ಪರಿವರ್ತನೆಯಲ್ಲಿ ಸಮೂಹ ಮಾಧ್ಯಮಗಳ ಪಾತ್ರ ಅನನ್ಯ

0
162

ಚಿಂಚೋಳಿ: ಸಮೂಹ ಮಾಧ್ಯಮಗಳು ಯಾವಾಗಲೂ ಸಮಾಜದ ಮಹತ್ವದ ಸ್ಥಂಬಗಳಾಗಿ ಉಳಿದಿವೆ ಹಾಗೂ ಶೈಕ್ಷಣಿಕ ಸಾಮಾಜಿಕ ಕುರಿತಂತೆ ಎಲ್ಲಾ ಕ್ಷೇತ್ರಗಳ ಪ್ರಚಲಿತ ವಿದ್ಯಮಾನಗಳ ಬಗ್ಗೆ ವರದಿ ನೀಡುವುದಲ್ಲದೆ ಸಮಾಜದ ಸ್ವಾಸ್ಥ್ಯವನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಮಹಿಳಾ ಪ್ರಗತಿಪರ ಸಾಹಿತಿ ಜ್ಯೋತಿ ಡಿ ಭೊಮ್ಮಾ ಅಭಿಪ್ರಾಯಪಟ್ಟರು.

ಚಂದಾಪೂರದ ಸಮಾಜ ಕಲ್ಯಾಣ ಇಲಾಖೆಯ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಭಾರತ ಜನ-ಸಂಗಮ ಸಮಿತಿ ಹಾಗೂ ಯೂನಿಟಿ ಆಫ್ ಮೂಲನಿವಾಸಿ ಬಹುಜನ ಸಂಘಟನೆ ವತಿಯಿಂದ ಹಮ್ಮಿಕೊಂಡ ವಿದ್ಯಾರ್ಥಿಗಳ ಮೇಲೆ ಸಮೂಹ ಮಾಧ್ಯಮಗಳ ಪ್ರಭಾವ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿ ಮಾತನಾಡಿದರು.

Contact Your\'s Advertisement; 9902492681

ಮುಂದುವರೆದು ಪ್ರಜಾಪ್ರಭುತ್ವದಲ್ಲಿ ಮಾದ್ಯಮಗಳು ಪ್ರಮುಖವಾದ ಸ್ಥಾನವನ್ನು ಅಲಂಕರಿಸಿವೆ ಅದಕ್ಕಾಗಿ ವಿದ್ಯಾರ್ಥಿಗಳು ಸಮೂಹ ಮಾಧ್ಯಮಗಳ ಸದುಪಯೋಗ ಪಡೆದುಕೊಳ್ಳಬೇಕು ಆದರೆ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಸಮೂಹ ಮಾಧ್ಯಮಗಳಿಂದ ದುರುಪಯೋಗ ಪಡೆದುಕೊಂಡು ಜೀವನ ವ್ಯರ್ಥ ಹಾಳು ಮಾಡಿಕೊಳ್ಳುತ್ತಿದ್ದಾರೆ ತಮ್ಮ ಜೀವನದ ಉತ್ತಮ ಭವಿಷ್ಯಕ್ಕಾಗಿ ಮಾದ್ಯಮಗಳು ಬಳಸಿಕೊಂಡಾಗ ಮಾತ್ರ ಆದರ್ಶ ವ್ಯಕ್ತಿಗಳಾಗಲು ಸಾದ್ಯವೆಂದರು ಕಾರ್ಯಕ್ರಮವನ್ನು ಚಿಂಚೋಳಿ ಡಿ ವಾಯ ಎಸ್ಪಿಗಳಾದ ಸಂಗಮೇಶ ಹಿರೇಮಠ ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ನರಸಮ್ಮ ಆವುಂಟಿ ವೀರಣ್ಣಾ ಸುಗಂದಿ ಶೈಲಜಾ ಸಾಗರ ಆನಂದಿ ಮಾತನಾಡಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾರುತಿ ಗಂಜಗಿರಿ ವಹಿಸಿದರು. ಪ್ರಾಸ್ತಾವಿಕವಾಗಿ ಗೋಪಾಲ ಗಾರಂಪಳ್ಳಿ ಮಾತನಾಡಿದರು ಮೋಹನ ಐನಾಪೂರ ಸ್ವಾಗತಿಸಿದರೆ ಮೌನೇಶ್ ಮುಸ್ತರಿ ಕಾರ್ಯಕ್ರಮ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here