ಶಹಾಪುರ: ಇಲ್ಲಿನ ಪ್ರಸಿದ್ಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕನ್ನಡ ಮಠ ಎಂದೇ ಖ್ಯಾತಿಯಾದ ಶ್ರೀ ಚರಬಸವೇಶ್ವರ ಸಂಸ್ಥಾನ ಗದ್ದುಗೆಗೆ ಯಾದಗಿರಿ ಜಿಲ್ಲೆಯ ನೂತನ ಶಾಸಕರಾದ ಚನ್ನ ರೆಡ್ಡಿ ತುನ್ನೂರವರು ಆಗಮಿಸಿ ಶ್ರೀ ಚರಬಸವೇಶ್ವರರ ಸನ್ನಿಧಿಯ ದರ್ಶನ ಪಡೆದು ಅರ್ಚನೆ ಪೂಜ ಸಲ್ಲಿಸಿ, ನಮಸ್ಕರಿಸಿದರು. ಪೂಜ್ಯ ಬಸವಯ್ಯ ಸ್ವಾಮಿಗಳ ದರ್ಶನ ಪಡೆದು ಧನ್ಯನಾದೆ ಎಂದು ತಿಳಿಸಿದರು.
ಸಗರನಾಡಿನಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಂಸ್ಥಾನ ಗದ್ದುಗೆಯ ಪಾತ್ರ ಬಹುದೊಡ್ಡದಾಗಿದೆ,ಗದ್ದುಗೆ ಮುಖ್ಯ ಕೇಂದ್ರವಾಗಿದೆ ಎಂದು ಹೇಳಿದರು.
ಸಂಸ್ಥಾನ ಗದ್ದುಗೆಯ ಶರಣು ಬಿ ಗದ್ದುಗೆ ಸೇರಿದಂತೆ ಅನೇಕ ಭಕ್ತರು ಉಪಸ್ಥಿತರಿದ್ದರು ಇದೇ ಸಂದರ್ಭದಲ್ಲಿ ಶಾಸಕ ಚೆನ್ನಾರೆಡ್ಡಿ ತುನ್ನೂರವರೆಗೆ ಪೂಜ್ಯರು ಹಾಗೂ ಶರಣು ಗದ್ದುಗೆಯವರು ಶಾಲು ಹೊದಿಸಿ ಗೌರವಿಸಿದರು.