ಬಿಸಿ ಬಿಸಿ ಸುದ್ದಿ

ತಡಕಲ ಗ್ರಾ.ಪಂ 3 ಜನ ಸದಸ್ಯರ ಸದಸ್ಯತ್ವ ರದ್ದತಿಗೆ ಆಗ್ರಹ

ಕಲಬುರಗಿ: ಸರಕಾರಕ್ಕೆ ತಪ್ಪು ಮಾಹಿತಿ ನೀಡುತ್ತಿರುವ ಮತ್ತು ಸರಕಾರದ ಪ್ರಮುಖ ಯೋಜನೆಗಳ ಅನು?ನಕ್ಕೆ ಅಡಚಣೆ  ಉಂಟು ಮಾಡುತ್ತಿರುವ ತಡಕಲ ಗ್ರಾಮ ಪಂಚಾಯತನ ೩ ಜನ ಸದಸ್ಯರ ಸದಸ್ಯತ್ವ ರದ್ದು ಪಡಿಸುವಂತೆ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಇತರೆ ೧೦ ಜನ ಸದಸ್ಯರು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದ ನಿಯೋಗವು, ತಡಕಲ ಗ್ರಾಮ ಪಂಚಾಯತ ಸದಸ್ಯರಾದ ವಿಶ್ವನಾಥ ಪವಾಡಶೆಟ್ಟಿ, ನಾಗೇಂದ್ರಪ್ಪಾ ಥಂಬೆ, ಶರಣಬಸಪ್ಪ ಜಮಾದಾರ ಇವರುಗಳು ಮನೆ ಹಂಚಿಕೆ ವಿಷಯವಾಗಿ ಜಿ.ಪಂ ಕಚೇರಿ ಮುಂದೆ ಧರಣಿ ನಡೆಸುವುದಾಗಿ ಸರ್ಕಾರಕ್ಕೆ ಬೆದರಿಸುವ ತಂತ್ರ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಗ್ರಾಮದಲ್ಲಿ ಸರಕಾರದ ನಿಯಮಗಳ ಪ್ರಕಾರ ಮುಂಚಿತವಾಗಿ ಡಂಗೂರ ಸಾರಿ ದಿನಾಂಕ ೧೭ನೇ ಜೂನ್ ೨೦೨೨ ರಂದು ತಡಕಲ ಗ್ರಾಮ ಪಂಚಾಯತ ಕಾರ್ಯಾಲಯದ ಮುಂದೆ ಗ್ರಾಮಸಭೆ ನಡೆಸಿ ಸಾರ್ವಜನಿಕರ ಎದುರಗಡೆ ಮನೆಗಳ ಹಂಚಿಕೆ ಮಾಡಲಾಗಿರುತ್ತದೆ ಅಲ್ಲದೇ ಗ್ರಾಮ ಸಭೆಯಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ವಿಶ್ವನಾಥ ಪವಾಡಶೆಟ್ಟಿ, ನಾಗೇಂದ್ರ ತಂದೆ ಗುರುಲಿಂಗಪ್ಪ ಥಂಬೆ, ಶರಣಬಸಪ್ಪ ಜಮಾದಾರ ಕಲ್ಯಾಣಿ ತುಕಾಣೆ ಇವರುಗಳು ಖುದ್ದಾಗಿ ಭಾಗವಹಿಸಿದ್ದಾರೆ.( ವಿಡಿಯೋ ಸಿ.ಡಿ ಯಲ್ಲಿ ತಾವು ಪರಿಸೀಲಿಸಬಹುದು) ಇವರೆಲ್ಲರ ಎದುರಗಡೆ ಮನೆಗಳ ಹಂಚಿಕೆ ಪಾರದರ್ಶಕವಾಗಿ ನಡೆದಿದೆ. ಹೀಗಿರುವಾಗ ಅವ್ಯವಹಾರ ಮಾಡುವ ಪ್ರಶ್ನೆ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ್ದಾರೆ.

ಮೂರು ಜನ ಸದಸ್ಯರು ಗ್ರಾಮ ಪಂಚಾಯತಗೆ ಮಂಜೂರಾಗಿ ಬಂದಿರುವ ಒಟ್ಟು ಮನೆಗಳನ್ನು ಸದಸ್ಯರಿಗೆ ಹಂಚಿಕೆ ಮಾಡುವಂತೆ ಕೇಳಿರುತ್ತಾರೆ ಇದಕ್ಕೆ ಸರಕಾರದ ನಿಯಮಗಳ ಪ್ರಕಾರ ಅವಕಾಶವಿರುವುದಿಲ್ಲ ಎಂದು ತಿಳಿ ಹೇಳಿರುತ್ತೇವೆ ಆದರೆ ಇವರುಗಳು. ಫಲಾನುಭವಿಗಳಿಂದ ಹಣ ಪಡೆದುಕೊಂಡು ಮನೆ ಹಂಚಿಕೆ ಮಾಡಬೇಕೆಂಬುದು ಇವರ ಮೂಲ ಉದ್ದೇಶವಾಗಿರುತ್ತದೆ ಎಂದು ಆರೋಪಿಸಿದ್ದಾರೆ.

ತಡಕಲ ಗ್ರಾಮ ಪಂಚಾಯತ ಎದುರಗಡೆ ಇದೇ ಮನೆಗಳ ಹಂಚಿಕೆ ವಿ?ಯ  ಕುರಿತು  ಈ ಹಿಂದೆ ಧರಣಿ ಕುಳಿತಾಗ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು ತಡಕಲಕ್ಕೆ ಬಂದು  ಧರಣಿ ಕುಳಿತ ಪಂಚಾಯತ ಸದಸ್ಯರಾದ ವಿಶ್ವನಾಥ  ಪವಾಡಶೆಟ್ಟಿ, ನಾಗೇಂದ್ರ ತಂದೆ ಗುರುಲಿಂಗಪ್ಪ ಥಂಬೆ ಮತ್ತು ಶರಣಬಸಪ್ಪ ಜಮಾದಾರ ಇವರುಗಳಿಗೆ ಖುದ್ದಾಗಿ ಬೇಟಿ ಮಾಡಿ ಮನೆಗಳ ಹಂಚಿಕೆಯಲ್ಲಿ ಅವ್ಯವಹಾರವಾದರೆ ನಡೆಯಿರಿ ಫಲಾನುಭವಿಗಳ ಮನೆಗಳ ಸ್ಥಳ ಪರೀಶಿಲನೆ ಮಾಡೋಣ ಎಂದಾಗ ಓಡಿ ಹೋಗಲು ಕಾರಣವೇನು? ಅಂದು ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಕೂಡ ಕೊಡಲಿಲ್ಲವೇಕೆ? ಈ ಪ್ರಶ್ನೆಗಳಿಗೆ ಇವರಲ್ಲಿ ಉತ್ತರವೇ ಇಲ್ಲ. ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡುವುದು ಸರಕಾರದ ಕೆಲಸ ಕಾರ್ಯಗಳಿಗೆ ಅಡಚಣೆ ಉಂಟು ಮಾಡುವುದು ಮಾಹಿತಿ ಹಕ್ಕು ಕಾಯ್ದೆಯಲ್ಲಿ ಅರ್ಜಿ ಸಲ್ಲಿಸಿ ಅಧಿಕಾರಿಗಳಿಗೆ ಬ್ಲ್ಯಾಕ್ ಮೇಲ್ ಮಾಡಿ ಮತ್ತೆ ಅರ್ಜಿಯನ್ನು ಮರಳಿ ಪಡೆಯುವುದು ಇವರ ಕಾಯಕವಾಗಿದೆ ಎಂದು ಕುಹಕವಾಡಿದ್ದಾರೆ.

೧೭ನೇ ಜೂನ್ ೨೦೨೨ರಂದು ಮಧ್ಯಾಹ್ನ ೨.೦೦ ಗಂಟೆಗೆ ವಾರ್ಡಸಭೆ ಮಾಡಲು ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಕಣಮಸ ಗ್ರಾಮಕ್ಕೆ ಹೋದಾಗ ಗ್ರಾಮ ಪಂಚಾಯತ ಸದಸ್ಯರಾದ ನಾಗೇಂದ್ರ ಥಂಬೆ, ಪಾರ್ವತಿ ಥಂಬೆ, ಶರಣಬಸಪ್ಪಾ ಜಮಾದಾರ ಇವರು ಅಸಭ್ಯವಾಗಿ ವರ್ತಿಸಿ  ಕೆಲವು ಕುಡುಕ ಜನರನ್ನು ಕರೆದುಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿರುತ್ತಾರೆ ಅಲ್ಲದೇ ಪಿ.ಡಿ.ಓ  ಕೈಯಲ್ಲಿನ ಸರಕಾರದ ಪತ್ರಗಳನ್ನು ಕಸಿದುಕೊಂಡು ರಸ್ತೆಗೆ ಎಸೆದಿರುತ್ತಾರೆ. ಸಾರ್ವಜನಿಕರಿಗೆ ಹೆದರಿಸಿ ಬೆದರಿಸಿ ವಾರ್ಡ ಸಭಗೆ ಅಡಚಣೆಯುಂಟು ಮಾಡಿರುತ್ತಾರೆ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ದುರ್ನಡತೆಗೆ ಒಳಗಾಗಿರುವ ಸರಕಾರಕ್ಕೆ ತಪ್ಪು ಮಾಹಿತಿ ನೀಡಿರುವ ಸರಕಾರದ ಯೋಜನೆಗಳ ಅನು?ನಕ್ಕೆ ಅಡಚಣೆ ಉಂಟು ಮಾಡುತ್ತಿರುವ, ಅಧಿಕಾರಿಗಳಿಗೆ ಬ್ಲ್ಯಾಕ್ ಮೇಲ್  ಮಾಡುವ ತಡಕಲ ಗ್ರಾಮ ಪಂಚಾಯತ ಸದಸ್ಯರಾದ ವಿಶ್ವನಾಥ  ಪವಾಡಶೆಟ್ಟಿ, ನಾಗೇಂದ್ರ ಥಂಬೆ, ಶರಣಬಸಪ್ಪ ಜಮಾದಾರ  ಇವರುಗಳ ಸದಸ್ಯತ್ವ ರದ್ದು ಪಡಿಸುವಂತೆ ಸರಕಾರಕ್ಕೆ ವರದಿ ಸಲ್ಲಿಬೇಕೆಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ನಿಯೋಗದಲ್ಲಿ ಗ್ರಾ.ಪಂ ಅಧ್ಯಕ್ಷೆ ಶಾರದಾ ಗುತ್ತೇದಾರ, ಉಪಾಧ್ಯಕ್ಷ ಮಲ್ಲಿಕಾರ್ಜುನ ಮಾನೋಳೆ, ಸದಸ್ಯರಾದ ರೂಪಾ ಗುಘರೆ, ಅಣವೀರಪ್ಪಾ ಪಾಟೀಲ, ಗೀತಾಂಜಲಿ ವಾಡೆ, ರುದ್ರಪ್ಪಾ ಚಿಮ್ಮನ್, ಲಲಿತಾ ವಡೆಯರ್, ಮಲ್ಲಿನಾಥ ಚಾಂಬರ, ಮಧುಮತಿ ಡಿಗ್ಗಿ, ನಾಗಮ್ಮ ಜಮಾದಾರ, ರತ್ನಾಬಾಯಿ ರಾಜೇರಿ, ಪಾರ್ವತಿ ಜಮಾದಾರ, ಪ್ರಿಯಾಂಕ ಮಾಂಜ್ರೆ ಇದ್ದರು.

emedialine

Recent Posts

ಸುಭಾಷ್ ರಾಠೋಡ್ ಜಗದೇವ್ ಗುತ್ತೇದಾರಿಂದ ಡಾ. ಮಲ್ಲಿಕಾರ್ಜುನ ಖರ್ಗೆಗೆ ಸನ್ಮಾನ

ನವದೆಹಲಿ: ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಜಗದೇವ ಗುತ್ತೇದಾರ ಕಾಳಗಿ ರವರು ಎಐಸಿಸಿ ಅಧ್ಯಕ್ಷರು…

2 hours ago

ಡಾ.ಶರಣಬಸಪ್ಪ ಕ್ಯಾತನಾಳಗೆ ಮುಖ್ಯಮಂತ್ರಿಗಳಿಂದ ಶ್ರೇಷ್ಠ ವೈದ್ಯ ಶ್ರೀ ಪ್ರಶಸ್ತಿ ಪ್ರದಾನ

ಕಲಬುರಗಿ: ಕರ್ನಾಟಕ ಸರ್ಕಾರವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರಾಷ್ಟ್ರೀಯ ವೈದ್ಯರ ದಿನಾಚರಣೆಯ ಅಂಗವಾಗಿ ಪ್ರತಿ ವರ್ಷ ಜುಲೈ…

13 hours ago

ಮುಸ್ಲಿಮರಿಗೆ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸ್ಥಾನ ನೀಡಿ: ಅಬ್ದುಲ್ ರಹೀಮಾನ್ ಪಟೇಲ್

ಕಲಬುರಗಿ: ‘ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಸ್ಥಾನವನ್ನು ಮುಸ್ಲಿಂ ಸಮುದಾಯಕ್ಕೆ ನೀಡಬೇಕು. ಮುಂಬರುವ ದಿನಗಳಲ್ಲಿ ಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ…

14 hours ago

ಡಾ. ಫ.ಗು. ಹಳಕಟ್ಟಿ ಯವರ ಜಯಂತಿ ಅಂಗವಾಗಿ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ

ಕಲಬುರಗಿ: ವಚನ ಪಿತಾಮಹ ಎಂದು ಕರೆಸಿಕೊಳ್ಳುವ ಡಾ. ಫ.ಗು. ಹಳಕಟ್ಟಿ ಯವರು ಬಸವಾದಿ ಶರಣರ ವಚನ ಸಾಹಿತ್ಯವನ್ನು ಸಂರಕ್ಷಣೆ ಮಾಡುವ…

15 hours ago

ಮೊಬೈಲ್ ರೀಚಾರ್ಜ್‍ಗಳ ಬೆಲೆ ಹೆಚ್ಚಳ ತಕ್ಷಣವೇ ಹಿಂಪಡೆಯಬೇಕೆಂದು ಆಗ್ರಹಿಸಿ ಪ್ರತಿಭಟನೆ

ಶಹಾಬಾದ: ಖಾಸಗಿ ಟೆಲಿಕಾಂ ಕಂಪನಿಗಳು ಮೊಬೈಲ್ ರೀಚಾರ್ಜ್‍ಗಳ ಬೆಲೆಗಳನ್ನು ಅನಿಯಂತ್ರಿತವಾಗಿ ಹೆಚ್ಚಳ ಮಾಡಿರುವುದನ್ನು ತಕ್ಷಣವೇ ಹಿಂಪಡೆಯಬೇಕೆಂದು ಆಗ್ರಹಿಸಿ ಎಐಡಿವಾಯ್‍ಓ ವತಿಯಿಂದ…

15 hours ago

ಸಾರ್ವಜನಿಕರು ಮಕ್ಕಳನ್ನು ಸರಕಾರಿ ಶಾಲೆಗೆ ದಾಖಲಿಸಿ

ಶಹಾಬಾದ :ಎಲ್ಲರಿಗೂ ಸರಕಾರಿ ನೌಕರಿ ಬೇಕು.ಆದರೆ ಸರಕಾರಿ ಶಾಲೆಯಲ್ಲಿ ನಿಮ್ಮ ಮಕ್ಕಳು ಓದುವುದು ಬೇಡ ಎಂದರೆ ಹೇಗೆ ? ಮೊದಲು…

15 hours ago