ಕಲಬುರಗಿ ಜಿಲ್ಲಾ ಪಂಚಾಯತಿಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಗನಾಥ ಉಡಗಿ (ನರೇಗಾ) ನಿರ್ವಾಹಕ ಸಿಬ್ಬಂದಿ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವತೆ ದಲಿತ ಜನ ಜಾಗೃತಿ ವೇದಿಕೆಯ ವತಿಯಿಂದ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕಲಬುರಗಿ ಜಿಲ್ಲಾ ಪಂಚಾಯತ್ ಕಛೇರಿಯಲ್ಲಿ (ನರೇಗಾ) ನಿರ್ವಾಹಕ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿರುವ ನಾಗನಾಥ ಉಡಗಿ ಇವನೊಬ್ಬ ಭ್ರಷ್ಟ ಅಧಿಕಾರಿಯಾಗಿದ್ದು, ಇವನು ೨೦೨೧-೨೨ನೇ ಸಾಲಿನಲ್ಲಿ ಹೆಚ್ಚುವರಿ ಕ್ರೀಯಾ ಯೋಜನೆ ಅನುಮೋದನೆ ಸಲುವಾಗಿ ಸಾರ್ವಜನಿಕರಿಂದ ಮನಬಂದಂತೆ ಹಣದ ಬೇಡಿಕೆ ಇಟ್ಟು, ಕೆಲವು ಜನರಲ್ಲಿ ಹಣ ಪಡೆದಿರುತ್ತಾನೆ.
ಆದಕಾರಣ ಸದರಿ ಅಧಿಕಾರಿ ಕೆಲವು ಗ್ರಾಮ ಪಂಚಾಯತಿಯ ಕಾಮಗಾರಿಗಳು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಅನುಮೋದನೆ ಕೊಡುಸುತ್ತೇನೆಂದು ಹಣ ಪಡೆದಿರುತ್ತಾನೆ. ಈ ಅಧಿಕಾರಿ ಬೇರೆ ಇಲಾಖೆಯ ಮುಂಬಡ್ತಿ ಆದರೂ ಇವರು ಇದೇ ನರೇಗಾ ನಿರ್ವಾಹಕ ಸಿಬ್ಬಂದಿಯಾಗಿಯೇ ಕಾರ್ಯನಿರ್ವಾಹಿಸುತ್ತಿರುವುದು ಏಕೆ? ಇದಕ್ಕೆ ಕಾರಣ ಸದರಿ ಇದರಲ್ಲಿ ಭ್ರಷ್ಟಚಾರದ ಪರಮಾವಧಿಯನ್ನು ಮೀರಿ ಹಣವನ್ನು ಜೇಬಿಗೆ ಹಾಕಿಕೊಂಡು ಸಾರ್ವಜನಿಕರ ಹಣವ ಹಗಲು ಲೂಟಿ ಮಾಡುತ್ತಿದ್ದು, ಸದರಿ ಹಣ ನೀಡಿದವರು ಸಹಿತ ಸಾಕ್ಷಿ ಸಮೇತ ಹೇಳಲು ಬಯಸುತ್ತಾರೆ.
ಇದನ್ನೂ ಓದಿ: ಮಂಗಿಹಾಳ ಗ್ರಾಮದಲ್ಲಿ ಸಿಡಿಲಿಗೆ ವ್ಯಕ್ತಿ ಬಲಿ
ಸದರಿ ಅಧಿಕಾರಿಯ ವಿರುದ್ಧ ಭ್ರಷ್ಟಾಚಾರದ ತನಿಖೆ ಮಾಡಿ, ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಒಂದು ವೇಳೆ ಸದರಿ ನಮ್ಮ ಮನವಿಗೆ ಸ್ಪಂಧಿಸದೇ , ವಿಳಂಬ ನೀತಿ ಅನುಸರಿಸಿದರೇ, ಸದರಿ ವಿಷಯದ ಕುರಿತು ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ದಲಿತ ಜನ ಜಾಗೃತಿ ವೇದಿಕೆಯ ವಿದ್ಯಾರ್ಥಿ ಒಕ್ಕೂಟ ಜಿಲ್ಲಾಧ್ಯಕ್ಷ ಶಿವರಾಜಕುಮಾರ ಜಾಪೂರ, ಮಾಳು ಕಾರಗುಂಡ, ರವಿ ಎಸ್.ಹೋಸಮನಿ ಇದ್ದರು.
ಇದನ್ನೂ ಓದಿ: ಕೂಡಲಗಿ ಗ್ರಾಮದಲ್ಲಿ ಪಂಪ್ ಹೌಸ್ಗೆ ಬೆಂಕಿ ವಸ್ತುಗಳು ಭಸ್ಮ
ಸುರಪುರ: ನಗರದಲ್ಲಿ ವಿವಿಧ ಅಭಿವೃಧ್ಧಿ ಕಾಮಗಾರಿಗಳಿಗೆ ಶಾಸಕ ರಾಜಾ ವೇಣುಗೋಪಾಲ ನಾಯಕ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.ಈ ಸಂದರ್ಭದಲ್ಲಿ…
ಸುರಪುರ:ದೇಶದಲ್ಲಿ ಹಲವು ಸಂಸ್ಕøತಿಗಳು ಇರುತ್ತವೆ,ಅಂತಹ ಸಂಸ್ಕøತಿಗಳಲ್ಲಿ ಕನ್ನಡ ಮತ್ತು ಕರ್ನಾಟಕ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಕಳೆದ 82 ವರ್ಷಗಳಿಂದ…
ಸುರಪುರ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸುರಪುರ ತಾಲೂಕ ನೂತನ ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆಮಾಡಲಾಗಿದೆ ಎಂದು ಮಹಾಸಭಾ ತಾಲೂಕ…
ಕಲಬುರಗಿ: ಮಹಾನಗರ ಪಾಲಿಕೆಯ ಅಧೀಕ್ಷಕ, ಅಭಿಯಂತರ ಹಾಗೂ ಉಪ ಆಯುಕ್ತ ಆರ್.ಪಿ. ಜಾಧವ ಅವರನ್ನು ಅಮಾತುಗೊಳಿಸಿ ಮನೆಗೆ ಕಳಿಸಬೇಕು ಎಂದು…
ಕಲಬುರಗಿ: 371ನೇ ಜೇ ಕಲಂ ಸೌಲತ್ತುಗಳ ಬಗ್ಗೆ ಡಾ. ಲಕ್ಷ್ಮಣ ದಸ್ತಿಯವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಅಂಜುಮನ್ ಸಂಸ್ಥೆಯಿಂದ ಅ.6.…
ಕಲಬುರಗಿ: ಎಷ್ಟೋ ಜನರ ಜೀವನ ಭಜನೆಯಿಂದ ಬದಲಾಗಿಗೆ ಕಾಯಿಲೆ ಬಿದ್ದು ಹಾಸಿಗೆ ಹಿಡಿದ ವ್ಯಕ್ತಿ ಭಜನೆ ಮಾಡುವುದರಿಂದ ಎದ್ದು ಗುಣಮುಖರಾದ…