ಭಾಲಿ: ಪಟ್ಟಣದ ಡೊಂಬರಾಟದ ಓಣಿಯಲ್ಲಿ ಅಕ್ಕನಾಗಮ್ಮನವರ ಜಯಂತಿ ಹಾಗೂ ಬಸವಪಂಚಮಿ ಆಚರಿಸಲಾಯಿತು.
ಸಮಾರಂಭದ ಸಾನಿಧ್ಯ ವಹಿಸಿದ ಹಿರೇಮಠ ಸಂಸ್ಥಾನ ಪರಮಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು, ರೈಲ್ವೆ ಸ್ಟೇಷನ್ ಹತ್ತಿರ ಇರುವ ಡೊಂಬರಾಟದ ಓಣಿಯಲ್ಲಿ ಇರುವ ಜನರು ಅತ್ಯಂತ ಹಿಂದುಳಿದವರು ಆಗಿದ್ದಾರೆ. ಅವರ ಮಕ್ಕಳು ಬೆಳಿಗ್ಗೆ ಎದ್ದು ಭಿಕ್ಷೆ ಬೇಡುತ್ತ, ರಸ್ತೆಬದಿಯಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಬಾಟಲುಗಳನ್ನು ಆಯ್ದುಕೊಂಡು ಜೀವನ ನಡೆಸುತ್ತಾರೆ.
ಈ ಜನಾಂಗದ ಅಭಿವೃದ್ಧಿಗಾಗಿ ಅವರ ಮಕ್ಕಳನ್ನು ನಾವು ಉಚಿತವಾಗಿ ಶಿಕ್ಷಣ ನೀಡುತ್ತಿದ್ದೇವೆ. ಇವರ ಬೆಳವಣಿಗೆಯೇ ನಿಜಾರ್ಥದಲ್ಲಿ ನಮ್ಮ ದೇಶದ ಮತ್ತು ನಮ್ಮ ಸಮಾಜದ ಬೆಳವಣೆ ಅಡಗಿದೆ. ಬಸವಣ್ಣನವರು ಇಂತಹ ಅತ್ಯಂತ ಹಿಂದುಳಿದ ಜನರನ್ನು ಅಭಿವೃದ್ಧಿಯ ಪಥದಲ್ಲಿ ತಂದು ಅವರಿಗೆ ಮನುಷ್ಯತ್ವದ ಘನಮಹಿಮೆಯನ್ನು ಎತ್ತಿ ತೋರಿಸಿದರು. ಅವರು ಜೀವನದುದ್ದಗಲಕ್ಕೂ ಹಿಂದುಳಿದ ಜನರ ಅಭಿವೃದ್ಧಿಗಾಗಿಯೆ ದುಡಿದರು.
ಅವರ ಲಿಂಗೈಕ್ಯ ದಿನವನ್ನು ಇಂತಹ ಸಮುದಾಯದ ಮಧ್ಯದಲ್ಲಿ ಆಚರಿಸುವುದೆ ಅರ್ಥಪೂರ್ಣ. ಆ ದಿಶೆಯಲ್ಲಿ ಪ್ರತಿವರ್ಷ ನಾವು ಅಕ್ಕನಾಗಮ್ಮ ಜಯಂತಿ ಮತ್ತು ಬಸವಪಂಚಮಿ ಹಾಲು ಕುಡಿಸುವ ಹಬ್ಬವನ್ನಾಗಿ ಅಷ್ಟೇ ಅಲ್ಲದೆ ಈ ಎಲ್ಲ ಮಕ್ಕಳಿಗೆ ಪ್ರಸಾದ ಮಾಡಿಸುವುದು, ಬಟ್ಟೆ ವಿತರಿಸುವು ಮೂಲಕ ಆಚರಣೆ ಮಾಡುತ್ತ ಬಂದಿದ್ದೇವೆ ಎಂದು ನುಡಿದರು. ಪೂಜ್ಯ ಶ್ರೀ ಬಸವಲಿಂಗ ಸ್ವಾಮಿಗಳು ಸಮ್ಮುಖ ವಹಿಸಿದ್ದರು.
ಈ ಸಮಾರಂಭದಲ್ಲಿ ಶರಣ ಸಾಹಿತ್ಯ ಚಿಂತಕರಾದ ಶರಣ ವಿಶ್ವರಾಧ್ಯ ಸತ್ಯಂಪೇಟೆ, ಬಸವರಾಜ ಮರೆ, ವಸಂತ ಹುಣಸನಾಳೆ, ಶಂಭುಲಿಂಗ ಕಾಮಣ್ಣ, ಶಾಂತಯ್ಯ ಸ್ವಾಮಿ, ಗಣಪತಿ ಬಾವುಗೆ, ಶಿವಪುತ್ರ ದಾಬಶೆಟ್ಟಿ ಡಾ.ಚನ್ನಬಸವ ಪಟ್ಟದ್ದೇವರು ಪತ್ತಿನ ಸಹಕಾರ ಸಂಘ(ನಿ) ಭಾಲ್ಕಿಯ ಸಿಬ್ಬಂದಿಯವರು ಉಪಸ್ಥಿತರಿದ್ದರು. ಶ್ರೀಮಠದಿಂದ ಎಲ್ಲರಿಗೂ ಪ್ರಸಾದ ವಿತರಿಸಲಾಯಿತು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…