ಬಸವೇಶ್ವರ ಭಾವಚಿತ್ರಕ್ಕೆ ಅಪಮಾನ; ಆರೋಪಿಗಳ ಬಂಧನಕ್ಕೆ ಸಂಸದ ಜಾಧವ್ ಆಗ್ರಹ

0
22

ಕಲಬುರಗಿ: ಚಿತ್ತಾಪೂರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ, ಬಸವೇಶ್ವರರ ಭಾವಚಿತ್ರಕ್ಕೆ ವಿರೋಪಗೊಳಿಸಿದ್ದನ್ನು  ಕಲಬುರಗಿ ಸಂಸದ ಡಾ. ಉಮೇಶ ಜಾಧವ ಖಂಡಿಸಿದ್ದರು.

ಈ ಕುರಿತು ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ ಅವರು ಹಲಕರ್ಟಿ ಗ್ರಾಮದಲ್ಲಿ, ಜಗಜ್ಯೋತಿ ಬಸವೇಶ್ವರರ ಭಾವಚಿತ್ರವನ್ನು ಕೆಲವು ಅಸಮಾಜಿಕ ತತ್ವಗಳು ಭಗ್ನ ಗೊಳಿಸಿದ್ದಾರೆ. 12 ನೇ ಶತಮಾನದಲ್ಲಿಯೇ ಸಮಾನತೆಯ ತತ್ವವನ್ನು ವಿಶ್ವಕ್ಕೆ ಪ್ರತಿಪಾದಿಸಿದ ವಿಶ್ವಗುರು ಶ್ರೀ ಬಸವಣ್ಣನವರಿಗೆ ಮಾಡಿದ ಅವಮಾನ ಮಾತ್ರವಲ್ಲ, ಇಡೀ ದೇಶಕ್ಕೆ ಮಾಡಿದ ಅಪಮಾನವಾಗಿದೆ.

Contact Your\'s Advertisement; 9902492681

ಆರೋಪಿಗಳು ಯಾರೆಂದು ಲೆಕ್ಕಿಸದೆ, ಸರ್ಕಾರ ಮತ್ತು ಪೊಲೀಸ್ ಇಲಾಖೆ ತಕ್ಷಣ ಅವರನ್ನು ಬಂಧಿಸಬೇಕು ಮತ್ತು ಈ ಕೃತ್ಯದ ಹಿಂದಿನ ಉದ್ದೇಶದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಇಲ್ಲದಿದ್ದರೆ, ನಾವು ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಹೇಳಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here