ಕಲಬುರಗಿ:ಪ್ರತಿಯೋಬ್ಬರು ಅಧ್ಯಾತ್ಮಿಕ ಪ್ರವಚನಗಳನ್ನು ಕೇಳುವುದರಿಂದ ಬದುಕಿಗೆ ನೆಮ್ಮದಿ ಕಂಡುಕೊಳ್ಳಲು ಸಾಧ್ಯ ಎಂದು ಶರಣ ಚಿಂತಕ ಹಾಗೂ ಜಿಡಿಎ ಮಾಜಿ ಅಧ್ಯಕ್ಷರಾದ ಶಾಮರಾವ ಪ್ಯಾಟಿ ಹೇಳಿದರು.
ಜಯನಗರ ಶಿವಮಂದಿರದಲ್ಲಿ ಶ್ರಾವಣ ಮಾಸದ ನಿಮಿತ್ತ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಜರುಗುತ್ತಿರುವ 15 ನೇ ದಿನದ ಅಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಶರಣರು,ಸಂತರು ನಡೆಸಿದ ಸರಳ ಜೀವನ ಇಂದಿನ ಜನಾಂಗಕ್ಕೆ ಮಾದರಿಯಾಗಬೇಕು.ಬಸವಣ್ಣನವರು, ಕಲಬುರಗಿ ಶರಣಬಸವೇಶ್ವರರು ಪರೋಪಕಾರಿಯಾಗಿ ಬದುಕಿದರು.ಕಾಯಕದಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆ ಮೆರೆದವರು.
ಜಾತಿ, ಧರ್ಮ,ಭೇದ ಭಾವ ಅನ್ನದೆ ಮಾನವ ಕುಲದ ಉದ್ಧಾರಕ್ಕಾಗಿ, ಲೋಕ ಕಲ್ಯಾಣಕ್ಕಾಗಿ ಶ್ರಮಿಸಿದ ಮಹಾನರು.ಅಂಥವರ ಪ್ರವಚನ, ಪುರಾಣಗಳು ಕೇಳುವ ಮೂಲಕ ಬದುಕಿಗೆ ಹೊಸ ಚೈತನ್ಯ ತಂದುಕೊಳ್ಳಬೇಕು ಎಂದ ಅವರು ಅಕ್ಕಮಹಾದೇವಿ ಕನ್ನಡದ ಮೊದಲ ಮಹಿಳಾ ಕವಿತ್ರಿಯಾಗಿದ್ದು ಹೆಮ್ಮೆಯ ವಿಷಯ.ಚಿಕ್ಕ ವಯಸ್ಸಿನಲ್ಲಿ ಸಕಲ ಸುಖವನ್ನು ತ್ಯಜಸಿ, ಲೌಕಿಕ ಜೀವನವನ್ನು ತೊರೆದು ಶರಣ ಚಳುವಳಿಯ ಪ್ರಮುಖರಾಗಿ,ಸ್ವಾಭಿಮಾನದ ಪ್ರತೀಕವಾಗಿ ಬೆಳೆದವರು ಎಂದು ಗುಣಗಾನ ಮಾಡಿದರು.
ಪ್ರವಚನಕಾರರಾಗಿ ಆಗಮಿಸಿದ ಶರಣ ಶಿವಲಿಂಗಪ್ಪ ಚೆಂಗನಾಳ ಅವರು ಮಾತನಾಡಿ ಶರಣರ ಧರ್ಮ ಎಲ್ಲರಲ್ಲೂ ಸಮಾನತೆ ಕಾಣುವ, ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರಣೆ ನೀಡುತ್ತದೆ.ಸಕಲ ಜೀವರಾಶಿಯ ಲೇಸನ್ನೇ ಬಯಸಿ ಬಸವಣ್ಣನವರ ವಚನಗಳ ಮೂಲಕ ದಾರಿ ತೋರುವ ಬೇಳಕಾಗಿದೆ ಎಂದು ಹೇಳಿದ ಅವರು ಜಯನಗರ ಶಿವಮಂದಿರದಲ್ಲಿ ನಿರಂತರ ಯಶಸ್ವಿಯಾಗಿ 15 ದಿನದಿಂದ ಪ್ರವಚನ ನಡೆದಿದ್ದು ಸಂತೋಷ ತಂದಿದೆ ಎಂದು ಹೇಳಿದರು.
ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಅಧ್ಯಕ್ಷತೆ ವಹಿಸಿದ್ದರು.ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಬಾಲಕೊಂದೆ, ಉಪಾಧ್ಯಕ್ಷ ವಿರೇಶ ದಂಡೋತಿ ಡಾ.ಎ.ಎಸ್.ಭದ್ರಶೆಟ್ಟಿ ವೇದಿಕೆಯಲ್ಲಿ ಇದ್ದರು.ಶ್ರೀಮತಿ ವಿಜಯಲಕ್ಷ್ಮೀ ಚೆಂಗನಾಳ ಅವರು ಭಕ್ತಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯದರ್ಶಿ ಶಿವಪುತ್ರಪ್ಪ ಮರಡಿ ಕಾರ್ಯಕ್ರಮ ನಿರೂಪಿಸಿದರು.ಪ್ರಮುಖರಾದ ಬಸವರಾಜ ಮಾಗಿ, ಮಲ್ಲಿಕಾರ್ಜುನ ಕಲ್ಲಾ, ವಾಸುದೇವ ಮಾಲಿ ಬೀರಾದಾರ, ಬಸವರಾಜ ಅನ್ವರಕರ,ಎಂ.ಡಿ.ಮಠಪತಿ,ಬಡಶೇಷಿ, ಮಲ್ಲಯ್ಯ ಸ್ವಾಮಿ ಬಿದಿಮನಿ, ಸುರೇಖಾ ಬಾಲಕೊಂದೆ, ಗೀತಾ ಸಿರಗಾಪೂರ, ಅನುರಾಧ ಕುಮಾರಸ್ವಾಮಿ ಸೇರಿದಂತೆ ಬಡಾವಣೆಯ ಅನೇಕ ಮಹಿಳೆಯರು, ಹಿರಿಯರು ಭಾಗವಹಿಸಿದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…