ಚಿಂಚೋಳಿ: ಅಧಿಕಾರ ಆಸ್ತಿ ಶಿಕ್ಷಣದಿಂದ ವಂಚಿತವಾಗಿದ್ದ ಬಹುಜನರಿಗೆ ಅದರಲ್ಲೂ ವಿಶೇಷವಾಗಿ ನಾಲ್ಕು ಗೋಡೆಗಳಿಗೆ ಸೀಮಿತವಾಗಿದ್ದ ಮಹಿಳೆಯರು ಇಂದು ಪುರುಷರ ಸರಿಸಮಾನವಾಗಿ ಬೆಳೆಯುತ್ತಿರುವುದಕ್ಕೆ ಡಾ.ಬಿ.ಆರ್.ಅಂಬೆಡ್ಕರವರು ಕೊಟ್ಟ ಸಂವಿಧಾನದ ಹಕ್ಕಿನಿಂದ ಮಾತ್ರ ಎಂದು ಸಮಾಜಿಕ ಚಿಂತಕ ಮಾರುತಿ ಗಂಜಗಿರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಮಾತಾ ರಮಾಬಾಯಿ ಮಹಿಳಾ ಸ್ವ-ಸಹಾಯ ಸಂಘದ ವತಿಯಿಂದ ಚಂದಾಪೂರದ ಆಶ್ರಯ ಕಾಲೂನಿಯಲ್ಲಿ ಹಮ್ಮಿಕೊಂಡ ಸಂವಿಧಾನ ಸಮರ್ಪಣಾ ದಿನಾಚರಣೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪೂಜೆ ಮಾಡಿ ಮಾತನಾಡುತ್ತ ಮುಂದುವರೆದು ಪ್ರತಿಯೊಬ್ಬರು ಭಾರತೀಯ ಸಂವಿಧಾನ ಅರಿತು ನಡೆದಾಗ ಮಾತ್ರ ನಾವುಗಳು ಎಲ್ಲಾ ಅಧಿಕಾರಗಳನ್ನು ಪಡೆದು ನಮ್ಮ ಮಾಹುರುಷರಾದ ಬುದ್ದ ಬಸವಣ್ಣಾ ಅಂಬೇಡ್ಕರ್ ರವರು ಕಂಡಂತ ಸಮ-ಸಮಾಜವನ್ನು ನಿರ್ಮಾಣ ಮಾಡಲು ಸಾದ್ಯವೆಂದು ಹೇಳಿದರು ನಂತರ ಮುಖ್ಯಾತಿಥಿಗಳಾಗಿ ಮಾತನಾಡಿದರು.
ಧರ್ಮಸ್ಥಳ ಮಂಜುನಾಥೇಶ್ವರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಮನ್ವಯ ಅಧಿಕಾರಿಗಳಾದ ಮಾಹದೇವಿಯವರು ವೀರ ಮಾತೆಯರ ಹೆಸರಿನ ಮೇಲೆ ಸಂಘ-ಸಂಸ್ಥೆಗಳು ಮಾಡಿ ವಾರಕ್ಕೊಮ್ಮೆ ಸೇರಿ ಹಣ ಕ್ರೋಡಿಕರಿಸದರೆ ಸಾಲದು ನಮ್ಮ ವೀರಮಾತೆಯರ ಆಚಾರ ವಿಚಾರಗಳನ್ನು ಮೆಲಕು ಹಾಕುವುದರ ಜೋತೆ-ಜೋತೆಗೆ ಸಮಾಜಮುಖಿಯಾಗಿ ಕೆಲಸ ಮಾಡಬೇಕೆಂದು ಮಹಿಳೆಯರಿಗೆ ಕಿವಿ ಮಾತು ಹೇಳಿ ಆತ್ಮವಿಶ್ವಾಸ ಹೆಚ್ಚಿಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ಈರಪ್ಪಾ ತಾಡಪಳ್ಳಿ ಪ್ರದೀಪ ಮಾಳಗಿ ಸತೀಷ ಬಸವರಾಜ ಸಿದ್ದು ಪುಟ್ಟರಾಜ ಉಲ್ಲಾಸ ವಿಘ್ನೇಶ್ ಜಗದೇವಿ ಪದ್ಮಾವತಿ ಕಮಲಮ್ಮ ಶೇಷಮ್ಮಾ ನಾಗಮ್ಮ ದಸ್ತಮ್ಮ ಹರ್ಷವರ್ಧನ ಮುಂತಾದವರು ಉಪಸ್ಥಿತರಿದ್ದರು.
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…