ಭಾಲ್ಕಿ: 1 ನೇ ಜನೆವರಿ ರಂದು ಹೊಸ ವರ್ಷದ ಆಗಮನಕ್ಕೆ ಯುವಕರಲ್ಲಿ ಅತ್ಯಂತ ಹರ್ಷ, ಉಲ್ಲಾಸ, ಉತ್ಸಾಹ ತುಂಬಿರುತ್ತದೆ. ಹೊಸ ವರ್ಷದ ಹರ್ಷಕ್ಕೆ ನಾವು ನಮ್ಮ ಸಂಸ್ಕøತಿಯನ್ನು ಮರೆಯುವುದು ಬೇಡ. ಭಾರತೀಯ ಸಂಸ್ಕøತಿಯ ಮಹಾಪುರುಷರು ಮತ್ತು 12ನೇ ಶತಮಾನದ ಬಸವಾದಿ ಶರಣರು ದೇಹವೇ ದೇವಾಲಯವೆಂದು ಹೇಳಿದ್ದಾರೆ.
ಹೊಸ ವರ್ಷದ ಹರ್ಷದಲ್ಲಿ ನಾವು ನಮ್ಮ ದೇಹಕ್ಕೆ ಕೆಡಾಗುವ ಹಾಗೆ ನಡೆದುಕೊಳ್ಳುವುದು ಮತ್ತು ನಮ್ಮ ಪರಂಪರೆ ಇಲ್ಲದ ಆಚರಣೆಗಳನ್ನು ಮಾಡುವುದು ನಮಗೆ ಅನೇಕ ಅರ್ಥದಿಂದ ನಷ್ಟಗಳನ್ನು ಉಂಟು ಮಾಡುತ್ತವೆ. ಶರಣರ ದೃಷ್ಟಿಯಲ್ಲಂತು ಪ್ರತಿ ದಿನವೂ, ಪ್ರತಿ ಕ್ಷಣವು ಹೊಸತನದಿಂದಲೇ ಕೂಡಿರುತ್ತದೆ. ಈ ಕ್ಷಣ, ಈ ದಿನ ಮತ್ತೊಮ್ಮೆ ಬರುವುದಿಲ್ಲ. ಪಾಶ್ಚಾತ್ಯಯ ಸಂಸ್ಕøತಿಯ ಅನುಕರಣೆಯಿಂದ ನಾವು 1ನೇ ಜನೆವರಿ ಹೊಸ ವರ್ಷ ಆಚರಿಸುತ್ತವೆ. ಆದರೆ ಭಾರತೀಯ ಸಂಸ್ಕøತಿಯ ಪ್ರಕಾರ ಯುಗಾದಿ ನಮಗೆ ಹೊಸ ವರ್ಷದ ಆಚರಣೆಯನ್ನು ತಿಳಿಸುತ್ತದೆ.
ಅದಕ್ಕಾಗಿ ನಾವು ಹೊಸ ವರ್ಷದ ನೆಪದಲ್ಲಿ ಇಲ್ಲಸಲ್ಲದ ಆಚರಣೆಗಳನ್ನು ಮಾಡದೇ ನಮ್ಮಲ್ಲಿ ಜೀವನುತ್ಸಾಹ ತುಂಬುವ ರಚನಾತ್ಮಕ ಕಾರ್ಯಗಳನ್ನು ಮಾಡುವ ಮೂಲಕ ಹೊಸ ವರ್ಷಕ್ಕೆ ಸ್ವಾಗತ ಮಾಡಿದರೆ ಅದು ನಮಗೂ ಮತ್ತು ಸಮಾಜಕ್ಕೂ ಹಿತಕರವಾಗಿ ಪರಿಣಮಿಸುತ್ತದೆ. ಆ ದಿಶೆಯಲ್ಲಿ ವಿಶೇಷವಾಗಿ ಯುವಕರು ಹೊಸ ವರ್ಷದ ಹರ್ಷಕ್ಕೆ ನಮ್ಮ ಸಂಸ್ಕøತಿಯ ಸ್ಪರ್ಶ ನೀಡುವ ಮೂಲಕ ಆಚರಿಸಬೇಕೆಂದು ಹಿರೇಮಠ ಸಂಸ್ಥಾನದ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…