ಕಲಬುರಗಿ: ನರೋಣ ಗ್ರಾಮದಲ್ಲಿರುವ ಕನಕ ಭವನದಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಯುವ ಸಂಘ ಆಳಂದ ತಾಲೂಕ ಅಧ್ಯಕ್ಷ ಬಾಲಾಜಿ ಘೋಡಕೆ ನೇತೃತ್ವದಲ್ಲಿ ಸಭೆ ನಡೆಸಿ ಈ ಸಭೆಯಲ್ಲಿ ಶ್ರೀ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಯುವ ಸಂಘ ನರೋಣ ಗ್ರಾಮದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಕಾಶಿನಾಥ ಡಣ್ಣೂರ (ಅಧ್ಯಕ್ಷರು), ಪ್ರಭುಲಿಂಗ ಖ್ಯಾತ ನವರ(ಉಪಾಧ್ಯಕ್ಷ), ಇವರನ್ನು ನೇಮಕ ಮಾಡಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಯುವ ಮುಖಂಡರಾದ ಸಿದ್ಧು ಪೂಜಾರಿ, ಯಲ್ಲಪ್ಪ ಭಕುರ್ ನರೋಣ, ಮಾಳಪ್ಪ ನರೋಣ, ಖ್ಯಾತ ವಾಗ್ಮಿಗಳಾದ ಕೈಲಾಸ ಪಾಟೀಲ, ಮಂಜುನಾಥ ಪೂಜಾರಿ, ತಾಲೂಕ ಉಪಾಧ್ಯಕ್ಷ ಶಿವಪ್ಪ ಪೂಜಾರಿ, ತಾಲೂಕ ಕಾರ್ಯ ಅದ್ಯಕ್ಷ ಸಂಜುಕುಮಾರ ಕುಡಕಿ, ತಾಲೂಕು ಪ್ರದಾನ ಕಾರ್ಯದರ್ಶಿ ಸುನೀಲ್ ಪೂಜಾರಿ, ತಾಲೂಕ ಖಂಜಾಚಿ ಪರಮೇಶ್ವರ ಪೂಜಾರಿ ಸೇರಿದಂತೆ ಗ್ರಾಮದ ಯುವಕರು, ಹಿರಿಯರು ಇದ್ದರು.