ಕಲಬುರಗಿ : ರಾಜಮಾತಾ ಅಹಲ್ಯಾಬಾಯಿ ಹೋಳ್ಕರ್ ಅವರು ಮಹಿಳಾ ಹೋರಾಟಗಾರರ ದಿವ್ಯ ಮಾಣಿಕ್ಯವಾಗಿ ಸುಭದ್ರವಾದ ಆಡಳಿತ ನಿರ್ವಹಿಸಿ ನಮ್ಮ ಭಾರತೀಯ ಇತಿಹಾಸದಲ್ಲಿ ಅಜರಾಮರವಾಗಿ ಉಳಿದಿರುವರು . ಅವರ ಆದರ್ಶದ ಬದುಕು ನಮ್ಮೆಲ್ಲರಿಗೂ ಮಾದರಿಯವಾಗಿದೆಯೇ ಮುಂದೆ ಕೂಡ ಆಗಬೇಕು ಅಹಲ್ಯಬಾಯಿ ಹೋಲ್ಕರ್ ಎಂಬುವರು ಅಚ್ಚಳಿದು ಒಂದು ನಕ್ಷತ್ರ ಎಂದು ರಾಷ್ಟ್ರೀಯ ಸಮಾಜ ಪಕ್ಷ- ಕರ್ನಾಟಕ ಉಸ್ತುವಾರಿಯಾದ ಧರ್ಮಣ್ಣ ತೊಂಟಾಪುರ ಹೇಳಿದರು.
ನಗರದ ರಾಮಮಂದಿರ ಹಿಂದುಗಡೆ ಇರುವ ಹರಳಯ್ಯ ಸಮುದಾಯ ಭವನದಲ್ಲಿ ರಾಷ್ಟ್ರೀಯ ಸಮಾಜ ಪಕ್ಷ – ಕರ್ನಾಟಕ, ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಕಲಬುರಗಿ ಸಹಯೋಗದಲ್ಲಿ ರಾಜಮಾತಾ ಅಹಲ್ಯಾಬಾಯಿ ಹೋಳ್ಕರ ಅವರ 297 ನೇ ಜಯಂತಿ ಕಾರ್ಯಕ್ರಮದ ಅಂಗವಾಗಿ ನಮ್ಮ ನಡೆ ಗುಲಾಮಗಿರಿಯಿಂದ ಅಧಿಕಾರದ ಕಡೆಗೆ ವಿಚಾರ ಸಂಕಿರ್ಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶೇಷ ಉಪನ್ಯಾಸನೀಡಿ ಮಾತನಾಡಿದ ಅವರು ಅವರು ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾದ ಅಹಲ್ಯಾ ಬಾಯಿ ಹೋಳರ್ ಸಂಸ್ಥಾನದ ಜವಾಬ್ದಾರಿಗಳನ್ನು ಅರಿತುಕೊಳ್ಳುತ್ತಾಳೆ ಹಾಗೂ ಪತಿ ಖಂಡೋಬರಾವ್ ಅವರ ದುಶ್ಚಟಗಳನ್ನು ಪರಿವರ್ತಿಸಿ ರಾಜ್ಯ ಭಾರವನ್ನು ಮಾಡುವಂತೆ ಧೈರ್ಯ ತುಂಬುತ್ತಾಳೆ . ಮತ್ತು ಪತಿ ಯುದ್ಧದಲ್ಲಿ ಮಡಿದ ನಂತರ ಆತ್ಮ ಸೈರ್ಯ ಕಳೆದುಕೊಳ್ಳದೇ ದೀರ ಮಹಿಳೆಯಾಗಿ ಯುದ್ಧ ನೀತಿಗಳನ್ನು ತಿಳಿದುಕೊಂಡು ಸಂಸ್ಥಾನವನ್ನು ಮುಂದುವರೆಸಿ ಹಿಂದೂ ಧರ್ಮದ ಹಲವಾರು ದೇವಾಲಯಗಳನ್ನು ಕಟ್ಟಿಸುತ್ತಾಳೆ ಹಾಗೂ ಪುನರುತ್ಥಾನ ಮಾಡಿಸುವುದರ ಜೊತೆಗೆ ಮಹಿಳೆಯರಿಗೆ ಶಿಕ್ಷಣ , ಸಂಸ್ಕಾರ ಹಾಗೂ ಧೈರ್ಯವನ್ನು ತುಂಬುವ ಕಾರ್ಯ ಮಾಡುತ್ತಾಳೆ. ಕುರುಬ ಸಮಾಜದಲ್ಲಿ ಜನಿಸಿ ಇಷ್ಟೆಲ್ಲ ಸಾಧನೆ ಮಾಡಿದರು ಎಂದು ಹೇಳಿದರು .
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರಾಷ್ಟ್ರೀಯ ಸಮಾಜ ಪಕ್ಷ ಕರ್ನಾಟಕ ಮುಖಂಡರಾದ ಶಿವಲಿಂಗಪ್ಪ ಕಿನ್ನುರ್ ಮಾತನಾಡಿ ರಾಜಕೀಯ ಕ್ಷೇತ್ರದಲ್ಲಿ ಸಾಮಾಜಿಕ ಸಮಾನತೆ , ಸಾಮಾಜಿಕ ಸುಧಾರಣೆ ಮಹಿಳಾ ಪರ ಅಭಿವೃದ್ಧಿಯನ್ನು ಮಾಡಿದರಾಜಮಾತಾಅಹಲ್ಯಾ ಬಾಹಿಹೋಳ್ವರ್ ಅವರು ಎಂದೆಂದಿಗೂ ಆದರ್ಶ ಮಹಿಳೆಯೆಂದು ಹೇಳಿದರು .
ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಕಾರ್ಯದರ್ಶಿ ಬಿಎಂ ರಾವೂರ ಮಾತನಾಡಿದರು.
ಕಾರ್ಯನಿರ್ವಾಹಕ ಇಂಜಿನಿಯರ್ ( ನಿವೃತ್ತ ) ಕೆ. ಬಿ. ಜೆ. ಏನ್. ಎಲ್ ಏಷಿಯನ್ ವೈದಿಕ ಕಲ್ಚರ್ ವಿಶ್ವವಿದ್ಯಾಲಯ ಚೆನ್ನೈ ಗೌರವಾನ್ವಿತ ಡಾಕ್ಟರೇಟ್ ಪುರಸ್ಕೃತರಾದ ಡಾಕ್ಟರ್ ಸುಭಾಶ್ಚಂದ್ರ ಸಂಭಾಜಿ , ಶ್ರೀ ಗುರು ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಡಾಕ್ಟರ್ ಶಂಕರ ಬಾಳಿ, ಯುವ ಮುಖಂಡರು ರಾಜೇಂದ್ರ ರಾಜನಾಳ, ಲೋಕೋಪಯೋಗಿ ಇಲಾಖೆಯ ನಿಬಂಧಕರು (ನಿವೃತ್ತ) ರಾದ ಎಸ್. ಎ. ಪೂಜಾರಿ ಕಾಶಿಬಾಯಿ ಗುತ್ತೇದಾರ ಇತರರು ಭಾಗವಹಿಸಿದ್ದರು. ರಾಜೇಂದ್ರ ರಾಜನಾಳ ನಿರೂಪಿಸಿದರು.
ಕಲಬುರಗಿ: ಜೀವನದಲ್ಲಿ ಎದುರಾಗುವ ಅರಿಷಡ್ ವೈರಿಗಳನ್ನು ಗೆದ್ದು ಉತ್ತಮ ಬದುಕು ಕಟ್ಟಿದರೆ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮಾಜಿ ಲೋಕಸಭಾ…
ಸುರಪುರ: ಕನ್ನಡ ಸಾಹಿತ್ಯ ಸಂಘ ಸುರಪುರ ಹಾಗೂ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ವತಿಯಿಂದ 38ನೇ ನಾಡಹಬ್ಬ ಉತ್ಸವಾಚರಣೆ ಅಂಗವಾಗಿ ನಗರದ…
ಸುರಪುರ: ನಗರದ ಶ್ರೀ. ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಸಮೂಹ ಸಂಸ್ಥೆಗಳ ಅಡಿಯಲ್ಲಿ ನಡೆದ…
ಸುರಪುರ: ಕೊಡೇಕಲ್ ಗ್ರಾಮದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಇದೇ ಅಕ್ಟೋಬರ್ 8 ರಂದು ಸುರಪುರ ಬಂದ್…
ಕಲಬುರಗಿ: ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ್ ಎಸ್ ಕಿಳ್ಳಿ ರವರ ಜನ್ಮ ದಿನದ ಆಂಗವಾಗಿ ಶ್ರೀನಿವಾಸ ಸರಡಗಿ…
ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರ್ಗಿ ಮತ್ತು ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರ್ಗಿಯ ಎನ್.ಎಸ್. ಎಸ್ ಘಟಕದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾತ್ಮ…