ಬಿಸಿ ಬಿಸಿ ಸುದ್ದಿ

ಆನೆಕಾಲು ಮುಕ್ತ ಸಮಾಜಕ್ಕೆ ಕೈಜೋಡಿಸಿ

ಕಲಬುರಗಿ: ಪ್ರಾಥಮಿಕ ಆರೋಗ್ಯ ಕೇಂದ್ರ ಗೊಬ್ಬುರ್ ಬಿ ವ್ಯಾಪ್ತಿಯಲ್ಲಿ ಬರುವ 20 ಗ್ರಾಮಗಳು ಹಾಗೂ ನಾಲ್ಕು ತಾಂಡಗಳಲ್ಲಿ ಆನೆಕಾಲು ರೋಗ ಬರದಂತೆ ತ್ರಿವಳಿ ಔಷಧಗಳನ್ನು ತಮ್ಮ ಮನೆಯ ಬಾಗಿಲಿಗೆ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಇಲಾಕ ಸಿಬ್ಬಂದಿಗಳು ಬಂದಾಗ ಯಾವುದೇ ನೆಪ ಹೇಳದೆ ಊಟ ಮಾಡಿ ಸೇವಿಸಿ ಆನೆಕಾಲು ರೋಗದಿಂದ ಪಾರಾಗಿ ಹಾಗೂ ಮುಂದಿನ ಪೀಳಿಗೆಗೆ ಬರದಂತೆ ಮಾಡುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಳೆ ಕರೆ ನೀಡಿದರು.

ಎರಡು ವರ್ಷದ ಒಳಗಿನ ಮಕ್ಕಳು ಹಾಗೂ ಗರ್ಭಿಣಿಯರನ್ನು ಮತ್ತು ದೀರ್ಘ ಕಾಯಿಲೆಯಿಂದ ಬಳಲುತ್ತಿರುವನು ಹೊರತುಪಡಿಸಿ ಎಲ್ಲರೂ ಊಟದ ನಂತರ ಸೇವಿಸಿ. ಆನೆಕಾಲು ಮುಕ್ತವಾಗಿಸಲು ಎಲ್ಲಾ ಜನಪ್ರತಿನಿಧಿಗಳು, ಎಲ್ಲಾ ಇಲಾಖೆಗಳು, ಎಲ್ಲಾ ವಿದ್ಯಾವಂತರು ಸಮುದಾಯದಲ್ಲಿ ತಿಳಿಯಲಾರದ ಅವರಿಗೆ ತಿಳಿಯಪಡಿಸಿ ತಮ್ಮ ಗ್ರಾಮವನ್ನು ಹಾಗೂ ತಾಲೂಕವನ್ನು ಆನೆಕಾಲ ಮುಕ್ತ ಮಾಡಿ ಎಂದು ಕಿವಿಮಾತು ಹೇಳಿದರು.

ನೆರೆಯ ಜಿಲ್ಲೆ, ರಾಯಚೂರಿನಲ್ಲಿ ಹಾಗೂ ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಇದು ಸಂಪೂರ್ಣ ನಿವಾರಣೆಯಾಗಿದ್ದು ನಮ್ಮ ಕಲ್ಯಾಣ ಕರ್ನಾಟಕದಲ್ಲಿ ನಿವಾರಣೆಯಾಗಬೇಕಾದರೆ ತಮ್ಮೆಲ್ಲರ ಸಹಕಾರದೊಂದಿಗೆ ಇದನ್ನು ಮುಕ್ತ ಮಾಡಲು ಪಣತೊಡೋಣ, ಕಾರ್ಯಕ್ರಮದ ಸಾಂಕೇತಿಕ ಚಾಲನೆಯನ್ನು ಜಿಲ್ಲಾ ಕಾರ್ಯಾಲಯದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸತ್ಯನಾರಾಯಣ ಅವರು ಮಾತ್ರೆಯನ್ನು ನುಂಗಿಸುವುದರ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ವೈದ್ಯಾಧಿಕಾರಿಗಳಾದ ಡಾ. ದೇವಪ್ರಸಾದ್, ಡಾಕ್ಟರ್ ಸುಷ್ಮಾ, ಜಿಲ್ಲಾ ವಿ ಬಿ ಡಿ ಸಿ ಕಾರ್ಯಾಲಯದ ಶಫಿ ಪಟೇಲ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸಯ್ಯದ್ ಆಸ್ಮಿ, ಆಪ್ತ ಸಮಾಲೋಚಕ ಎನ್ ಸುಧಾಕರ್, ಫಯಾಜ್ ಅಹ್ಮದ್ ಜೈ ಭೀಮ್, ಆಶಾ ಮಲ್ಲಮ್ಮ ಹಾಗೂ ಸಾರ್ವಜನಿಕರು ಭಾಗಿಯಾಗಿದ್ದರು.

emedialine

Recent Posts

ಶಾಸಕ ಅಲ್ಲಮಫ್ರಬು ಪಾಟೀಲರಿಂದ ಕಂಪ್ಯೂಟರ್ ಪ್ರಮಾಣ ಪತ್ರ ವಿತರಣೆ

ಕಲಬುರಗಿ: ನಗರದ ಬಸವ ಸಿರಿ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಭಾನುವಾರ ಮುಂಜಾನೆ. 11 ಗಂಟೆಗೆ ಕರ್ನಾಟಕ ಶಾಲಾ ಪರೀಕ್ಷ ಮತ್ತು…

6 mins ago

ತೊಗರಿ ಮತ್ತು ಹತ್ತಿ ಬೆಳೆಗಳ ಸಸ್ಯ ಸಂರಕ್ಷಣಾ ತರಬೇತಿ 18ಕ್ಕೆ

ಕಲಬುರಗಿ; ಜಿಲ್ಲೆಯಲ್ಲಿ ಮುಂಗಾರು ಬೆಳೆಗಳಾದ ತೊಗರಿ, ಹತ್ತಿ, ಉದ್ದು, ಹೆಸರು ಮತ್ತು ಸೋಯಾಬಿನ್ ಬೆಳೆಯಲಾಗಿದ್ದು, ಇದರಲ್ಲಿ ಕಂಡು ಬರುವ ಹುಳು,…

23 mins ago

ಡೆಂಗ್ಯೂ ,ಝಿಕಾ, ಚಿಕನ್ ಗುನ್ಯಾ ತಡೆಗಟ್ಟಲು ಸರಕಾರಕ್ಕೆ ವೆಲ್ಫೇರ್ ಪಾರ್ಟಿ ಆಗ್ರಹ

  ಕಲಬುರಗಿ : "ಜಿಲ್ಲೆಯಲ್ಲಿ ಡೆಂಗಿ ಜ್ವರ ಹಾವಳಿ ದಿನೇ ದಿನೇ ವ್ಯಾಪಕವಾಗುತ್ತಿದೆ. ಝಿಕಾ ವೈರಾಣು ಸೋಂಕು, ಚಿಕನ್ ಗುನ್ಯಾ…

52 mins ago

ರಾಮ್ ರಾವ್ ಮಹಾರಾಜರ ಆದರ್ಶ ಮೈಗೂಡಿಸಿಕೊಳ್ಳಿ

ಚಿತ್ತಾಪುರ: ವಿಶ್ವ ರತ್ನ ನಡೆದಾಡುವ ಭಗವಂತ ಬಂಜಾರ ಸಮಾಜದ ಧರ್ಮಗುರುಗಳಾದ ಡಾ,ರಾಮ್ ರಾವ್ ಮಹಾರಾಜರು ಒಬ್ಬ ಮಹಾನ್ ಸರಳ ಸಜ್ಜನಿಕೆಯ…

56 mins ago

ಕಲಾವಿದ ಕಲ್ಪನೆಗಳ ಅಭಿವ್ಯಕ್ತಿಯೇ ಚಿತ್ರಕಲೆ: ಸಂತೋಷ್ ಹೆಗಡೆ

ಬೆಂಗಳೂರು:ಕಲಾವಿದನ ಕಲ್ಪನೆ ಮತ್ತು ಭಾವನೆಗಳ ಅಭಿವ್ಯಕ್ತಿಯೆ ಚಿತ್ರಕಲೆ,ಹಾಗೂ ಸಾಮಾನ್ಯವಾಗಿ ಒಬ್ಬ ಕಲಾವಿದ ಕಲೆಯಲ್ಲಿ ತೊಡಗಿಕೊಳ್ಳುವುದರಿಂದ ಅವರ ಯೋಚನೆ ಮತ್ತು ಭಾವನೆಗಳು…

3 hours ago

ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹಿಸುವುದು ಶ್ಲಾಘನೀಯ

ಕಲಬುರಗಿ: ನಗರದ ಕಲಾಮಂಡಳದಲ್ಲಿ ಜಾÐನದೀಪ ನೃತ್ಯ ಕಲಾಸಂಸ್ಥೆ ರಿ ವತಿಯಿಂದ ಸಾಂಸ್ಕ್ರತಿಕ ಕಲಾಮಹೋತ್ಸ ಮತ್ತು ಎಸ್.ಎಸ್.ಎಲ್.ಸಿ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ…

5 hours ago