ಆಳಂದ: ತಾಲೂಕಿನ ಸಾವಳೇಶ್ವರ ಕ್ರಾಸ್ ನಲ್ಲಿ ರೈತರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಸಭಾ ತಾಲೂಕು ಸಮಿತಿಯ ವತಿಯಿಂದ ಬುಧವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ರಾಜ್ಯ ಸಂಚಾಲಕ ಮೌಲ್ಲಾ ಮುಲಾ ಮಾತನಾಡಿ, ರೈತರಿಗೆ ಜನರಲ್ ವಿದ್ಯುತ್ ಸಂಪರ್ಕ ನೀಡಿ, ಠೇವಣಿ ಆಧಾರಿತ ವಿದ್ಯುತ್ ನೀಡಿ , ಹಗಲಿನಲ್ಲಿ ವಿದ್ಯುತ್ ಪೂರೈಕೆ ಮಾಡಿ,ಎಂದು ಅವರು ಒತ್ತಾಯಿಸಿದರು. ರೈತ ಮುಖಂಡ ರಮೇಶ್ ಲೋಹಾರ ಮಾತನಾಡಿ, ರೈತರ ಬೇಡಿಕೆ ಇಡಿಸದಿದ್ದರೆ ಆಳಂದ ಬಂದ್ ಕರೆ ನೀಡಲಾಗುವುದು ಎಂದು ಎಚ್ಚರಿಸಿದ್ದರು.
ತಾಲ್ಲೂಕು ಅಧ್ಯಕ್ಷ ಚಂದ್ರಕಾಂತ ಖೋಬರೆ,ಮಲ್ಲಿನಾಥ್ ಯಲ್ಲಶೇಟ್ಟಿ ಸೇರಿದಂತೆ ಪ್ರಮುಖ ರೈತರು ಮಾತನಾಡಿ’ಬೇಡಿಕೆ ಈಡೇರಿಸಲು ಒತ್ತಾಯಿಸಿದರು.ತಡವಾಗಿ ತಹಶಿಲ್ದಾರ ಯಲ್ಲಪ್ಪ ಸುಬೇದಾರ್ ಸ್ಥಳಕ್ಕೆ ಭೇಟಿ ನೀಡಿ,ಮನವಿ ಸ್ವೀಕರಿಸಿದರು.ಜೆಸ್ಕಾಂ ಕಾರ್ಯನಿರ್ವಾಹಕ ಅಧಿಕಾರಿ,ಸಂತೋಷ ಚೌಹಾನ ರೈತರನ್ನು ಉದ್ದೇಶಿಸಿ ಮಾತನಾಡಿ, ಜನರಲ್ ವಿದ್ಯುತ್ ಸಮಸ್ಯೆ ನೀಡುವುದು ಸರ್ಕಾರ ಮಟ್ಟದಲ್ಲಿ ಇದೆ.ರೈತರ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ಯುವ ಹೋರಾಟ ಅಶ್ಪಾಕ್ ಮುಲ್ಲಾ ಅಧಿಕಾರಿಗಳ ಜತೆ ಚರ್ಚಿಸಿದರು. ರೈತರಾದ ಪಿಂಟು ಪಾಟೀಲ ಬಸವರಾಜ್ ಜಮಾದಾರ ವಿಶ್ವನಾಧ ಜಮಾದಾರ, ರಮೇಶ್ ಹತ್ತಿ,ಮುಬಾರಕ್ ಮುಲಗೆ ಎ.ಡಬ್ಲೂ ನಟರಾಜ ಸೇರಿದಂತೆ ಮತ್ತಿತರರು ಇದ್ದರು.
ರಸ್ತೆ ತಡೆ ಸಂಚಾರ ಅಸ್ತವ್ಯಸ್ತ : ವಾಗ್ದರಿ – ರಿಬ್ಬನ್ ಪಲ್ಲಿ (ರಾಜ್ಯ ಹೆದ್ದಾರಿ 10) ಎರಡು ರಸ್ತೆ ತಡೆ ಮಾಡಿದ್ದರಿಂದ ಎರಡು ಗಂಟೆ ಬಂದ್ ಆಗುವುದರಿಂದ ವಾಹನ ಸ್ವಾರರು ಪ್ರಯಾಣಿಕರು ರೋಗಿಗಳು ಪರದಾಡಿದರು.ಹೋರಾಟಗಾರು ಪ್ರಯಾಣಿಕರ ಮಧ್ಯೆ ವಾಗ್ವಾದ ನಡೆಯಿತು.ಪೋಲಿಸರು ಹರಸಾಹಸ ಪಟ್ಟರು.ಎ.ಎಸ್.ಐ.ಭದ್ರಪ್ಪ,ಹೆಡ್ ಕಾನ್ಸಟೇಬಲ ಲಕ್ಷ್ಮಿಪುತ್ರ ಇದ್ದರು.
ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…
ಕಲಬುರಗಿ: ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…
ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…
ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…
ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…
ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…