ಭೀಕರ ಬರಗಾಲ, ಜನ- ಜಾನುವಾರು ಸಂಕಷ್ಟ- ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳದಿರಲು ಶಾಸಕ ಅಲ್ಲಂಪ್ರಭು ಪಾಟೀಲ್‌ ನಿರ್ಧಾರ

0
70

ಕಲಬುರಗಿ; ಇದೇ ಡಿ. 5 ರಂದು ನಡೆಯಲಿರುವ ತಮ್ಮ 67 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ಕಲಬುರಗಿ ದಕ್ಷಿಣ ಮತಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಹಿರಿಯ ಶಾಸಕರಾದ ಅಲ್ಲಂಪ್ರಭು ಪಾಟೀಲ್‌ ನಿರ್ಧರಿಸಿದ್ದಾರೆ.

ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು ಮೊದಲೇ ಬರಗಾಲ ಬಿದ್ದಿದೆ, ಜನ- ಜಾನುವಾರು ಸುತ್ತಮುತ್ತ ಸಂಕಷ್ಟದ ಹುತ್ತ ಬೆಳೆದು ನಿಂತಿದೆ. ಬೆಳೆಗಳು ಹಾಳಾಗಿವೆ. ಇಳುವರಿ ಬಾರದಾಗಿದೆ. ಹಸಿಬರಗಾಲದಂದಾಗಿ ಕೃಷಿಕರು ಕಂಗಾಲಾಗಿದ್ದಾರೆ. ಹೊರಗೆ ಕಾಯಿ ಕಂಡರೂ ಒಳಗೆ ಟೊಳ್ಳಾಗಿದೆ. ಹೀಗಾಗಿ ಇಳುವರಿ ಬಿದ್ದು ಹೋಗುವ ಭಯ ಆ‍ರಿಸಿದೆ.

Contact Your\'s Advertisement; 9902492681

ಇಂತಹ ಕಷ್ಟಕಾಲದಲ್ಲಿ ರೈತರು, ಜನರ ಸಂಕಷ್ಟದಲ್ಲಿ ಭಾಗಿಯಾಗಲು, ಅವರ ನೋವು- ಯಾತನೆ ಹಂಚಿಕೊಳ್ಳುವ ಉದ್ದೇಶದಿಂದ ಈ ಬಾರಿಯ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುವುದು ಬೇಡವೆಂಬ ನಿರ್ಧಾರಕ್ಕೆ ತಾಳಿರೋದಾಗಿ ಅಲ್ಲಂಪ್ರಭು ಪಾಟೀಲ್‌ ಹೇಳಿದ್ದಾರೆ.

ಹುಟ್ಟುಹಬ್ಬದ ದಿನವಾದ ಡಿ. 5 ರಂದು ತಾವು ಕಲಬುರಗಿಯಲ್ಲಿರೋದಿಲ್ಲ. ಕಾರ್ಯಕರ್ತರು, ಅಭಿಮಾನಿಗಳು ಯಾರೂ ಸರಳ, ವಿಜೃಂಭಣೆ ಎಂದು ಯಾವುದೇ ರೀತಿಯಲ್ಲಿಯೂ ಹುಟ್ಟುಹಬ್ಬ ಆಚರಿಸುವುದು ಬೇಡ. ಜನರ ಸಂಕಷ್ಟದಲ್ಲಿ ನಾವು- ನಾವೆಲ್ಲರೂ ಭಾಗಿಯಾಗಿ ಅವರಿಗೆ ನೆರವಿನ ಹಸ್ತ ಚಾಚೋಣ. ಈ ದಿಶೆಯಲ್ಲಿ ಸದನದ ಒಳಗೂ- ಹೊರಗೂ ತಾವು ನಿರಂತರ ಹೋರಾಟ ನಡೆಸೋದಾಗಿಯೂ ಶಾಸಕ ಅಲ್ಲಂಪ್ರಭು ಪಾಟೀಲ್‌ ಸ್ಪಷ್ಟಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here