ವಾಜಪೇಯಿ ನಮಗೆಲ್ಲಾ ಆದರ್ಶಮಯ: ಇಂಗಿನಶೆಟ್ಟಿ

0
21

ಶಹಾಬಾದ : ವಾಜಪೇಯವರ ಜೀವನವೇ ನಮಗೆಲ್ಲಾ ಆದರ್ಶಮಯ. ಅವರ ನಡೆ,ನುಡಿ,ಪ್ರಾಮಾಣಿಕತೆ, ರಾಜಕೀಯ ಚಾಣಾಕ್ಷತೆ, ಅವರ ಮಾತಿನ ಮೋಡಿಯಲ್ಲದೇ ಸರಳ ವ್ಯಕ್ತಿತ್ವ ಇಂದಿನ ಯುವಕರಿಗೆ ಮಾದರಿ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ ಹೇಳಿದರು.

ಅವರು ಸೋಮವಾರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹುಟುಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ಅಟಲಜೀ ಅವರು ಪ್ರಧಾನಿಯಾಗಿದ್ದಾಗ ಜಾರಿಗೆ ತಂದಂತಹ ಯೋಜನೆಗಳು, ರೂಪಿಸಿದ ವಿದೇಶಾಂಗ ನೀತಿಗಳು ಹಾಗೂ ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳು ಇಂದಿಗೂ ಎಲ್ಲಾ ರಾಜಕೀಯ ಮುಖಂಡರಿಗೆ ಪ್ರೇರಣಾದಾಯಕ. ಅವರ ಸತ್ಯ ಶುದ್ಧ ಕಾಯಕಕ್ಕೆ ಭಾರತ ಸರ್ಕಾರ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವ ನೀಡಿದೆ ಎಂದು ಹೇಳಿದರು.

ಬಿಜೆಪಿ ಮುಖಂಡ ಚಂದ್ರಕಾಂತ ಗೊಬ್ಬೂರಕರ ಹಾಗೂ ಅರುಣಪಟ್ಟಣಕರ್ ಮಾತನಾಡಿ, ಭಾರತ ಬಿಟ್ಟು ತೊಲಗಿ ಚಳುವಳಿಯಿಂದ ಸ್ವಾತಂತ್ರ್ರ್ಯ ಹೋರಾಟಕ್ಕೆ ಧುಮುಕಿ ಸಂಸದರಾಗಿ,ಸಚಿವರಾಗಿ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದರೂ ಭ್ರಷ್ಟಾಚಾರದಿಂದ ದೂರವಿದ್ದು, ನಿಸ್ವಾರ್ಥಿ, ಮೌಲ್ಯಧಾರಿತ ಅಪರೂಪದ ರಾಜಕಾರಣಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾದವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ. ಬಡಜನರ ಕಲ್ಯಾಣಗೋಸ್ಕರ 108 ಅಂಬುಲೆನ್ಸ, ಮಹಿಳೆಯರಿಗೆ ಉಚಿತ ಶಿಕ್ಷಣ, ಸರ್ವಶಿಕ್ಷಣ ಅಭಿಯಾನ ಜಾರಿಗೆ ತಂದ ಶ್ರೇಯಸ್ಸು ವಾಜಪೇಯಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಬಿಜೆಪಿ ನಗರ ಘಟಕದ ಉಪಾಧ್ಯಕ್ಷ ಮಹಾದೇವ ಗೊಬ್ಬೂರಕರ, ಪ್ರಧಾನ ಕಾರ್ಯದರ್ಶಿಗಳಾದ ಸದಾನಂದ ಕುಂಬಾರ, ಸಿದ್ರಾಮ ಕುಸಾಳೆ, ಪ್ರಮುಖರಾದ ಕನಕಪ್ಪ ದಂಡಗುಲಕರ,ಜ್ಯೋತಿ ಶರ್ಮಾ,ಶಶಿಕಲಾ ಸಜ್ಜನ್,ಪದ್ಮಾ ಕಟಕೆ, ಬಸವರಾಜ ಬಿರಾದಾರ, ಅನೀಲ ಬೋರಗಾಂವಕರ್, ಚಂದ್ರಕಾಂತ ಗೊಬ್ಬೂರಕರ್, ಭೀಮರಾವ ಸಾಳುಂಕೆ, ಸಾಬಣ್ಣ ಬೆಳಗುಂಪಿ, ರಾಜು ಕುಂಬಾರ, ಭೀಮಯ್ಯ ಗುತ್ತೆದಾರ, ಅಪ್ಪಾರಾವ ನಾಗಶೆಟ್ಟಿ, ಕಾಶಣ್ಣ ಚನ್ನೂರ್, ಸಂತೋಷ ಪಾಟೀಲ, ದತ್ತಾತ್ರೇಯ ಘಂಟಿ, ದೊಡ್ಡನಿಂಗಪ್ಪ, ಮೋಹನಹಳ್ಳಿ ಸೇರಿದಂತೆ ಕಾರ್ಯಕರ್ತರು ಉಪಸ್ಥಿತಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here