ಬಿಸಿ ಬಿಸಿ ಸುದ್ದಿ

ಶಿಕ್ಷಣದ ಜೊತೆಜೊತೆಗೆ ಕಾನೂನಿನ ಅರಿವು ಕೂಡ ನಿಮಗೆ ಅಗತ್ಯವಾಗಿದೆ

ಕಲಬುರಗಿ: ನಂದಿಕೂರ ಗ್ರಾಮ ಪಂಚಾಯತ್ ವತಿಯಿಂದ ಕಾನೂನು ಅರಿವು ಮತ್ತು 2022-23 ನೇ ಸಾಲಿನ ಮಕ್ಕಳ ಗ್ರಾಮ ಸಭೆ ಹಾಗೂ ಅಜೀಮ್ ಪ್ರೇಮಜಿ ಫೌಂಡೆಷನ್ ಇವರುಗಳ ಸಂಯುಕ್ತಾಶ್ರಯದಲ್ಲಿ ನಂದಿಕೂರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಮಕ್ಕಳ ಗ್ರಾಮ ಸಭೆ ಕಾರ್ಯಕ್ರಮವನ್ನು ನಂದಿಕೂರ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ವೇತಾ ದಿನೇಶ ದೊಡ್ಡಮನಿ ಅವರು ಉದ್ಘಾಟಿಸಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ವಿದ್ಯಾರ್ಥಿಗಳಿಗೊಸ್ಕರ ಅಂದರೆ ನಿಮಗಾಗಿ ಈ ಕಾರ್ಯಕ್ರಮ ಆಯೋಜನೆ ಮಾಡಿರುವುದು ತಾವೂಗಳು ಶಿಕ್ಷಣದ ಜೊತೆಜೊತೆಗೆ ಕಾನೂನಿನ ಅರಿವು ಕೂಡ ನಿಮಗೆ ಅಗತ್ಯವಾಗಿದೆ ಎಂದರು.

ಈ ಕುರಿತಾಗಿ ಗ್ರಾಮ ಪಂಚಾಯತ್ ಸ್ವತ ನಿಮ್ಮಲ್ಲಿಯೆ ಬಂದು ನಿಮ್ಮ ಸಮಸ್ಯಗಳ ಅವಾಹಲನ್ನು ಸೀವೀಕರಿಸಲು ಬಂದಿದೆವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಕ್ಕಳ ಕಾನೂನಿನ ಅರಿವು ಬಗ್ಗೆ ಮಾರ್ಗದರ್ಶಿ ಸಂಸ್ಥೆಯ ನಿರ್ದೇಶಕರಾದ ಆನಂದರಾಜ್ ಅವರು ಅನೇಕ ವಿಚಾರಗಳನ್ನು ತಿಳಿಸಿದರು. ನಂತರ ನಂದೂರ ಸಿಹೆಚ್‍ಓ ಸೆಂಟರ್ ತೇಜೇಸ್ವಿನಿ ಮಾತನಾಡಿ ಆರೋಗ್ಯ ದೃಷ್ಟಿಯಿಂದ ಮುಂಜಾಗ್ರತಾ ಕ್ರಮಗಳ ಕುರಿತು ಅನೇಕ ವಿಷಯಗಳನ್ನು ತಿಳಿಸಿದರು.

ಬಿ ಎಲ್ ವ್ಹಿ ಸಂಪನ್ಮೂಲ ವ್ಯಕ್ತಿ ಬಿಎಮ್ ರಾವೂರ ಮಾತನಾಡಿ ವಿದ್ಯಾರ್ಥಿಗಳ ಮತ್ತು ಮಕ್ಕಳ ವಿಚಾರವಾಗಿ ಕಾನೂನು ನೆರವು ಮತ್ತು ಅರಿವು ಮೂಡಿಸುವ ಮೂಲಕ ನಾಗರಿಕ ಸಬಲೀಕರಣ ಬಗ್ಗೆ ಮಾತನಾಡಿದರು.

ಗ್ರಾಮ ಪಂಚಾಯತ ಸದಸ್ಯರಾದ ಮಾಲಾಶ್ರೀ ಮಾಣಿಕ, ಶ್ರೀಕಾಂತ ಉಳ್ಳಿ, ಶಿವರಾಜ ಬಿರಾದಾರ, ಮೊಹ್ಮದಸಾಬ್ ಸೀತನೂರ, ಭೀಮಾಶಂಕರ ನಾಗನಳ್ಳಿ, ಲಕ್ಕಪ್ಪ ಪೂಜಾರಿ, ಸುಭಾಷ ಉದನೂರ, ಕಾರ್ಯದರ್ಶಿ ಕುಮಾರಿ ಮಹಾನಂದಾ ಸಿಂಗೆ, ಮುಖಂಡರಾದ ದಿನೇಶ ದೊಡ್ಡಮನಿ, ಕುಪೇಂದ್ರ ನಾಗನಳ್ಳಿ, ಶರಣು ಕರೇಕಲ್, ಶಿವಶರಣಪ್ಪ ನಾಗನಳ್ಳಿ, ಹಜರತಸಾಬ್ ಉದನೂರ, ಸಲೀಮಸಾಬ್ ಕೋಟನೂರ ಸೇರಿದಂತೆ ಪಂಚಾಯತ್ ವ್ಯಾಪ್ತಿಯ ಸರಕಾರಿ ಶಾಲೆಯ ಶಿಕ್ಷಕರುಗಳು, ಗ್ರಾಮಸ್ಥರು ಇದ್ದರು.

ಇದೇ ಸಂದರ್ಭದಲ್ಲಿ ಮಕ್ಕಳು ಶಾಲೆಗೆ ಬೇಕಾಗುವ ಸವಲತ್ತುಗಳ ಬಗ್ಗೆ ಸ್ವ ಬರವಣಿಗೆಯಲ್ಲಿ ಮನವಿಪತ್ರವನ್ನು ನೀಡಿದರು, ಇದಕ್ಕೆ ಸ್ಪಂಧಿಸಿದ ಅಧ್ಯಕ್ಷೆ ಶ್ವೇತಾ ದಿನೇಶ ರವರು ಬೇಡಿಕೆ ಅನುಗುಣವಾಗಿ ಮಕ್ಕಳಿಗೆ ಮಾಡಿಕೊಡುವ ಸಂಪೂರ್ಣ ಭರವಸೆ ನೀಡಿದರು.

emedialine

Recent Posts

ನ್ಯಾಯವಾದಿ ವಿನೋದ ಕುಮಾರ ಎಸ್. ಜೇ. ನಾಮಪತ್ರ ಸಲ್ಲಿಕೆ

ಕಲಬುರಗಿ: ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗರುವ ಇಂದು 2024-2029 ಸಾಲಿನ, ಜಿಲ್ಲಾ ಘಟಕಕ್ಕೆ…

7 hours ago

13 ಫಲಾನುಭವಿ ಆಧಾರಿತ ಯೋಜನೆಗಳಡಿ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಕಲಬುರಗಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಈ ಕೆಳಕಂಡ 13 ಫಲಾನುಭವಿ ಆಧಾರಿತ…

8 hours ago

ಕಾರ್ಮಿಕರ ಸಚಿವರ ಕಲಬುರಗಿ ಪ್ರವಾಸ ರದ್ದು

ಕಲಬುರಗಿ: ರಾಜ್ಯದ ಕಾರ್ಮಿಕ ಸಚಿವರಾದ ಸಂತೋಷ ಎಸ್. ಲಾಡ್ ಅವರು ಜುಲೈ 5 ರಂದು ಶುಕ್ರವಾರ ಕೈಗೊಳ್ಳಬೇಕಿದ್ದ ಕಲಬುರಗಿ ಜಿಲ್ಲಾ…

8 hours ago

ರಾಜ್ಯ-ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಾಶಿ ಮಾದರಿಯಲ್ಲಿ ದತ್ತನ‌ ಕ್ಷೇತ್ರ ಅಭಿವೃದ್ಧಿ

ಕರ್ನಾಟಕ‌ ವಿಧಾನಸಭೆ ಅರ್ಜಿಗಳ ಸಮಿತಿಯಿಂದ ಗಾಣಗಾಪುರ ದೇವಸ್ಥಾನ ಅಭಿವೃದ್ಧಿ ಕುರಿತು ಚರ್ಚೆ ಕೇಂದ್ರಕ್ಕೆ ಸಮಿತಿ ನಿಯೋಗ ತೆರಳಲು ನಿರ್ಧಾರ ಕಲಬುರಗಿ;…

8 hours ago

ಚಿಂಚೋಳಿ: ಶರಣು ಪಾಟೀಲ್ ಮೋತಕಪಲ್ಲಿ ನಾಮಪತ್ರ ಸಲ್ಲಿಕೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ ಚಿಂಚೋಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಇದೆ 21 ರಂದು…

9 hours ago

ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ತಿದ್ದು ಪಡಿಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ಈ ಕೆಳಕಂಡತೆ ತಿದ್ದು ಪಡಿ ಮಾಡಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ,…

9 hours ago