ಸತ್ಯಂಪೇಟೆಯಲ್ಲಿ ತಂದೆ ತಾಯಿಯರ ಸ್ಮರಣೆಯಲ್ಲಿ ಬಸವ ತತ್ವ ಸಮಾವೇಶ

ಬಸವಕಲ್ಯಾಣದಲ್ಲಿ ಬಸವಣ್ಣರನ್ನು ರಕ್ಷಣೆ ಮಾಡುತ್ತೇವೆ ಎನ್ನುವವರ ಬಗ್ಗೆ ಎಚ್ಚರ ಬೇಕು-ಖಾಸಾ ಮಠದ ಶ್ರೀ

ಸುರಪುರ: ನಗರದ ಸತ್ಯಂಪೇಟೆಯ ಬಸವ ಪಕ್ಷಿಧಾಮದಲ್ಲಿ ಶರಣ ಗುರಪ್ಪ ಯಜಮಾನರ ೪೧ನೇ,ಶರಣೆ ಶಿವಮ್ಮ ತಾಯಿಯವರ ೧೪ನೇ ಹಾಗೂ ಶರಣ ಲಿಂಗಣ್ಣ ಸತ್ಯಂಪೇಟೆಯವರ ೧೦ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಬಸವ ತತ್ವ ಸಮಾವೇಶ ನಡೆಸಲಾಯಿತು.

ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಗುರುಮಠಕಲ್ ಖಾಸಾಮಠದ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮೀಜಿ ಮಾತನಾಡಿ,ಒಂಬೈನೂರು ವರ್ಷಗಳಿಂದ ಬಸವಣ್ಣನವರನ್ನು ವಿರೋಧಿಸುತ್ತಾ ಬಂದವರು ಈಗ ಬಸವಕಲ್ಯಾಣದಲ್ಲಿ ಬಸವಣ್ಣನವರನ್ನು ರಕ್ಷಣೆ ಮಾಡುತ್ತೇವೆ ಎಂದು ಬರುವ ಮುಖಗೇಡಿಗಳ ಬಗ್ಗೆ ಇಂದು ಎಲ್ಲರು ಎಚ್ಚರ ದಿಂದ ಇರಬೇಕು ಎಂದರು.ಅಲ್ಲದೆ ಈ ಭಾಗದಲ್ಲಿಯೇ ಬಸವ ತತ್ವ ಪ್ರಸಾರ ಕಾಯಕದಲ್ಲಿ ಸತ್ಯಂಪೇಟೆ ಮನೆತನ ಸದಾಕಾಲ ಶ್ರಮಿಸುತ್ತಿದೆ.ಇಂದು ತಮ್ಮ ತಂದೆ ತಾಯಿಯರ ಸ್ಮರಣೆ ಅಂಗವಾಗಿ ಇಂತಹ ಒಂದು ಕಾರ್ಯಕ್ಕೆ ಮುಂದಾಗಿರುವ ಮಲ್ಲಿಕಾರ್ಜುನ ಸತ್ಯಂಪೇಟೆಯವರಾದಿಯಾಗಿ ಎಲ್ಲರ ಸೇವೆ ಅಮೋಘವಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಹೋರಾಟಗಾರ್ತಿ ಕಲ್ಪನಾ ಗುರಸುಣಗಿ ಮಾತನಾಡಿ,ಇಂದು ದೇಶದಲ್ಲಿ ಮಹಿಳೆಯರು ನಿತ್ಯ ಶೋಷಣೆಗೆ ಒಳಗಾಗುತ್ತಿದ್ದಾರೆ.ಒಂದು ಅಂಕಿಅಂಶಗಳ ಪ್ರಕಾರ ದಿನಕ್ಕೆ ೫೩ ಮಹಿಳೆಯರ ಮೇಲೆ ಅತ್ಯಾಚಾರದಂತಹ ಹೀನ ಕೃತ್ಯಗಳು ನಡೆಯುತ್ತವೆ ಎಂದು ತಿಳಿದು ಇದನ್ನು ನೋಡಿದಾಗ ಸಮಾಜ ಎತ್ತ ಸಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು ಅಲ್ಲದೆ ದೇಶದಲ್ಲಿನ ಆಳುವ ಸರಕಾರಗಳ ಕೆಟ್ಟ ನೀತಿಯಿಂದಾಗಿ ರೈತರ ಸ್ಥಿತಿ ಚಿಂತಾಜನಕವಾಗಿ ನಿತ್ಯವು ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕಲಬುರ್ಗಿ ಯಾದಗಿರಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಾ:ಸುರೇಶ ಸಜ್ಜನ್ ಮಾತನಾಡಿ,ನಮಗೆಲ್ಲ ಬಸವ ತತ್ವ ಬೋಧನೆಯಲ್ಲಿ ಲಿಂಗಣ್ಣ ಸತ್ಯಂಪೇಟೆಯವರ ಕೊಡುಗೆ ತುಂಬಾ ಇದೆ.ಇಂದು ನಮ್ಮಲ್ಲಿ ಅನೇಕ ವಚನಗಳು ಬದುಕಿನಲ್ಲಿ ಅಳವಡಿಸಿಕೊಳ್ಳಲು ಪ್ರೇರಣೆಯಾಗಿದ್ದಾರೆ ಎಂದರು.ಅಲ್ಲದೆ ನಗರದ ವೀರಶೈವ ಕಲ್ಯಾಣ ಮಂಟಪದ ಬಳಿಯಲ್ಲಿ ಇನ್ನೂ ಕೆಲವು ತಿಂಗಳುಗಳಲ್ಲಿ ಬಸವಣ್ಣನವರ ಮೂರ್ತಿ ಅನಾವರಣಗೊಳ್ಳಲಿದೆ ಎಂದರು.ಜಿಲ್ಲೆಯ ರೈತರಿಗಾಗಿ ಸಾವಿರಾರು ಕೋಟಿ ರೂಪಾಯಿಗಳ ಸಾಲ ವಿತರಣೆ ಮಾಡಲಾಗುತ್ತಿದೆ,ಜಿಲ್ಲೆಯ ರೈತರು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಅನುಭಾವಿಗಳಾಗಿ ವೇದಿಕೆ ಮೇಲಿದ್ದ ನಿವೃತ್ತ ಪ್ರಾಂಶುಪಾಲ ಬಸವರಾಜ ಬಾವಿ,ಡಾ: ಗಂಗಮ್ಮ ಸತ್ಯಂಪೇಟೆ ಕೃಷಿ,ಮಹಿಳೆ ಹಾಗೂ ಶರಣ ತತ್ವದ ಕುರಿತು ಅನುಭಾವ ನೀಡಿದರು ಹಾಗೂ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಾಹಿತಿ ವಿಶ್ವನಾಥರಡ್ಡಿ ಗೊಂದಡೆಗಿ,ಹೋರಾಟಗಾರ ಚನ್ನಪ್ಪ ಆನೆಗುಂದಿ,ಡಾ:ಶರಣಪ್ಪ ಯಾಳಗಿ,ಮುದ್ದಣ್ಣ ಅಮ್ಮಾಪುರ ,ಗುಂಡಣ್ಣ ಕಲಬುರ್ಗಿ ಹಾಗೂ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿದ ಇಂದೂಧರ ಮಹಾಸ್ವಾಮಿ ಗಡಿಸೋಮನಾಳ ಹಾಗೂ ಅಧ್ಯಕ್ಷತೆವಹಿಸಿದ್ದ ಸಾಹಿತಿ ಶಿವಣ್ಣ ಇಜೇರಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಹಿರಿಯ ಮುಖಂಡರಾದ ವಕೀಲ ಜಿ.ಎಸ್.ಪಾಟೀಲ್,ಎಸ್.ಎಮ್ ಕನಕರಡ್ಡಿ,ನಿವೃತ್ತ ಪ್ರಾಂಶುಪಾಲ ಬಸವರಾಜಪ್ಪ ನಿಷ್ಠಿ ದೇಶಮುಖ,ಬಸವರಾಜ ಜಮದ್ರಖಾನಿ ರೈತರಾದ ಬನಶಂಕರಯ್ಯಸ್ವಾಮಿ ರುಮಾಲಮಠ,ಮಹಾದೇವಪ್ಪ ಗಾಳೆನೂರ,ಮಲ್ಲಪ್ಪ ನಾಯ್ಕೊಡಿ ಹಾಗೂ ಹಣಮಂತ ಕೊಂಗಂಡಿಯವರಿಗೆ ಸನ್ಮಾನಿಸಲಾಯಿತು.ಕಾರ್ಯಕ್ರಮದ ಆರಂಭದಲ್ಲಿ ವಿಶ್ವಗುರು ಬಸವಣ್ಣನವರ ಹಾಗೂ ಸ್ಮರಣೋತ್ಸವದ ಎಲ್ಲ ಮಹನಿಯರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿ ವಂದಿಸಿದರು.

ಹೋರಾಟಗಾರ ಮಲ್ಲಿಕಾರ್ಜುನ ಸತ್ಯಂಪೇಟೆ ಎಲ್ಲರನ್ನು ಸ್ವಾಗತಿಸಿ ಬಸವ ತತ್ವದ ಅವಶ್ಯಕತೆ ಕುರಿತು ಮಾತನಾಡಿದರು,ಪತ್ರಕರ್ತ ಶಿವರಂಜನ್ ಸತ್ಯಂಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿದರು,ಕುಮಾರ ಪ್ರಣವ ಸತ್ಯಂಪೇಟೆಯ ಭಾಷಣ ಎಲ್ಲರ ಹುಬ್ಬೇರಿಸುವಂತಿತ್ತು ಹಾಗೂ ಸುವರ್ಣ ಹಿರೇಮಠ ಶಾಂತಾ ಮಂಡಗಳ್ಳಿ ವಚನ ಪ್ರಾರ್ಥನೆ ಮಾಡಿದರು.ಪತ್ರಕರ್ತ ರಾಜು ಕುಂಬಾರ ವಕೀಲ ಸಂಗಣ್ಣ ಗುಳಗಿ ನಿರೂಪಿಸಿದರು,ಶಿವರುದ್ರ ಉಳ್ಳಿ ವಂದಿಸಿದರು.ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯ ಬಸವಾಭಿಮಾನಿಗಳಿದ್ದರು.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

2 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

4 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

4 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

4 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

4 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

4 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420