ರಾಜ್ಯ ಕುರಹಿನಶೆಟ್ಟಿ ಸಮಾಜದ ಕೇಂದ್ರ ಸಮಿತಿಗೆ, ರಾಜ್ಯ ಕಾರ್ಯಕಾರಿಣಿ ಸದಸ್ಯರ ಆಯ್ಕೆ

0
40

ಕಲಬುರಗಿ: ಕರ್ನಾಟಕ ರಾಜ್ಯ ಕುರಹಿನಶೆಟ್ಟಿ ಸಮಾಜದ ಕೇಂದ್ರ ಸಮಿತಿಗೆ, ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ಆಯ್ಕೆಗೊಂಡ,ಶಿಕ್ಷಕ ಹಾಗೂ ಜಿಲ್ಲಾ ಕುರಹಿನಶೆಟ್ಟಿ ಸಮಾಜದ ಉಪಾಧ್ಯಕ್ಷರಾದ ಶ್ರೀ ಕುಶಾಲ ಯಡವಳ್ಳಿ ಯವರಿಗೆ ಮನೆಗೆ ಭೇಟಿ ಗೃಹ ಸನ್ಮಾನ ನೀಡಲಾಯಿತು. ಹಟಗಾರ ಸಮಾಜದ ಹಿರಿಯರು ಹಾಗೂ ಸೋಲಾಪೂರ ನಗರದ ಖ್ಯಾತ ಉದ್ಯಮಿ ಶಿವಶರಣಪ್ಪ ಸದ್ದಲಗಿ ಯವರು ಶಾಲು ಹೊದಿಸಿ ಗೌರವಿಸಿದರು.

ಇದೆ ಸಂದರ್ಭದಲ್ಲಿ ಕಲಬುರಗಿ ನಗರದ ವಾಸಿ ಹಾಗೂ ಹೈಕೋರ್ಟ್ ನ ಹಿರಿಯ ವಕೀಲರಾದ ಶಿವಲಿಂಗಪ್ಪಾ ಅಷ್ಟಗಿ ಮುತ್ತಿನ ಹಾರ ಹಾಕಿ ಸನ್ಮಾನಿಸಲಾಯಿತು, ಕಲಬುರಗಿ ಜನರನ್ನು ಗುರುತಿಸಿ ಸಮಾಜ ಸಂಘಟನೆ ಮಾಡಲು ಈ ಭಾಗದ ವ್ಯಕ್ತಿಗಳ್ಳನ್ನು ಪರಿಗಣಿಸಿ, ಅವಕಾಶ ನೀಡಿದ ರಾಜ್ಯ ಪಧಾದಿಕಾರಿಗಳಿಗೆ ಅಭಿನಂದನೆಗಳು ತಿಳಿಸಿದರು.

Contact Your\'s Advertisement; 9902492681

ಕೊನೆಯಲ್ಲಿ, ನೇಕಾರ ಸಮುದಾಯ ವ್ಯಕ್ತಿಗಳಿಗೆ ರಾಜ್ಯ ಮಟ್ಟದಲ್ಲಿ ಅವಕಾಶ ನೀಡಿ, ಸಾಮಾಜಿಕ ನ್ಯಾಯ ಕಲ್ಪಿಸಿದ ಎಲ್ಲರಿಗೂ ಹಾಗೂ ಕುರಹಿನಶೆಟ್ಟಿ ಕೇಂದ್ರ ಸಮಿತಿಯವರನ್ನು ಕಲಬುರಗಿ ನೇಕಾರ ಸಮುದಾಯದ ವತಿಯಿಂದ ಶುಭ ಕೊರಲಾಯಿತು. ಸ್ವಶಕ್ತಿ ಯಿಂದ ಬೆಳೆದ ಯುವಕರನ್ನು ಗುರುತಿಸಿ ಬೆಳೆಸುವ ಕಾರ್ಯ ಇನ್ನೂ ಹೆಚ್ಚಿನ ರೀತಿಯಲ್ಲಿ ಆಗಲಿ ಎಂದು ಅಭಿನಂದಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here