ಸುರಪುರ: ಇಲ್ಲಿನ ನಗರಸಭೆಗೆ ಬುಧುವಾರದಂದು ಕರೆಯಲಾಗಿದ್ದ ಆಯ-ವ್ಯಯ(ಬಜೇಟ್) ಅನುಮೋದನೆ ಸ¨sಗೆÉ ಆಡಳಿತ ಪಕ್ಷದ ಸದಸ್ಯರು ಸೇರಿದಂತೆ ನಗರಸಭೆ ಸದಸ್ಯರ ಗೈರು ಹಾಜರಿಯಿಂದಾಗಿ ಮುಂದೂಡಿಕೆ ಆದ ಪ್ರಸಂಗ ನಡೆಯಿತು.
ನಗರಸಭೆ ಅಧ್ಯಕ್ಷೆ ಸುಜಾತಾ ವಿ.ಜೇವರ್ಗಿ ಅಧ್ಯಕ್ಷತೆಯಲ್ಲಿ ಬುಧುವಾರದಂದು ಬೆಳಿಗ್ಗೆ 11ಗಂಟೆಗೆ ನಗರಸಭೆ ಸಭಾಂಗಣದಲ್ಲಿ ಕರೆಯಲಾಗಿದ್ದ ಆಯ-ವ್ಯಯ ಅಂದಾಜು ಮುಂಗಡ ಪತ್ರ(ಬಜೆಟ್) ಅನುಮೋದನೆ ನೀಡುವ ವಿಶೇಷ ಸಾಮಾನ್ಯ ಸಭೆಗೆ ಆಡಳಿತ ಬಿಜೆಪಿ ಪಕ್ಷದ 16 ಸದಸ್ಯರಲ್ಲಿ ಅಧ್ಯಕ್ಷೆ ಸುಜಾತಾ ಜೇವರ್ಗಿ ಹಾಗೂ ಹಿರಿಯ ಸದಸ್ಯ ವೇಣುಮಾಧವ ನಾಯಕ ಸೇರಿದಂತೆ ಕೇವಲ ಐದು ಜನ ಆಡಳಿತರೂಢ ಸದಸ್ಯರು ಹಾಗೂ 4ಜನ ನಾಮ ನಿರ್ದೇಶಿತ ಸಭೆ ಆಗಮಿಸಿದ್ದರು, ವಿರೋಧ ಪಕ್ಷವಾಗಿರುವ ಕಾಂಗ್ರೆಸ್ನ ಎಲ್ಲಾ 15 ಸದಸ್ಯರು ಸಭೆಯಿಂದ ದೂರ ಉಳಿದಿರುವುದು ಕಂಡು ಬಂತು.
ಸಭೆಯನ್ನು ಪ್ರಾರಂಭಿಸಲು ಒಂದು ತಾಸು ಕಾಯುತ್ತಾ ಕುಳಿತುಕೊಂಡರೂ ಸದಸ್ಯರು ಬರಲಿಲ್ಲ ನಂತರ ವಿವಿಧ ಕಾರಣಾಂತರಗಳಿಂದ ಸದಸ್ಯರು ಇಂದಿನ ಬಜೆಟ್ ಸಭೆಗೆ ಬಂದಿಲ್ಲದ ಕಾರಣ ಗುರುವಾರಕ್ಕೆ ಸಭೆಯನ್ನು ಮುಂದೂಡಲಾಗಿದೆ ಎಂದು ನಗರಸಭೆ ಪೌರಾಯುಕ್ತ ಪ್ರೇಮ್ ಚಾಲ್ರ್ಸ ಅವರು ನಂತರ ಪತ್ರಿಕಾ ವರದಿಗಾರರಿಗೆ ತಿಳಿಸಿದರು.
ಅಲ್ಲದೆ ಇಂದಿನ ಆಡಳಿತ ರೂಢ ಸಭೆಗೆ ಕೆಲವರು ತಮ್ಮ ಸಂಬಂಧಿಕರಲ್ಲಿ ಮೃತಪಟ್ಟಿದ್ದರಿಂದ ಅಂತ್ಯ ಸಂಸ್ಕಾರಕ್ಕೆ, ಕೆಲವು ಲಗ್ನಗಳಿಗೆ ಹೋಗಿದ್ದಾರೆ ವೈಯುಕ್ತಿಕ ಕೆಲಸದಿಂದಾಗಿ ಬರಲಿಕ್ಕೆ ಆಗಿಲ್ಲ ಎಂದು ನಗರಸಭೆ ಅಧ್ಯಕ್ಷೆ ಸುಜಾತಾ ಜೇವರ್ಗಿ ಅವರು ಸಮಜಾಯಿಷಿ ನೀಡಿದರು.
ಇಂದಿನ ಸಭೆಗೆ ವಿರೋಧ ಪಕ್ಷ ಕಾಂಗ್ರೆಸ್ನ ಎಲ್ಲಾ ಸದಸ್ಯರು ಗೈರು ಹಾಜರಾಗಿದ್ದು ವಿಶೇಷವಾಗಿತ್ತು, ವಿರೋಧ ಪಕ್ಷದ ನಾಯಕರು ತಮ್ಮ ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮ ಪ್ರಯುಕ್ತ ಸಭೆಗೆ ಬರಲು ಆಗಿಲ್ಲ ಎಂದು ಪತ್ರಿಕೆಯೊಂದಿಗೆ ಮಾತನಾಡಿ ತಿಳಿಸಿದರು, ಆದರೆ ಉಳಿದ ಸದಸ್ಯರು ಏಕೆ ಬರಲಿಲ್ಲ ಎಂಬುದು ತಿಳಿಯಲಿಲ್ಲ, ಇಂದಿನ ಸಭೆಗೆ ಆಡಳಿತ ರೂಢ ಹಾಗೂ ವಿರೋಧ ಪಕ್ಷ ಸೇರಿದಂತೆ ಎಲ್ಲರೂ ಒಟ್ಟಾಗಿ ಸಭೆಯಿಂದ ದೂರ ಉಳಿದಿರುವುದು ಮತ್ತೊಂದು ವಿಶೇಷ.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…