ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದಿಂದ ಸಂಸದ ರಾಧಾಕೃಷ್ಣ ದೊಡ್ಡಮನಿಗೆ ಸನ್ಮಾನ

0
92

ಕಲಬುರಗಿ: ನೂತನ ಸಂಸದರಾಗಿ ಆಯ್ಕೆಯಾದ ರಾಧಾಕೃಷ್ಣ ದೊಡ್ಡಮನಿ ಯವರನ್ನು ಗೃಹ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಲಾಯಿತು.

ಜಿಲ್ಲಾ ಘಟಕದ ಅಧ್ಯಕ್ಷರಾದ ಮಹಾಂತೇಶ ಕೌಲಗಿ ನೈತ್ರುತ್ವದಲ್ಲಿ ಸಪ್ತ ಜಾತಿಗಳ ಮುಖಂಡರಾದ ಸೈಬಣ್ಣ ಹೆಳವರ, ದುರ್ಗಿಮುರ್ಗಿ ಸ್ವಾಮಿ ಬುರಬುರಿ, ಮಲ್ಲೇಶ ಯಾದವ, ರತನ ಬೈಲಪತ್ರ, ನಾಗರಾಜ ವಾಲಿಕಾರ, ಯುವ ನಾಯಕ ಕುಮಾರ ಯಾದವ ಹಾಗೂ ನೇಕಾರ ನ್ಯಾಯವಾದಿ, ಸಾಮಾಜಿಕ ಹೋರಾಟಗಾರ ಮತ್ತು ಜಿಲ್ಲಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿಗಳಾದ ವಿನೋದ ಕುಮಾರ ಜೇನವೇರಿ, ನಿಯೋಗದಲ್ಲಿ ತೆರಳಿ ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ ಪರಿಚಯಿಸುವದರ ಮೂಲಕ ಅಭಿನಂದಿಸಲಾಯಿತು.

Contact Your\'s Advertisement; 9902492681

ನಂತರ ಶಾಲು ಹೊದಿಸಿ, ಮಾಲಾರ್ಪಣೆ ಮಾಡಿ ಸಂಘಟನೆಯ ಆದರ್ಶ ನಾಯಕರಾಗಿದ್ದ ದಿ.ದೇವರಾಜ ಅರಸು ರವರ ಭಾವಚಿತ್ರ ನೀಡಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದರು, ಸಂಸದರು ಒಬಿಸಿಯ ಎಲ್ಲಾ ಸಣ್ಣ ಪುಟ್ಟ ತೊಂದರೆಗಳನ್ನು ಪರಿಹರಿಸಲು ಸರ್ವ ಪ್ರಯತ್ನ ಮಾಡಲು ಸಹಕಾರ ನೀಡುತ್ತೆನೆ ಎಂದು ಹೇಳಿದರು.

ಲೋಕಸಭೆಯ ಅಧಿವೇಶನ ಮುಗಿದ ನಂತರ ಒಂದು ದಿನ ಪರಸ್ಪರ ಒಂದು ಸಭೆಯಲ್ಲಿ ಸೇರಿ, ಸೂಕ್ತ ವಾಗಿ ಎಲ್ಲಾ ಹಿಂದುಳಿದ ಜಾತಿಗಳ ಸಮಸ್ಯೆ ಗಳನ್ನು ಅರಿಯಲು ಒಂದು ಕಡೆ ಸೇರುವುದು ಅತ್ಯಂತ ಉತ್ತಮ ವಾದ ದಿನ ನಿಗಧಿ ಗೊಳಿಸಿ ಸಭೆ ಸೇರೋಣ ಎಂದು ತಿಳಿಸಿದರು. ಇಟಗಿ ಗ್ರಾಮದ ಸುರೇಖಾ ಪಾಟೀಲ್ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here