ಕಲಬುರಗಿ: ನಗರದ ಸಿಪಿಐಎಂ ಪಕ್ಷದ ಕಚೇರಿಯಲ್ಲಿ ದಿವಂಗತ ಕಾ.ಮಾರುತಿ ಮಾನಪಡೆಯವರ ಭಾವ ಚಿತ್ರಕ್ಕೆ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಗುರುವಾರ ಗೌರವ ನಮನ ಸಲ್ಲಿಸಿದರು.
ಭಾರತದಲ್ಲಿ ಕೋಮುವಾದವು ಕಾಪೆರ್Çರೇಟ್ ಸಾಂಗತ್ಯದೊಂದಿಗೆ ಬೆಳೆಯುತ್ತಿದೆ. ಇದರಿಂದ ಜನತೆಯು ಅಪಾಯಕಾರಿ ದಿನಗಳನ್ನು ಎದುರಿಸುತ್ತಿದ್ದಾರೆ. ಹಸಿವಿನ ಸೂಚ್ಯಂಕದಲ್ಲಿ ಭಾರತವು ಆತಂಕದ ಸ್ಥಾನ ಹೊಂದಿದೆ. ಬಡತನ, ನಿರುದ್ಯೋಗ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಕಮ್ಯುನಿಸ್ಟ್ ಚಳುವಳಿಯು ಜನತೆತ ಹಕ್ಕುಗಳಿಗಾಗಿ ನಿರಂತರ ಹೋರಾಡುತ ಬಂದಿದೆ. ಕಾ.ಮಾರುತಿ ಮಾನಪಡೆಯವರು ಶ್ರಮಜೀವಿಗಳ ಪರವಾಗಿ ಸಮರಧೀರ ಚಳುವಳಿ ನಡೆಸಿದವರು ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ ನೀಲಾ ಹೇಳಿದರು.
ಅನುಪಸ್ಥಿತಿಯು ಶ್ರಮಿಕ ಚಳುವಳಿಗೆ ತುಂಬಲಾರದ ನಷ್ಟವಾಗಿದೆ. ಭಾರತದ ಐಕ್ಯತೆಗಾಗಿ, ಸಮೃದ್ಧತೆಗಾಗಿ ಸಿಪಿಐಎಂ ಪಕ್ಷವನ್ನು ಬಲಗೊಳಿಸುವ ಮೂಲಕವೇ ಕಾ.ಮಾರುತಿ ಮಾನಪಡೆಯವರಿಗೆ ಸಲ್ಲಿಸುವ ಶ್ರದ್ಧಾಂಜಲಿಯಾಗಿದೆ ಎಂದು ತಿಳಿಸಿದರು.
ಮಂಡಳಿ ಸದಸ್ಯರಾದ ಕಾ.ಎಂ.ಬಿ.ಸಜ್ಜನ್ , ಕಾ.ಭೀಮಶೆಟ್ಟಿ ಯಂಪಳ್ಳಿ, ಜಿಲ್ಲಾ ಸಮಿತಿ ಸದಸ್ಯರಾದ ಕಾ.ಮೇಘರಾಜ ಕಠಾರೆ, ಕಾ.ಶಾಂತಾ ಘಂಟೆ, ಕಾ.ಶೇಕಮ್ಮ ಕುರಿ, ಕಾ.ಸುಭಾಶ ಹೊಸಮನಿ, ಕಾ.ಅಲ್ತಾಫ್ ಇನಾಂದಾರ್, ಕಾ.ಸುಧಾಮ ಧನ್ನಿ, ಕಾ.ನಾಗಯ್ಯ ಸ್ವಾಮಿ ಹಾಗೂ ಕಾ.ವಿರುಪಾಕ್ಷಪ್ಪ ತಡಕಲ್, ಕಾ.ಯಶವಂತರಾವ್ ಗೌಡ, ಕಾ.ರಾಯಪ್ಪ ಹುಮುರ್ಂಜಿ, ಕಾ.ಸಂಗಮ್ಮ ಗೌಡತಿ, ಕಾ.ಉಮಾದೇವಿ ಮುಂತಾದವರು ಗೌರವ ನಮನದ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…