ಚಿಂಚೋಳಿ ಶಾಸಕರ ವಿರುದ್ಧ ವಾಗ್ಧಾಳಿ

ಕಾಳಗಿ: ನೂತನ ಕಾಳಗಿ ತಾಲುಕಿಗೆ ಶಾಸಕರ ಕೊಡುಗೆ ಏನು, ಚಿಂಚೋಳಿ ಶಾಸಕರ ನಿರ್ಲಕ್ಷ್ಯದಿಂದ ಹಾಗೂ ಮಲತಾಯಿ ಧೋರಣೆಯಿಂದ ಕಾಳಗಿ ತಾಲ್ಲೂಕು ಅಭಿವೃದ್ಧಿಯಲ್ಲಿ ಹಿಂದುಳಿದಿದೆ, ಘೋಷಣೆಗಷ್ಟೇ ಸಿಮೀತವಾಗಿದೆ, ಪರಂತೂ ತಾಲೂಕಿಗೆ ಅಗತ್ಯ ವಿರುವ ಮೂಲ ಸೌಲಬ್ಯಗಳಾಗಲಿ ಹಾಗೂ ಕಛೇರಿಗಳಾಗಲಿ ಸ್ಥಾಪನೆಯಾಗಿಲ್ಲ ಎಂದು ಕಾಂಗ್ರೆಸ ವಕ್ತಾರ ರಾಘವೇಂದ್ರ ಗುತ್ತೇದಾರ ಆರೋಪಿಸಿದ್ದಾರೆ.

ಪಟ್ಟಣದಲ್ಲಿ ಶನಿವಾರ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಕಾಳಗಿ ಪಟ್ಟಣ ಪಂಚಾಯತಿ ಅನುದಾನದಲ್ಲಿ ಕಾಮಗಾರಿಗಳು ಚಾಲ್ತಿಯಲ್ಲಿವೆ, ಆದರೆ ಶಾಸಕರ ಅನುದಾನ ನಯಾ ಪೈಸೆ ಇಲ್ಲ, ಮತ್ತು 10 ಪರ್ಸೆಂಟ್ ಕಮಿಷನ್ ವ್ಯವಹಾರ ನಡೆದಿದೆ ಎಂದು ಕೇಳಿ ಬರುತ್ತಿದೆ, ಪಟ್ಟಣದಲ್ಲಿ ನಡೆಯುತ್ತಿರುವ ಕಾಮಗಾರಿಗಳು ಕಳಪೆ ಮಟ್ಟದಿಂದ ಕೂಡಿವೆ, ಗ್ರಾಮ ಪಂಚಾಯತಿಯಿಂದ ಪಟ್ಟಣ ಪಂಚಾಯತಿಯಾಗಿ ಮೇಲದರ್ಜೇಗೇರಿಸಿದ್ದು ಕಾಂಗ್ರೆಸ ಸರಕಾರದಲ್ಲಿ ವಿನಹ ಈ ಶಾಸಕರ ಅವದಿಯಲ್ಲಿ ಅಲ್ಲಾ, 6 ಕೋಟಿ ರೂ. ವೆಚ್ಚದಲ್ಲಿ ರೌದ್ರಾವತಿ ನದಿ ಅಡ್ಡಲಾಗಿ ನಿರ್ಮಿಸಿದ ಬ್ರಿಜ್ ಕಮ್ ಬ್ಯಾರೆಜ್ ತಡೆಗೋಡೆಯಿಲ್ಲದೆ ಸಂಪೂರ್ಣವಾಗಿ ಅವ್ಶೆಜ್ಞಾನಿಕವಾಗಿ ನಿರ್ಮಿಸಲಾಗಿದೆ ಎಂದು ತಿಳಿಸಿದರು.

ನಗರ ಅಧ್ಯಕ್ಷ ವೇದಪ್ರಕಾಶ ಮೋಟಗಿ ಮಾತನಾಡಿ, ಪಟ್ಟಣದಲ್ಲಿ ಶಾಸಕರ ಅನುದಾನದಲ್ಲಿ ಯಾವೂದೇ ರಸ್ತೆ ಮತ್ತು ವಿದ್ಯುತ್ ಕಾಮಗಾರಿಗಳು ನಡೆದಿಲ್ಲ, ಕಾಂಗ್ರೆಸ ಪಕ್ಷ ಅಧಿಕಾರದಲ್ಲಿದ್ದಾಗ ಆಗಿದ ಕೆಲಸವನ್ನು ತಮ್ಮ ಕೆಲಸವೆಂದು ಹೇಳಿಕೊಳ್ಳುತ್ತಿದ್ದಾರೆ, 5 ನೇ ಮತ್ತು 6 ನೇ ವಾರ್ಡಿನಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಿಕೊಡುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ನಿರ್ಲಕ್ಷ್ಯ ತೋರಿಸುತಿದ್ದು ಇದರ ಹಿಂದೆ ಕಾಣದ ಕೈ ಇದೆ ಎಂದು ತೋರುತ್ತದೆ, ತಾಲೂಕಿನಲ್ಲಿ ತೊಗರಿ ಬೆಳೆ ನೆಟೆ ರೋಗದಿಂದ ಸಂಪೂರ್ಣವಾಗಿ ಹಾಳಾದರೂ ಶಾಸಕರು ಬೆಳೆ ಪರಿಹಾರದ ಬಗ್ಗೆ ಎಲ್ಲಿಯೂ ಮಾತಾಡಿಲ್ಲ. ಅಧಿವೇಶನದಲ್ಲಿ ಕೆಚ್ಛೆದೇಯಿಂದ ಮಾತನಾಡಿ ಅಸರಿಪಡಿಸುವ ತಾಕತ್ತು ಶಾಸಕರಲ್ಲಿಲ, ರೈತರ ಕಾಳಜಿ ಇವರಿಗೇ ಶೂನ್ಯವಾಗಿದೆ. ಇದರಿಂದ ಗೊತ್ತಾಗುತ್ತೆ ಶಾಸಕರಿಗೆ ರೈತರ, ಜನಸಾಮನ್ಯರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ ಎಂದು ತಿಳಿಸಿದರು.

ಕೆಪಿಸಿಸಿ ವಕ್ತಾರ ರಾಘವೇಂದ್ರ ಗುತ್ತೇದಾರ, ಶಿವಕುಮಾರ ಕಮಲಾಪೂರ, ಸಂತೋಷ ಪತಂಗೆ, ವಿಠ್ಠಲ್ ಸೇಗಾಂವಕರ್, ರವಿದಾಸ ಪತಂಗೆ, ಜಗನ್ನಾಥ ಚಂದನಕೇರಿ, ಅಸ್ಲಾಂ ಬೇಗ ಬಿಜಾಪೂರ, ಜಿಯಾವೋದ್ದಿನ ಸೌದಾಗರ್, ಮುನೀರ ಬೇಗ ಬಿಜಾಪೂರ, ಸಂತೋಷ ನರನಾಳ, ಶರಣಯ್ಯ ಸ್ವಾಮಿ ಚಿಕ್ಕಮಠ. ಬಸವರಾಜ ಕಲಶೆಟ್ಟಿ, ರೇವಣಸಿದ್ದ ಕಲಶೆಟ್ಟಿ ಇತರರು ಇದ್ದರು.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

5 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

8 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

8 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

8 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

8 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

8 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420