ಕಲಬುರಗಿ: ನಗರದ ಎಂ.ಎನ್ ದೇಸಾಯಿ ಪದವಿ ಕಾಲೇಜಿನಲ್ಲಿ ಪುನೀತ್ ರಾಜಕುಮಾರ್ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆಯ ನಿಮಿತ್ಯ ಕನ್ನಡದ ಕೋಷಾಧಿಪತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಕಾಲೇಜಿನ ಕಾರ್ಯದರ್ಶಿ ಜಗನ್ನಾಥ ನಾಗೂರು, ವಿಎಂ ಹಿರೇಮಠ್, ಶೇರ್ ಅಲಿ, ಕಾಲೇಜಿನ ಅಧ್ಯಕ್ಷ ಸಂದೀಪ್ ದೇಸಾಯಿ ಇವರು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ 14 ಜನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ತಲಾ ಎರಡು ವಿದ್ಯಾರ್ಥಿಗಳನ್ನಕೂಡಿ ಒಂದು ತಂಡ ನಿರ್ಮಿಸಲಾಗಿತ್ತು.
ಕಾಲೇಜಿನ ವಿದ್ಯಾರ್ಥಿಗಳಾದ ನರಸಿಂಗ, ಸದಾನಂದ, ವಿಶಾಲ, ಅಕ್ಷಯಕುಮಾರ, ಬಸವರಾಜ, ಸುದೀಪ, ನಿರ್ಮಲಾ, ಬಸವರಾಜ, ಅನುಷಾ, ಶ್ರೀಶೈಲ್, ಸಚಿನ್, ಮೌಲಾಲಿ, ಸವಿತಾ, ಮಂಜುನಾಥ್ ಇವರು ಕನ್ನಡದ ಕೋಶಾಧಿಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದವರು.
ಈ ಮೇಲಿನ 7 ತಂಡಗಳಲ್ಲಿ ಪ್ರಥಮ್ ಬಹುಮಾನ ಪಡೆದ ಶ್ರೀಶೈಲ ಮತ್ತು ಅನುಷಾ ತಂಡಕ್ಕೆ ನೀಡಲಾಯಿತು. ದ್ವಿತೀಯ ಬಹುಮಾನ ಸವಿತಾ ಮತ್ತು ಮಂಜುನಾಥ ವಿದ್ಯಾರ್ಥಿಗಳಿಗೆ ನೀಡಲಾಯಿತು. ಈ ಕಾರ್ಯಕ್ರಮವನ್ನು ರಾಜ್ಯಶಾಸ್ತ್ರ ಪ್ರಾಧ್ಯಾಪಕರಾದ ಆನಂದತೀರ್ಥ ಜೋಷಿ ನಿರೂಪಿಸಿದರು. ಆಂಗ್ಲ ಭಾಷೆಯ ಪ್ರಾಧ್ಯಾಪಕರಾದ ಅಮರ್ ಹಾಗರಗಿ ಪ್ರಶ್ನೆಗಳ ಸಲಹೆಗಾರರಾಗಿ ಕುಳಿತಿದ್ದರು.
ಪ್ರಾಧ್ಯಾಪಕರಾದ ಅನುರಾಧಾ ಮದ್ರಿ,ಪ್ರಿಯಾಂಕಾ ಕರ್ಣಿಕ ಹಾಟ್ ಸೀಟ್ ಪ್ರಶ್ನೆಗಳ ನಿರ್ವಹಣೆ ಮಾಡಿದರು. ಹಿನ್ನಲೆ ಸಂಗೀತವನ್ನು ಪ್ರಾಧ್ಯಾಪಕರಾದ ನಾಗರಾಜ್ ಪಟ್ಟನಕರ, ಅಶ್ವಿನಿ ಎಸ್ ಪಾಟೀಲ್, ವಿದ್ಯರ್ಥಿ ಹಣಮಂತ ನಿರ್ವಹಿಸಿದರು. ತಾಂತ್ರಿಕ ಸಹಾಯವನ್ನು ಶ್ರೀಮತಿ ರಾಧಿಕಾ ಎನ್ ಗುತ್ತೇದಾರ್ ಹಾಗೂ ಮಂಜುನಾಥ್ ಬನ್ನುರ, ಅನ್ನಪೂರ್ಣ ಪಸಾರ ಸಹಾಯ ಮಾಡಿದರು. ಕಾಲೇಜಿನ ಎಲ್ಲಾ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…