ಸಮಾಜದ ಪ್ರತಿಯೊಬ್ಬ ಮಗವಿಗೂ ಶಿಕ್ಷಣ ಅಗತ್ಯ

ಕಲಬುರಗಿ: ನಮ್ಮ ನಮ್ಮಲ್ಲಿನ ಆಚರಣೆಗಳು ಮನೆಯ ಹೊಸ್ತಿಲಿನ ಒಳಗೆ ಇಟ್ಟುಕೊಳ್ಳಬೇಕು ಸಮಾಜದಲ್ಲಿ ಹೊರ ಬಂದಾಗ ನಾವೆಲ್ಲರೂ ಒಂದಾಗಬೇಕಾಗಿದೆ ಸಮಾಜದ ಪ್ರತಿಯೊಬ್ಬ ಮಗವುವಿಗೂ ಶಿಕ್ಷಣ ಅಗತ್ಯ ಬಗ್ಗೆ ತಿಳಿದುಕೊಳ್ಳಿ ಎಂದು ವಿಶೇಷ ಉಪನ್ಯಾಸ ನೀಡಿದ ಅಫಜಲಪೂರ ಸರಕಾರಿ ಪ್ರಥಮ ದರ್ಜೇ ಮಹಾವಿದ್ಯಾಲಯದ ಉಪನ್ಯಾಸಕರಾದ ಡಾ.ದತ್ತಾತ್ರೇಯ ಸೂರ್ಯವಂಶಿ ಹೇಳಿದರು.

ಶನಿವಾರದಂದು ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ ಶ್ರೀ ಸವಿತಾ ಮಹರ್ಷಿ ಜಯಂತ್ಯೋತ್ಸವ ಸಮಿತಿ ಕಲಬುರಗಿ ಇವರುಗಳು ಸಂಯುಕ್ತಾಶ್ರಯದಲ್ಲಿ ಶ್ರೀ ಸವಿತಾ ಮಹರ್ಷಿ ಭಾವಚಿತ್ರಿಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ಸವಿತಾ ಸಮಾಜ ನಾನಾ ಉಪಜಾತಿಗಳಿಂದ ಹರಿದು ಹಂಚಿ ಹೋಗಿದೆ ಅವುಗಳೆಲ್ಲ ಒಗ್ಗಟ್ಟಾಗಿ ಸಂಘಟಿತರಾದಾಗ ನಮ್ಮ ಬಗ್ಗೆಯ ಸರಕಾರ ಜನಪ್ರತಿನಿಧಿಗಳು ಗಮನ ನೀಡುತ್ತಾರೆ ಎಂದರು.

ನಮ್ಮದು ಸನಾತನ ಪರಂಪರೆಯ ನಾಡು, ವೈದ್ಯಕೀಯ ವೈಜ್ಞಾನಿಕ ಶೈಕ್ಷಣಿ, ಆರ್ಥಿಕ, ಖಗೋಳ, ಗಣಿತ ಭೂಗೋಳ, ವ್ಯವಸಾಯ, ಸಾಹಿತ್ಯ ಕಲೆ, ಸಂಸ್ಕಾರ ಮುಂತಾದ ಮಾನವನ ಸರ್ವತೋಮುಖ ಅಭಿವೃದ್ಧಿಗೆ ಮೂಲ ಕಾರಣರು ನಮ್ಮ ಖುಷಿ ಮುನಿಗಳು ಎಂದರು.. ಧನ್ವಂತರಿ, ಸಂಗೀತ, ಆಯುಶ್ಕರ್ಮ, ವೇದಗಳ ಕಾಲದಿಂದಲೂ ಸವಿತಾ ಜನಾಂಗದ ಪೂರ್ವಜರು ಸಂಸ್ಕಾರವಂತರಾಗಿದ್ದು. ವೈದ್ಯಕೀಯ ಪರಂಪರೆಯುಳ್ಳವರಾಗಿದ್ದರು ಎಂದರು.

ವೀಣೆಯ ಸಂಗೀತದ ಮೂಲಕ ಸಾಮವೇದದ ಮಂತ್ರಗಳನ್ನು ಗಾಯನದ ಮೂಲಕ ಹೇಳುತ್ತ ಮತ್ತೊಂದು ಕೈಯಲ್ಲಿ ಅಮೃತ ಕುಂಭಾ ಆಯುರ್ವೇದ ಚಿಕಿತ್ಸೆ ನಮ್ಮ ಸವಿತಾ ಪೂರ್ವಜರು ಭಾರತದೇಶದ ಪ್ರಥಮ ವೈದ್ಯರಾಗಿದ್ದರೆಂದು ಬಿಂಬಿಸುತ್ತದೆ ಎಂದು ಅವರ ಬಗ್ಗೆ ಸಂಕ್ಷೀಪ್ತ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಕನ್ನಡ ಸಾಂಸ್ಕತಿ ಇಲಾಖೆ ಉಪನಿರ್ದೇಶಕಿ ಜಗದ್ದೀಶ್ವರಿ ಎ. ನಾಸಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಶಿರಸ್ತೇದಾರ ಉದಯಕುಮಾರ ಪಾಟೀಲ ಸಮಾಜದ ಮುಖಂಡರು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಜ್ಯೋತಿ ಬೆಳೆಗಿಸಿದರು. ಕನ್ನಡ ಸಂಸ್ಕøತಿ ಇಲಾಖೆ ಉಪನಿರ್ದೇಶಕಿ ಜಗದೀಶ್ವರಿ ಎ. ನಾಸಿ ಅವರು ಸ್ವಾಗತಿಸಿದರು.

ಸವಿತಾ ಸಮಾಜದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಗಣೇಶ ಚನ್ನೂರು ಅವರು ಮಾತನಾಡಿ, ನಮ್ಮ ಸಮಾಜದಲ್ಲಿ ಅನೇಕ ಸವಲತ್ತುಗಳನ್ನು ಸರ್ಕಾರ ನೀಡಬೇಕು. ನಮ್ಮ ಜನಾಂಗಕ್ಕೆ ಪ್ರಾತಿನಿದ್ಯವನ್ನು ನೀಡಬೇಕು ಪ್ರವರ್ಗ-2 ರ ಬದಲು ಪ್ರವರ್ಗ-1 ಕ್ಕೆ ಸೇರಿಬೇಕೆಂದರು.

ವೇದಿಕೆ ಮೇಲೆ ಸವಿತಾ ಮಹರ್ಷಿ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಶರಣಬಸಪ್ಪ ಎಂ. ಸೂರ್ಯವಂತಿ, ಸಮಾಜ ಮುಖಂಡರು ಸೇರಿದಂತೆ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಕಲಾವಿದರು ಭಾಗವಹಿಸಿದ್ದರು.

emedialine

Recent Posts

ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…

3 hours ago

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

6 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

10 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

11 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

13 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

1 day ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420