ಹೈದರಾಬಾದ್ ಕರ್ನಾಟಕ

ಕಲ್ಯಾಣ ಕರ್ನಾಟಕ ಸಂಗೀತ ಸಂಭ್ರಮ

ಕಲಬುರಗಿ: ಗ್ರಾಮೀಣ ಭಾಗದಲ್ಲಿ ಕಲೆ ಸಾಹಿತ್ಯ ಸಂಗೀತ ನಿರಂತರ ನಡೆಯಲಿ ಪಾಳಾ ಶ್ರೀಗಳು ಇತ್ತೀಚೆಗೆ ಮತ್ತಿಮಡು ಗ್ರಾಮದ ಶ್ರೀ ಕಲ್ಲೇಶ್ವರ ದೇವಸ್ಥಾನದ ಆವರಣದಲ್ಲಿ ಜರುಗಿದ ಲಲಿತ ಕಲಾ ಸೇವಾ ಸಂಸ್ಥೆ ಮತ್ತಿಮಡು ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಲ್ಬುರ್ಗಿ ಅವರ ಸಹಯೋಗದಲ್ಲಿ ಕಲ್ಯಾಣ ಕರ್ನಾಟಕ ಸಂಗೀತ ಸಂಭ್ರಮ ಕಾರ್ಯಕ್ರಮ ಜರುಗಿತು.

ದಿವ್ಯ ಸಾನಿಧ್ಯವನ್ನು ವಹಿಸಿದ್ದ ಶ್ರೀ ಷ.ಬ್ರ ಡಾ. ಗುರುಮೂರ್ತಿ ಶಿವಾಚಾರ್ಯರು ಕಟ್ಟಿಮನಿ ಸಂಸ್ಥಾನ ಹಿರೇಮಠ ಪಾಳಾ ಅವರು ಮಾತನಾಡಿ ಸಂಗೀತ ಕಲೆ ಇದು ಎಲ್ಲರಿಗೂ ಒಲಿಯುವ ವಿದ್ಯೆಯಲ್ಲ ಈ ಸಂಗೀತ ಕೇಳುವುದರಿಂದ ಮಾನಸಿಕ ನೆಮ್ಮದಿ ಸಿಗುತ್ತದೆ ಸಂಗೀತದಿಂದ ಅನೇಕ ರೋಗಗಳು ಕೂಡ ನಿವಾರಣೆಯಾಗುತ್ತವೆ ನಿರಂತರ ಕಾರ್ಯಕ್ರಮ ಹಾಗೂ ಕಾರ್ಯ ಚಟುವಟಿಕೆಗಳು ಸಂಘ ಸಂಸ್ಥೆಗಳ ಮೂಲಕ ನಡೆಯಬೇಕು ಎಂದು ಶ್ರೀಗಳು ಅಭಿಪ್ರಾಯಪಟ್ಟರು.

ಈ ಕಾರ್ಯಕ್ರಮವನ್ನು ಗುಂಡುಗುರ್ತಿಯ ಗ್ರಾಮ ಪಂಚಾಯತ್ ಅಧ್ಯಕ್ಷ ವೇದಮೂರ್ತಿ ಜಗನ್ನಾಥ್ ಸ್ವಾಮಿಗಳು ಜ್ಯೋತಿ ಬೆಳಗಿಸುವ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ನೇತೃತ್ವವನ್ನು ಶ್ರೀ ವೇದಮೂರ್ತಿ ದೇವೇಂದ್ರಯ್ಯ ಸ್ವಾಮಿಗಳು ವಹಿಸಿದ್ದರು. ಲಲಿತ ಕಲಾ ಸೇವಾ ಸಂಸ್ಥೆಯ ಕಾರ್ಯದರ್ಶಿ ಅಣ್ಣಾರಾವ್ ಶಳ್ಳಗಿ ಮತ್ತಿಮಡು, ಮುಖ್ಯ ಅತಿಥಿಗಳಾಗಿ ಶಿವಲಿಂಗಪ್ಪ ಸಾಹು ಮುದಗೊಂಡ, ಮಲ್ಲಿಕಾರ್ಜುನ್ ಬಿರಾದರ್, ಸತೀಶ್ ಹರಸೂರ್, ರಾಜಕುಮಾರ ಬಿಚ್ಚಾ, ಶಿವಕುಮಾರ್ ಬಿರಂಜಿ, ನೀಲಕಂಠ ಬಿರಾದರ್, ಶಿವಪ್ಪಗೌಡ ಬಿರಾದರ್,ಸಂತೋಷ್ ಕಟ್ಟಿಮನಿ, ಸುನಿಲ್ ಕಾಲಬಾ, ಕಲ್ಯಾಣಿ ಹಡಪದ್, ಗುಂಡುಗುರ್ತಿ, ಬಸವರಾಜ್ ರಾಜಪುರ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲ್ಲಿನಾಥ ಹಿರೇಮಠ ಹಿತ್ತಲಶಿರೂರ ಅವರ ಸುಗಮ ಸಂಗೀತ, ಮಹೇಶ್ ನಾಗಣ್ಣ ತುಪ್ಪದ್ ಜಾನಪದ ಗೀತೆ, ಶಿವಕುಮಾರ್ ವೀರಯ್ಯಸ್ವಾಮಿ ಜಾನಪದ ಗೀತೆ, ನಿಜಲಿಂಗ ನಾಗಪ್ಪ ಕುಂಬಾರ್ ವಚನ ಗಾಯನ, ಸುರೇಶ್ ನಿಡಗುಂದ ದಾಸವಾಣಿ, ಬಸವರಾಜ್, ದೇವೇಂದ್ರ ಇವರು ತತ್ವಪದ ಗೀತೆಗಳನ್ನು ಹಾಡಿ ಜನಮನ ರಂಜಿಸಿದರು.

ವಾದ್ಯ ಸಹಕಾರವನ್ನು ಸೈದಪ್ಪ ಚೌಡಾಪುರ್,ಶಿವಶರಣಯ್ಯ ಸ್ವಾಮಿ ಲಿಂಗದಳ್ಳಿ,ಚೇತನ್ ಬೀದಿಮನಿ, ರವಿ ಸ್ವಾಮಿ ಗೋಟೂರ, ಮೌನೇಶ್ ಪಂಚಾಳ್,ಅಭಿಲಾಶ್ ಮಠಪತಿ ಅವರು ಹಾರ್ಮೋನಿಯಂ ಮತ್ತು ತಬಲಾ ಸಾಥ್ ನೀಡಿದರು.ಸಂಸ್ಥೆಯ ಅಧ್ಯಕ್ಷರಾದ ರೇವಣಸಿದ್ದಪ್ಪ ಮುದಗೊಂಡ ಸ್ವಾಗತಿಸಿದರು.

emedialine

Recent Posts

ಸಾಧನೆ ಮಾಡಲು ಓದಿನಷ್ಟೆ ಕ್ರೀಡೆಯಲ್ಲೂ ಅವಕಾಶವಿದೆ

ಸುರಪುರ:ಯಾವುದೇ ವ್ಯಕ್ತಿ ಸಾಧನೆ ಮಾಡಲು ಕೇವಲ ಓದು ಒಂದೇ ಮುಖ್ಯವಲ್ಲ,ಇಂದು ಓದಿನಷ್ಟೆ ಕ್ರೀಡೆಯಲ್ಲೂ ಸಾಧನೆ ಮಾಡಲು ಅವಕಾಶವಿದೆ ಎಂದು ಕ್ಷೇತ್ರ…

55 mins ago

ಕನ್ನಡ ನಾಡಿನ ಅಭಿವೃದ್ಧಿಯಲ್ಲಿ ಅರಸು ಕೊಡುಗೆ ಅಪಾರವಾಗಿದೆ

ಸುರಪುರ: ಕನ್ನಡ ನಾಡು ಇಂದು ಇಷ್ಟೊಂದು ಸಮೃದ್ಧವಾಗಿದೆ,ಅಭಿವೃಧ್ಧಿಯಾಗಿದೆ ಎಂದರೆ ಅದಕ್ಕೆ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಕೊಡುಗೆ ಅಪಾರವಾಗಿದೆ…

57 mins ago

ಸ್ಲಂ ಜನಾಂದೋಲನ ಸಂಘಟನೆಯಿಂದ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಹೊಸ ಪಡಿತರ ಚೀಟಿ ನೀಡುವ ನಿಯಮ ಸರಳೀಕರಣಗೊ- ಳಿಸಬೇಕು ಹಾಗೂ ನೈಜ ಫಲಾನುಭ- ವಿಗಳಿಗೆ ಹೊಸ ಪಡಿತರ ಚೀಟಿಗಳನ್ನು…

58 mins ago

ಕಲ್ಯಾಣ ಕರ್ನಾಟಕ ಛಾಯಾ ಸಾಧಕ ಪ್ರಶಸ್ತಿ ಪ್ರದಾನ

ಕಲಬುರಗಿ: ಛಾಯಾಗ್ರಾಹಕರು ಇಂದಿನ ಸಮಾಜದ ಪ್ರತಿಬಿಂಬರಾಗಿ ಕಾಣುತ್ತಾರೆ. ಎಲ್ಲಾ ಛಾಯಾಗ್ರಾಹಕರು ಒಗ್ಗಟ್ಟು ಇಟ್ಟುಕೊಂಡು ಸಂಘಟಿತರಾದರೆ ಸಂಘಕ್ಕೆ ಇನ್ನೂ ಹೆಚ್ಚಿನ ಬಲ…

1 hour ago

ಪ್ರತ್ಯೇಕ ಸ್ಮಶಾನ ಭೂಮಿಗಾಗಿ ಎಸ್ಸಿಖ/ಎಸ್ಟಿ ಒಗ್ಗಟು ಸಮಿತಿ ಸಿಎಂಗೆ ಮನವಿ

ಕಲಬುರಗಿ: ಜಿಲ್ಲೆಯಲ್ಲಿ ಎಸ್ಸಿ ಮತ್ತು ಎಸ್ಟಿ ಸಮುದಾಯಕ್ಕೆ ಸ್ಮಶಾನ ಭೂಮಿ ಇರುವುದಿಲ್ಲ, ಬಹುತೇಕರು ತಮ್ಮ ತಮ್ಮ ಹೊಲಗಳಲ್ಲಿ ಶವ ಸಂಸ್ಕಾರ…

1 hour ago

ಸಚೀನ್ ಫರತಾಬಾದ ನೇತೃತ್ವದಲ್ಲಿ ಉಪ ಮುಖ್ಯಮಂತ್ರಿಗೆ ಮನವಿ

ಕಲಬುರಗಿ: ಪ್ರತಿ ವರ್ಷ ಆಚರಣೆ ಮಾಡುತ್ತಾ ಬರುತ್ತಿರುವ ಸೆಪ್ಟೆಂಬರ್ 17 ರಂದು ಕಲ್ಯಾಣ-ಕರ್ನಾಟಕ ವಿಮೋಚನೆ ದಿನಾಚರಣೆ ದಿನದಂದು ಸರಕಾರಿ ರಜೆ…

1 hour ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420