ಕಲಬುರಗಿಯಲ್ಲಿ RSS ಪಥಸಂಚಲನ ಮತ್ತು ಈದ್ ಜುಲೂಸ್ ಇಂದು

ಕಲಬುರಗಿ: ದಸರಾ ನಿಮಿತ್ತ ರಾಷ್ಟ್ರೀ ಸ್ವಯಂ ಸೇವಾ ಸಂಘದ ವತಿಯಿಂದ ಹಮ್ಮಿಕೊಳ್ಳಲಾದ ಪಥ ಸಂಚಲನ ಹಾಗೂ 12 ರಬಿಲ್ ಅವಲ್ ನಿಮಿತ್ತ ಈದ್ ಎ ಮಿಲಾದ್ ಉನ್ ನಬಿ ಪ್ರಯುಕ್ತ ಕಲಬುರಗಿ ನಗರದಲ್ಲಿ ನಡೆಸಲಾಗುವ ಜುಲೂಸ್ ಗೆ ಜಿಲ್ಲಾ ಪೊಲೀಸ್ ಇಲಾಖೆ ಅವಕಾಶ ಕಲ್ಪಸಿ ಸೂಕ್ತ ಬಂದೋಬಸ್ತ್ ಮಾಡಿಕೊಂಡಿದೆ.

ಕಲಬುರಗಿಯಲ್ಲಿ ದಸರಾ ಮತ್ತು ಇಂದು ಪ್ರವಾದಿ ಮುಹಮ್ಮದ್ (ಸ.ಅ) ಅವರ ಜನ್ಮದಿನದ ನಿಮಿತ್ತ 43ನೇ ಈದ್ ಎ ಮಿಲಾದ್ ಉನ್ ನಬಿ ಉತ್ಸವ ಆಚರಿಸಲಾಗುತ್ತಿದ್ದು, ಈ ಪ್ರಯುಕ್ತ ಐತಿಹಾಸಿಕ ಕಲಬುರಗಿ ನಗರದ ಬಡಾವಣೆಗಳು ಶೃಂಗಾರಮಯವಾಗಿ ಅಲಂಕಾರಗೊಂಡಿವೆ. ಈದ್ ಜುಲೂಸ್ ಗಾಗಿ ಬಡಾವಣೆಗಳಲ್ಲಿ ಯುವಕರು ಇಸ್ಲಾಮಿಕ್ ಗುರುತುಗಳಾದ ಮಕ್ಕಾ, ಮದೀನಾ ಸೇರಿದಂತೆ ಪ್ರವಾದಿ ಮೊಹಮ್ಮದ್ (ಸ.ಅ) ಅವರ ನೆನಪ್ಪಿನಲ್ಲಿ ಇಸ್ಲಾಮಿಕ್ ಸ್ತಬ್ಧಗಳ ಕಲಾಕೃತಿಗಳು, ಹಾಗೂ ಸ್ತೂಪಗಳು ತಯಾರಿಸಿ ಜುಲೂಸಿನಲ್ಲಿ ಮೆರವಣಿಗೆ ಮಾಡುವ ಮೂಲಕ ಪ್ರದರ್ಶನ ಮಾಡಲಿದ್ದಾರೆ.

ಇಂದು ದಸರಾ ನಿಮಿತ್ತ ಆರ್.ಎಸ್.ಎಸ್ ಹಮ್ಮಿಕೊಂಡಿರುವ ಪಥಸಂಚಲನದ ಮಾರ್ಗ ಬದಲಾವಣೆಗೆ ಪೊಲೀಸರು ಸಂಘದ ಸದಸ್ಯರಿಗೆ ರೂಟ್ ಮ್ಯಾಪ್ ಸಿದ್ಧಪಡಿಸಿ ನೀಡಿಲಾಗಿದೆ ಎಂದು ತಿಳಿದುಬಂದಿದ್ದು, ಈ ಹಿಂದೆ ಸಂಘದ ಪಥಸಂಚಲನ ಮುಸ್ಲಿಂ ಚೌಕ್ ಗಂಜ್ ಮಾರ್ಗವಾಗಿ ಸಾಗಿತ್ತು. ಈ ಬಾರಿ ಬಹುಮನಿ ಕೋಟೆಯಿಂದ ಪ್ರಾರಂಭವಾಗಿ ಲೋಹಾರ್ ಗಲ್ಲಿ, ಕಪಡಾ ಬಜಾರ್, ಟ್ರಾಫೀಕ್ ಪೊಲೀಸ್ ಠಾಣೆ ಮಾರ್ಗವಾಗಿ ರೂಟ್ ಮ್ಯಾಪ್ ಪೊಲೀಸರು ಹಾಕಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಪಥಸಂಚಲನದ ಹಿನ್ನೆಯಲ್ಲಿ ಮುಸ್ಲಿಮರಿಗೆ ಈದ್ ಮೆರವಣೆಗೆಯನ್ನು 2 ರಿಂದ 5 ಗಂಟೆ ವರೆಗೆ ನಡೆಸದಿರುವ ಬಗ್ಗೆ ಸೂಚಿಸಲಾಗಿದ್ದು, ಲೋಹಾರ ಗಲ್ಲಿ ಮತ್ತು ಕಪಡಾ ಬಜಾರ್ ಬಡಾವಣೆಗಳಿಂದ ಜುಲೂಸ್ ನಲ್ಲಿ ಪಾಲ್ಗೋಳುವ ಸ್ತಬ್ಧ ಕಲಾಕೃತಿಗಳನ್ನು ಸರಿಯಾದ ಸಮಯಕ್ಕೆ ಮುಸ್ಲಿಂ ಚೌಕ್  ತರುವ ರೀತಿಯಲ್ಲಿ ನೋಡಿಕೊಳ್ಳಿ ಎಂದು ಮಾಜಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮೊಹಮ್ಮದ್ ಅಜಗರ್ ಚುಲಬುಲ್ ಮನವಿ ಮಾಡಿದ್ದಾರೆ.

ಈದ್ ಮಿಲಾದ್ ಜುಲೂಸ್ ಸಂಜೆ 5 ಗಂಟೆಯ ನಂತರ ಮುಸ್ಲಿಂ ಚೌಕ್ ನಲ್ಲಿ ಖಾಜಾ ಬಂದಾ ನವಾಜ್ ದರ್ಗಾದ ಪಿಠಾಧಿಪತಿಗಳಾದ ಡಾ. ಸೈಯದ್ ಶಾ ಖುಸ್ರೋಹುಸೈನಿ ಅವರು ಜುಲೂಸ್ ಗೆ ಹಸಿರು ನಿಶಾನೆ ತೂರಿಸುವ ಮೂಲಕ ಚಾಲನೆ ನೀಡಲಿದ್ದಾರೆ ಎಂದು ಡಾ. ಚುಲಬುಲ್ ತಿಳಿಸಿದ್ದಾರೆ.

ಜುಲೂಸ್ ಮುಸ್ಲಿಂ ಚೌಕ್ ಗಂಜ್, ಸೂಪರ್ ಮಾರ್ಕೆಟ್, ಕಪಡಾ ಬಜಾರ್ ಮಾರ್ಗವಾಗಿ ಹಫ್ತ ಗುಂಬಜ್ ಗೆ ತೆರಳುತ್ತದೆ. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಕಲಬುರಗಿ ಸಾಕ್ಷಿಯಾಗದ ರೀತಿಯಲ್ಲಿ ನೋಡಿಕೊಳ್ಳವ ನೀಟಿನಲ್ಲಿ ಎಲ್ಲರೂ ಎಚ್ಚರಿಕೆ ವಹಿಸಬೇಕು. ಪೊಲೀಸರಿಗೆ ಸಹಕಾರ ನೀಡಬೇಕೆಂದು ಮುಸ್ಲಿಮ್ ಸಮುದಾಯದ ಪರವಾಗಿ ಡಾ. ಅಜಗರ್ ಚುಲಬುಲ್ ಮನವಿ ಮಾಡಿದ್ದಾರೆ.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

8 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

10 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

11 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

11 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

11 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

11 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420