ಬಾಗಲಕೋಟೆ : ನಗರದ ವಾರ್ಡ್ ನಂಬರ ೫ ರ ಝಂಡಾ ಗಲ್ಲಿಯಲ್ಲಿ , ಯಂಗ್ ಕಮೀಟಿ ವತಿಯಿಂದ ಆಯೋಜಿಸಿದ 75 ನೇ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಮಾರಂಭ ನಡೆಯಿತು.
,ಸಮಾಜದ ಮುಖಂಡ ಮುಖ್ಯಾದ್ಯಪಕ ಹಾಜಿ ಬಾಷಾಸಾಬ ಹೊನ್ಯಾಳ ಇವರು ಧ್ವಜಾ ರೋಹಣ ನೆರವೇರಿಸಿ ಮಾತನಾಡಿ ಈ ದೇಶದಲ್ಲಿ ಸ್ವಾತಂತ್ರ್ಯ ಎಲ್ಲ ಜಾತಿ ಜನಾಂಗದ ತ್ಯಾಗ ಬಲಿದಾನಗಳಿಂದ ಸ್ವಾತಂತ್ರ್ಯವಾಯಿತು ಹಾಗೂ ಇಂದಿನ ವ್ಯವಸ್ಥೆಯಲ್ಲಿ ಶೈಕ್ಷಣಿಕವಾಗಿ ರಾಜಕೀಯವಾಗಿ ಸಾಮಾಜಿಕವಾಗಿ ಎಲ್ಲ ಜಾತಿ ಜನಾಂಗದ ಪರಸ್ಪರ ಬೆರೆತು ದೇಶ ಕಟ್ಟಲಿಕ್ಕೆ ಸಂಕಲ್ಪ ಮಾಡಬೇಕೆಂದರು.
ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯ ಚನ್ನವೀರಪ್ಪ ಅಂಗಡಿ ಮಾತನಾಡಿ ಕೋಮುವಾದಿಗಳಿಂದ ರಾಷ್ಟ್ರವನ್ನು ಉಳಿಸಲು ಎಲ್ಲ ಜಾತಿ ಜನಾಂಗದವರು ಸೌಹಾರ್ದತೆಯಿಂದ ಒಟ್ಟಿಗೆ ಸೇರಿ ದೇಶ ಕಟ್ಟಲಿಕ್ಕೆ ಸಹಕಾರಿಯಾಗಬೇಕೆಂದು ಒತ್ತಿ ಹೇಳಿದರು
,ಬಾಗಲಕೋಟ ಬ್ಲಾಕ ಕಾಂಗ್ರೆಸ್ ಅಲ್ಪಸಂಖ್ಯಾತರ ಅಧ್ಯಕ್ಷ ತೋಹಿದ ಅಲಿ ಸಂತಿಶಿರೂರ ಮಾತನಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ನಮ್ಮ ಭಾರತದ ಉಲಮಾಗಳ ರೇಶ್ಮಿ ರುಮಾಲ್ ಕ್ರಾಂತಿಕಾರಿ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಿ, ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಎಲ್ಲರನ್ನು ಸ್ಮರಿಸಿದರು.
,
ಜಿಲ್ಲಾ ಕಾಂಗ್ರೆಸ್ ಮುಖಂಡ ಇಮಾಮ ಸಾಬ ಬಳಬಟ್ಟಿ ,ಹಿರಿಯರಾದ ಹಾಜಿ ಅಬ್ದುಲ್ ಖಾದರ್, ಶ್ರೀರಂಗಪಟ್ಟಣ ,ಡೋಂಗ್ರಿಸಾಬ ಕಿರಸೂರ,ಮದನ್ ಸಾಬ ರಂಗರೇಜ್ , ಶೌಕತಲಿ ಸಂತಿಶಿರೂರು , ನೌಜವಾನ್ ಕಮಿಟಿಯ, ರಾಜೇಸಾಬ ಬೀಳಗಿ, ಮಹೆಬೂಬ ಕಿರಸೂರ , ಬಾಬುಲಾಲ್ ತಿಪ್ಪಲ್ದಿನ್ನಿ,ಮುಜಮ್ಮಿಲ್ ಬದಾಮಿ, ಬಂದೆನವಾಜ ಕಿರಸುರ, ಬಶೀರ್ ಸಂತಿ ಶಿರೂರ , ರಾಜೇಸಾಬ್ ಬೀಳಗಿ , ಅಬೂಬಕರ್ ಕಾಂಟ್ರಾಕಟರ, ಮಶಾಕ್ ಸಂತಿಶಿರೂರ, ಯಾಸೀನ್ ದೌಡಿ, ಮಹಮದ್ ಮುಲ್ಲಾ, ಮುನ್ನಾ ಶ್ರೀರಂಗಪಟ್ಟಣ, ಬಂದೇನವಾಜ್ ಮಾಲ್ದಾರ್ , ಜಮೀಲ್ ಕೋಟಿ, ಬಿಲಾಲ್ ಸಂತಿಶಿರುರ, ಶಬ್ಬೀರ್ ತಂಬೋಲಿ, ಉರ್ದು ಹೆಣ್ಣು ಮಕ್ಕಳ ಶಾಲೆ ಮುಖ್ಯಾಧ್ಯಾಪಕರು ಮುಜಾವರ್, ಶಾಲೆಯ ಸಿಬ್ಬಂದಿ ವರ್ಗ ಅಂಗನವಾಡಿ ಕಾರ್ಯಕರ್ತೆ ಹಾಗೂ ಝಂಡಾ ಗಲ್ಲಿಯ ಸಮಸ್ತ ಗುರು ಹಿರಿಯರು ಯುವಕರು ಮಿತ್ರರು ಶಾಲಾ ಮಕ್ಕಳು ಇನ್ನೂ ಅನೇಕರು ಉಪಸ್ಥಿತರಿದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗಕ್ಕೆ ಕಲಂ 371ಜೆ ಯಂತೆ ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮ ಎಂದು ಘೋಷಣೆ ಮಾಡಲು ಸರಕಾರದ…
ಕಲಬುರಗಿ: ನಗರದ ಸಂಗಮೇಶ್ವರ ಸಭಾಗೃಹದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ದಕ್ಷಿಣ ವಲಯದ ವಿಭಾಗ ಮಟ್ಟದ 2ನೇ ದಾಸ ಸಾಹಿತ್ಯ ಸಮ್ಮೇಳನ…
ಕಲಬುರಗಿ : ಗುಲ್ಬರ್ಗ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ನಿರ್ದೇಶಕ ಡಾ. ಎಂ ಎಸ್ ಪಾಸೋಡಿ ಅವರು ಜಪಾನ್…
ಕಲಬುರಗಿ: ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮವಹಿಸಿ ಚರಂಡಿ ನೀರನ್ನು ಸ್ವಚ್ಛಗೊಳಿಸಿ, ಸೊಳ್ಳೆಗಳು ಬಾರದಂತೆ ಫಾಗಿಂಗ್ ಮಾಡಿಸಬೇಕು…
ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…
ಕಲಬುರಗಿ: ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…