ಕಲಬುರಗಿ: ನಿರ್ಗತಿಕ ಅಜ್ಜಿಗೆ ರಕ್ಷಿಸಿ ಸುರಕ್ಷಿತ ವೃದ್ದಾಶ್ರಮಕ್ಕೆ ಸ್ಥಳಾಂತರ

0
45

ಕಲಬುರಗಿ: ಮಹಾನಗರ ಪಾಲಿಕೆ ವ್ಯಾಪ್ತಿಯ ಮೊಮಿನಪುರ ಬಡಾವಣೆಯಲ್ಲಿ ಹಲವಾರು ವಷ೯ಗಳಿಂದ ಯಾವುದೇ ಆಸರೆ ಇಲ್ಲದೆ ಕಟ್ಟಡದ ಆಸರೆಯಲ್ಲೇ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ ಹಿರಿಯ ವೃದ್ಧ ಮಹಿಳೆಯನ್ನು ರಕ್ಷಿಸಿ ವೃದ್ಧಾಶ್ರಮಕ್ಕೆ ಸೇರಿಸಲಾಯಿತು.

ಸಮಾಜಿಕ ಜಾಲತಾಣವಾಗಿರುವ ಎಕ್ಸ್ ನಲ್ಲಿ ಅನಾಥ ಅಜ್ಜಿಯ ಕುರಿತು ವಿಕೆ ಕುಲಕರ್ಣಿ ಎಂಬುವವರು ಮಾಹಿತಿ ಹಂಚಿಕೊಂಡಿದರು. ಇವರ ಮಾಹಿತಿ ಆಧರಿಸಿ ಕೊಡಲೇ ಕಾಯ೯ಪ್ರವೃತ್ತರಾದ, ಜಿಲ್ಲಾಡಳಿತ ಮತ್ತು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಅಧಿಕಾರಿ ಸಾದೀಕ್ ಹುಸೇನ್ ಖಾನ್ ತಕ್ಷಣ ಕ್ರಮಕ್ಕೆ ಆದೇಶಿಸುತ್ತಿದಂತೆ. ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ರಕ್ಷಿಸಿ ವೃದ್ದಾಶ್ರಮಕ್ಕೆ ಸುರಕ್ಷಿತವಾಗಿ ಸ್ತಾಳಾಂತರಿಸಲಾಯಿತು.

Contact Your\'s Advertisement; 9902492681

ಜೇವರ್ಗಿ ರಸ್ತೆಯ ಸಂಪಿಗೆ ನಗರದಲ್ಲಿರುವ ಶ್ರೀ ಎಳು ಅವತಾರದ ತಾಯಮ್ಮ ದೇವಿ ವೃದ್ಧಾಶ್ರಮದ ಸಿಬ್ಬಂದಿಗಳ ಸಹಾಯದಿಂದ ಅನಾಥ ವೃದ್ಧೆಯನ್ನು ವೃದ್ಧಾಶ್ರಮಕ್ಕೆ ಸೇರಿಸಿ ಆರೈಕೆ ಮಾಡುವ ಮೂಲಕ ಅಜ್ಜಿಯ ಕಾಳಜಿ ವಹಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here