ಕಲಬುರಗಿ: ನಗರದ ಹಿಂದಿ ಪ್ರಚಾರ ಸಭಾದಗಣದ ಆವರಣದಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುತ್ತ ಶಾಲೋಮ್ ಎವರ್ ಲಾಸ್ಟಿಂಗ್ ಲೈಫ್ ಚರ್ಚ್ ವತಿಯಿಂದ ಆನಂದ ಕ್ರಿಸ್ಮಸ್ ಉತ್ಸವ ಅಂಗವಾಗಿ ಶಾಂತಿಯ ಕ್ರಸ್ಮಸ್ ಆಚರಣೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 11 ಗಣ್ಯರಿಗೆ ಮಾರ್ಟಿನ್ ಲೂಥರ್ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ವಿವಿಧ ಕ್ಷೇತ್ರದ ಸಾಧಕರಾದ ಶಿವಶರಣ ಬೆಣ್ಣೂರ, ಅಣವೀರ ಪಾಟೀಲ, ಗೋಪಾಲ ಕುಲ್ಕರ್ಣಿ, ರಾಜಶೇಖರ ಹೊಕ್ರಾಣಿ, ಮಲ್ಲಣ್ಣಾ ಕುಲಕರ್ಣಿ, ಉದಯಕುಮಾರ ವಾಲೀಕಾರ, ಸಂಜಯ ಜಾಗೀರದಾರ, ಶಶಿಕುಮಾರ ಮೈನಾಳಕರ, ಎಂ.ಎಂ.ಎಲ್ ಅಲಂಕಾರ್, ಹನುಮಂತ ನಾಟೀಕಾರ್, ಶಿವಶರಣಪ್ಪ ಹೊಸಮನಿ ಅವರಿಗೆ ಮಾರ್ಟಿನ್ ಲೂಥರ್ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಾಲೋಮ್ ಎವರ್ ಲಾಸ್ಟಿಂಗ್ ಲೈಫ್ ಮಿನಿಸ್ಟರೀಸ್ನ ಸಂಸ್ಥಾಪಕ ಅಧ್ಯಕ್ಷ ಬಿಷಪ್ ಗೋಪಾಲ್ ಶಲೋಮ್ ಕಾರ್ಯಕ್ರಮ ನೇತೃತ್ವ ವಹಿಸಿದ್ದರು. ಮಂಗಳೂರಿನ ರೆ. ಚಾಕೋ ಥಾಮಸ್ ಹಬ್ಬದ ಸಂದೇಶ ನೀಡಿದರು. ವಿಧಾನ ಪಿರಿಷತ್ ಸದಸ್ಯ ಶಶಿಲ ನಮೋಶಿ, ನೀಲಕಂಠರಾವ ಮೂಲಗೆ, ಲಿಂಗರಾಜ ತಾರಫೈಲ್, ಸುರೇಶ ಬಡಿಗೇರ, ಅಭಿಷೇಕ ಪಾಟೀಲ, ಸಚೀನ ಫರಹತಾಬಾದ, ಲಕ್ಷ್ಮಣ ಮೂಲಭಾರತಿ, ಕಾಶಿನಾಥ ಇದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…