ಕಾ.ಮಾರುತಿ ಮಾನಪಡೆಯವರಿಗೆ ಗೌರವ ನಮನ

0
60

ಕಲಬುರಗಿ: ನಗರದ ಸಿಪಿಐಎಂ ಪಕ್ಷದ ಕಚೇರಿಯಲ್ಲಿ ದಿವಂಗತ ಕಾ.ಮಾರುತಿ ಮಾನಪಡೆಯವರ ಭಾವ ಚಿತ್ರಕ್ಕೆ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಗುರುವಾರ ಗೌರವ ನಮನ ಸಲ್ಲಿಸಿದರು.

ಭಾರತದಲ್ಲಿ ಕೋಮುವಾದವು ಕಾಪೆರ್Çರೇಟ್ ಸಾಂಗತ್ಯದೊಂದಿಗೆ ಬೆಳೆಯುತ್ತಿದೆ. ಇದರಿಂದ ಜನತೆಯು ಅಪಾಯಕಾರಿ ದಿನಗಳನ್ನು ಎದುರಿಸುತ್ತಿದ್ದಾರೆ. ಹಸಿವಿನ ಸೂಚ್ಯಂಕದಲ್ಲಿ ಭಾರತವು ಆತಂಕದ ಸ್ಥಾನ ಹೊಂದಿದೆ. ಬಡತನ, ನಿರುದ್ಯೋಗ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಕಮ್ಯುನಿಸ್ಟ್ ಚಳುವಳಿಯು ಜನತೆತ ಹಕ್ಕುಗಳಿಗಾಗಿ ನಿರಂತರ ಹೋರಾಡುತ ಬಂದಿದೆ. ಕಾ.ಮಾರುತಿ ಮಾನಪಡೆಯವರು ಶ್ರಮಜೀವಿಗಳ ಪರವಾಗಿ ಸಮರಧೀರ ಚಳುವಳಿ ನಡೆಸಿದವರು ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ ನೀಲಾ ಹೇಳಿದರು.

Contact Your\'s Advertisement; 9902492681

ಅನುಪಸ್ಥಿತಿಯು ಶ್ರಮಿಕ ಚಳುವಳಿಗೆ ತುಂಬಲಾರದ ನಷ್ಟವಾಗಿದೆ. ಭಾರತದ ಐಕ್ಯತೆಗಾಗಿ, ಸಮೃದ್ಧತೆಗಾಗಿ ಸಿಪಿಐಎಂ ಪಕ್ಷವನ್ನು ಬಲಗೊಳಿಸುವ ಮೂಲಕವೇ ಕಾ.ಮಾರುತಿ ಮಾನಪಡೆಯವರಿಗೆ ಸಲ್ಲಿಸುವ ಶ್ರದ್ಧಾಂಜಲಿಯಾಗಿದೆ ಎಂದು ತಿಳಿಸಿದರು.

ಮಂಡಳಿ ಸದಸ್ಯರಾದ ಕಾ.ಎಂ.ಬಿ.ಸಜ್ಜನ್ , ಕಾ.ಭೀಮಶೆಟ್ಟಿ ಯಂಪಳ್ಳಿ, ಜಿಲ್ಲಾ ಸಮಿತಿ ಸದಸ್ಯರಾದ ಕಾ.ಮೇಘರಾಜ ಕಠಾರೆ, ಕಾ.ಶಾಂತಾ ಘಂಟೆ, ಕಾ.ಶೇಕಮ್ಮ ಕುರಿ, ಕಾ.ಸುಭಾಶ ಹೊಸಮನಿ, ಕಾ.ಅಲ್ತಾಫ್ ಇನಾಂದಾರ್, ಕಾ.ಸುಧಾಮ ಧನ್ನಿ, ಕಾ.ನಾಗಯ್ಯ ಸ್ವಾಮಿ ಹಾಗೂ ಕಾ.ವಿರುಪಾಕ್ಷಪ್ಪ ತಡಕಲ್, ಕಾ.ಯಶವಂತರಾವ್ ಗೌಡ, ಕಾ.ರಾಯಪ್ಪ ಹುಮುರ್ಂಜಿ, ಕಾ.ಸಂಗಮ್ಮ ಗೌಡತಿ, ಕಾ.ಉಮಾದೇವಿ ಮುಂತಾದವರು ಗೌರವ ನಮನದ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here