅದು ಮೊದಲ ರಾತ್ರಿ,ಹೂವು ನಮ್ಮ ಮೇಲಿದ್ದರೆ ಅದು ಕೊನೆಯ ರಾತ್ರಿ” ಜೀವಂತವಿದ್ದಾಗ ಉಸಿರಿರುತ್ತದೆ, ಮರಣ ಹೊಂದಿದಾಗ ಹೆಸರು ಉಳಿಯುವ ಉತ್ತಮ ಕಾರ್ಯ ಮಾಡಬೇಕು ಎಂಬ ಹಲವಾರು ಹಾಸ್ಯ ಚಟಾಕಿಗಳೊಂದಿಗೆ ಸಮಾಜಕ್ಕೆ ಸಂದೇಶ ನೀಡುವುದರೊಂದಿಗೆ ನೆರೆದವರನ್ನು ಮನರಂಜಿಸಿದರು.
ಕಡಗಂಚಿ ಪೂಜ್ಯರಾದ ವೀರಭದ್ರ ಶಿವಾಚಾರ್ಯರು, ಜನವಾಡದ ಮಹಾದೇವ ಸ್ವಾಮಿಗಳು ಆಶೀರ್ವಚನ ನೀಡಿದರು .ವೇದಿಕೆ ಮೇಲೆ ಕರಸಿದ್ದಪ್ಪ ಪಾಟೀಲ, ಬಸವರಾಜ ಕಾಂತಾ, ಹಿರಿಯ ಸಾಹಿತಿಗಳಾದ ಶಿವಶಂಕರ ಕಾಂತಾ ಹರಸೂರ ಇದ್ದರು. ಸಮಾರಂಭದಲ್ಲಿ ಹಿರಿಯ ಸಾಹಿತಿಗಳಾದ ಶಿವಶಂಕರ ಕಾಂತಾ ಹರಸೂರ ಅವರು ರಚಿಸಿದ ಓ ಕನ್ನಡ ಹಾಗೂ ಹರಸೂರ ಅಣವೀರಪ್ಪನ ಸ್ವರ ವಚನಗಳ ಪುಸ್ತಕ ಬಿಡುಗಡೆಗೊಳಿಸಲಾಯಿತು.ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆಗೈಯುತ್ತಿರುವ ಜನಪರ ಹೋರಾಟಗಾರ ನ್ಯಾಯವಾದಿ ಹಣಮಂತರಾಯ ಅಟ್ಟೂರ, ಪೋಲಿಸ್ ಸಾಹಿತಿ ರಜನೀಕಾಂತ ಬರುಡೆ, ಸಮಾಜ ಸೇವಕರಾದ ಕೇದರನಾ ಥ ಕುಲಕರ್ಣಿ ಅವರನ್ನು ವಿಶೇಷವಾಗಿ ಗೌರವಿಸಲಾಯಿತು.
ಇದನ್ನೂ ಓದಿ: ಮರತೂರ : ಪಲ್ಲಕ್ಕಿ ಉತ್ಸವ, ಪುರಾಣ
ಶ್ರೀ ಎಡೆಯೂರು ಸಿದ್ಧಲಿಂಗೇಶ್ವರ ಮಹಾಪುರಾಣವನ್ನು ವೇದಮೂರ್ತಿ ಶಂಭುಲಿಂಗ ಶಾಸ್ತ್ರಿಗಳು ಸುಸ್ಖಲಿತವಾಣಿಯಿಂದ ಹೇಳಿದರು.ಸಂಗೀತ ಕಲಾವಿದರಾದ ರವಿ ಆಳಂದ ಹಾಗೂ ಸಂಗಮೇಶ ಹೇರೂರ ಸಂಗೀತ ಸೇವೆ ಸಲ್ಲಿಸಿದರು.
ಕಲಬುರಗಿ:"ಕಲ್ಯಾಣ ಕರ್ನಾಟಕ ಉತ್ಸವ" ವನ್ನು ಸೆಪ್ಟೆಂಬರ್ "18" ರಂದು ಆಚರಿಸಲು ಕರ್ನಾಟಕ ಯುವಜನ ಒಕ್ಕೂಟ(ರಿ) ಮತ್ತು "ಕಲ್ಯಾಣ ಕರ್ನಾಟಕ ಪ್ರತ್ಯೇಕ…
ಕಲಬುರಗಿ: ಸಚಿವ ಸಂಪುಟ ಸಭೆಯ ಮೂಲಕ ಚಿಂಚೋಳಿ ಸಕ್ಕರೆ ಕಾರ್ಖಾನೆ ಪುನಃ ಪ್ರಾರಂಭ ಮಾಡುವ ತೀರ್ಮಾನ ಕೈಗೊಳಬೇಕೆಂದು ಕಾಳಗಿ ತಾಲೂಕ…
ಕಲಬುರಗಿ: ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯಂದು ಹತ್ತು ವರ್ಷಗಳ ನಂತರ ಬಹುನಿರೀಕ್ಷಿಯ ಸಚಿವ ಸಂಪುಟ ಕಲಬುರಗಿಯಲ್ಲಿ ನಡೆಯುತ್ತಿರುವುದು ಈ ಭಾಗದ…
ಕಲಬುರಗಿ, ಕಳೆದ ಹತ್ತು ವರ್ಷಗಳ ನಂತರ ಕಲಬುರಗಿಯಲ್ಲಿ ಪ್ರಥಮ ಬಾರಿಗೆ ಇಂದು ಸೆಪ್ಟಂಬರ್ 17ರಂದು ರಾಜ್ಯ ಸಚಿವ ಸಂಪುಟ ಸಭೆ…
ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಸುಪ್ರಸಿದ್ದ ಟಿವಿ ಛಾನೆಲ್ ಎಸ್ ಎಸ್ ವಿ ಟಿವಿ ಮತ್ತು ಜೈ ಭೀಮ್ ಟಿವಿ…
ಕಲಬುರಗಿ: ಪ್ಲಾಸ್ಟಿಕ್ ನಿಷೇಧಕ್ಕೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಸಹಕರಿಸಿದಾಗ ಮಾತ್ರ ನಗರವನ್ನು ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಾಧ್ಯವಿದೆ ಎಂದು…