ಕಲಬುರಗಿ: ಅಂದಾನಿ ಕಲಾ ಮಂಟಪದಲ್ಲಿ ಗಾಂಧಿ ವಿಚಾರ ವೇದಿಕೆಯಲ್ಲಿ ಗಾಂಧಿಯ ಹಂತಕ ಎಂಭ ಪುಸ್ತಕ ಕನ್ನಡಕ್ಕೆ ಅನುವಾದ ಮಾಡಿದ ಮನೋಜ ಕುಮಾರ ಗುದ್ದಿ ಯವರ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಜರಗಿತು.
ಅತಿಥಿ ಉಪನ್ಯಾಸಕ ಶಿವಾನಂದ ಅಣಜಗಿ ಯವರು ಎರಡು ಕೃತಿಗಳು ಗಾಂಧೀಜಿಯ ಹಂತಕ ಮತ್ತು ಅಂಬೇಡ್ಕರ್ ದಿನಚರಿ ಎಂಭ ಪುಸ್ತಕಗಳನ್ನು ನೀಡಿ, ಹೀಗೆ ಪುಸ್ತಕ ಪ್ರೋತ್ಸಾಹ ಕಾರ್ಯಗಳು ನಡೆಯಲಿ ಎಂದು ಎಂದರು.
ಕಲ್ಯಾಣ ಕರ್ನಾಟಕಕ್ಕೆ ಶರಣರ ಜೀವನ ಕುರಿತು ಹೊಸ ಕಾನೂನು ರಚಿಸುವಂತೆ ಮತ್ತು ಅಹಿಂಸಾ ತತ್ವಗಳು ಹೆಚ್ಚಿನ ರೀತಿಯಲ್ಲಿ ಪ್ರಚಾರ ವಾಗುವಂತೆ ನ್ಯಾಯವಾದಿ ಹೆಚ್ಚಿನ ವಾದ ಮಾಡು ಎಂದು ಕಾಣಿಕೆ ರೂಪದಲ್ಲಿ ನೀಡಿ ಪ್ರೋತ್ಸಾಹಿಸುವ ಮೂಲಕ ಗೌರವಿಸಿದರು.
ಕಾರ್ಯಕ್ರಮದಲ್ಲಿ ವೇದಿಕೆಯ ಅಧ್ಯಕ್ಷ ಶಂಕರ ಘಂಟಿ, ಮನೋಜ ಕುಮಾರ ಗುದ್ದಿ, ಪತ್ರಿಕಾ ಸಂಪಾದಕ ದೇವಯ್ಯ ಗುತ್ತೆದಾರ, ಸುಕಿಯ ಹಾಡುಗಾರ ಕಿರಣ ಪಾಟೀಲ ಇತರರು ಉಪಸ್ಥಿತರಿದ್ದರು.