ಕಲಬುರಗಿ: ಸೋಮವಾರದಂದು ಅಪ್ಪಾ ಪಬ್ಲಿಕ್ ಶಾಲೆಯ ಏನ್.ಸಿ.ಸಿ. ಕ್ಯಾಡೆಟ್ಸ್ ಮತ್ತು ವಿದ್ಯಾರ್ಥಿಗಳು ಸರ್ದಾರ್ ವಲ್ಲಭಾಯಿ ಪಟೇಲ್ಜರವರ ಜಯಂತಿಯನ್ನು ರಾಷ್ಟೀಯ ಏಕ್ತಾ ದಿವಸ್ ವನ್ನಾಗಿ ಆಚರಿಸಿದರು. ಬೆಳಗಿನ ೭.೦೦ ಘಂಟೆಗೆ ಶಾಲೆಯ ಏನ್.ಸಿ.ಸಿ. ಕ್ಯಾಡೆಟ್ಸ್ ಮತ್ತು ವಿದ್ಯಾರ್ಥಿಗಳು ರಾಷ್ಟೀಯ ಐಕ್ಯೆತೆಗಾಗಿ ‘ರನ್ ಫಾರ್ ಯುನಿಟಿ’ ಯಲ್ಲಿ ಭಾಗವಹಿಸಿದರು.
ಏನ್.ಸಿ.ಸಿ. ನಿರ್ದೇಶನದಂತೆ, ದೇಶದ ಒಗ್ಗಟ್ಟಿಗಾಗಿ ಮತ್ತು ಪ್ರಗತಿಗಾಗಿ ಶ್ರಮಿಸುವುದಾಗಿ ಹಾಗು ದೇಶದ ಐಕ್ಯೆತೆಯನ್ನು ಕಾಪಾಡುತ್ತೇವೆಯೆಂದು ಪ್ರತಿಜ್ಞೆ ಮಾಡಿ, ಓಟವನ್ನು ಆರಂಭಿಸಿದರು. ಈ ಓಟ ಅಪ್ಪಾ ಪಬ್ಲಿಕ್ ಶಾಲೆಯಿಂದ ಜಿಲ್ಲಾ ನ್ಯಾಯಾಲಯ ಮಾರ್ಗವಾಗಿ ಸರ್ದಾರ್ ವಲ್ಲಭಾಯಿ ಪಟೇಲ್ ವೃತ್ತದಲ್ಲಿ ಸರ್ದಾರ್ ವಲ್ಲಭಾಯಿ ಪಟೇಲ್ ಪುತ್ಥಳಿಗೆ ಪುಷ್ಪಾರ್ಪಣೆ ಮಾಡಿ, ರಾಷ್ದಗೀತೆಯನ್ನು ಹಾಡಿ, ಅದೇ ಮಾರ್ಗವಾಗಿ ಶರಣಬಸವೇಶ್ವರ ಗುಡಿಯ ಆವರಣದಲ್ಲಿ ಮುಕ್ತಾಯಗೊಂಡಿತು. ಓಟದುದ್ದಕೂ ಒಗ್ಗಟ್ಟಿನ ಘೋಷನೆಗಳ್ಳನ್ನು ಕೂಗುತ್ತ ಓಟದಲ್ಲಿ ಕ್ಯಾಡೆಟ್ಸ್ ಮತ್ತು ಇತರ ವಿದ್ಯಾರ್ಥಿಗಳು ಅತಿ ಉತ್ಸಾಹದಿಂದ ಪಾಲ್ಗೊಂಡು ಯೆಶಸ್ವಿಯಾಗಿ ಪೂರ್ಣಗೊಳಿಸಿದರು.
ಶಾಲೆಯ ಪ್ರಾಚಾರ್ಯರಾದ ಶಂಕರಗೌಡ ಹೊಸಮನಿ, ಏನ್.ಸಿ.ಸಿ ಅಧಿಕಾರಿಯಾಗಿ (ವಾಯು ವಿಭಾಗ – ೩ ಏರ್ ಸ್ಕ್ವಾಡ್ರನ್, ಬೀದರ್ ಅಡಿಯಲ್ಲಿ) ಅಧಿಕಾರವನ್ನು ವಹಿಸಿಕೊಂಡ ಟಿ/ಓ ಗಂಗಾಧರ್ ಪೂಜಾರಿ, ಸಂಜೀವ್ ಜಾಧವ್, ಈರಣ್ಣಮಿರ್ಜಿ ಮತ್ತು ಇತರ ಶಿಕ್ಷಕೇತರ ಸಿಬ್ಬಂದಿ ಈ ಓಟದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.
ಓಟ ಪ್ರಾರಂಭಿವಾದಕ್ಕೂ ಮೊದಲು ಸರ್ದಾರ್ ವಲ್ಲಭಾಯಿ ಪಟೇಲರ ಭಾರತವನ್ನು ಸ್ವಾತಂತ್ರದ ನಂತರ ವಿವಿಧ ಪ್ರಾಂತ್ಯ ಮತ್ತು ಪ್ರದೇಶಗಳ್ಳನ್ನು ಒಗ್ಗೂಡಿಸಲು ಪಟ್ಟ ಪ್ರಯತ್ವನ್ನು ವಿವರಿಸಿದರು. ವಿಶೇಷವಾಗಿ ನಮ್ಮ ಕಲ್ಯಾಣ್ ಕರ್ನಾಟಕವನ್ನು ನಿಜಾಮರಿಂದ ಸ್ವಂತಂತ್ರಗೊಳಿಸಲು ಪೊಲೀಸ್ ಕಾರ್ಯಾಚರಣೆಯನ್ನು ಕೈಕೊಳ್ಳುವ ಅನಿವಾರ್ತ್ಯತೆಯ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಾಚಾರ್ಯರು ತಿಳಿಹೇಳಿದರು. ಇದೆ ಸಂದರ್ಭದಲ್ಲಿ ಟಿ/ಓ ಗಂಗಾಧರ್ ಪೂಜಾರಿ ಇವರು ಏನ್.ಸಿ.ಸಿ. (ವಾಯು ವಿಭಾಗ) ತರಬೇತಿಯನ್ನು ಯೆಶಾಶ್ವಿಯಾಗಿ ಪೂರ್ಣಗೊಳಿಸಿ ಅಧಿಕಾರಿತ್ವವನ್ನು ಸ್ವೀಕರಿಸಿದ್ದಕ್ಕೆ ಅಭಿನಂದಿಸಲಯಿತು.
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…