ದತ್ತಾತ್ರೇಯ ಇಕ್ಕಳಕಿಗೆ ಶಾಸಕ ಪ್ರಿಯಾಂಕ್ ಖರ್ಗೆ ಅಭಿನಂದನ ಪತ್ರ

0
289

ಮಾನ್ಯ ದತ್ತಾತ್ರೇಯ ಇಕ್ಕಳಕಿ ಅವರಿಗೆ ನಮಸ್ಕಾರಗಳು,

ನೀವು ಬರೆದ ಪತ್ರವು ನನಗೆ ತಲುಪಿದೆ. ಕೊರೋನಾ ಸಂಕಷ್ಟದ ಸಮಯದಲ್ಲಿ ಒಬ್ಬ ಜವಾಬ್ದಾರಿಯುತ ಶಾಸಕನಾಗಿ ನಾನು ನನ್ನ ಕೆಲಸಗಳನ್ನು ಮಾಡುತ್ತಿದ್ದೇನೆ. ನನ್ನ ಈ ಕಾರ್ಯಗಳ ಕುರಿತು ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಹಾಗೂ ಕಾಳಜಿಗೆ ನಾನು ಆಭಾರಿಯಾಗಿದ್ದೇನೆ.

Contact Your\'s Advertisement; 9902492681

ಕಳೆದ 5 ದಶಕಗಳಿಂದ ಈ ಭಾಗದ ಜನತೆ ನನ್ನ ಹಾಗೂ ನಮ್ಮ ತಂದೆಯವರ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸ, ಅಭಿಮಾನಕ್ಕೆ ನಾವು ಸಲ್ಲಿಸುತ್ತಿರುವ ಅಳಿಲು‌ ಸೇವೆ ಇದು. ನಮ್ಮ ಜನ ಸಂಕಷ್ಟದಲ್ಲಿರುವಾಗ ಅವರ ಸಹಾಯಕ್ಕೆ ಧಾವಿಸುವುದು ಯಾವುದೇ ಮಾನವೀಯ ವ್ಯಕ್ತಿಯ ಪ್ರಥಮ ಆದ್ಯತೆಯಾಗಬೇಕು. ಇದು ನಮ್ಮ ಹೊಣೆ ಹಾಗೂ ಕರ್ತವ್ಯವೂ ಹೌದು. ಇದೇ ಜನತೆಯ ಆಶೀರ್ವಾದದಿಂದ ನಾವು ಇಂದು ಈ ಮಟ್ಟಕ್ಕೆ ಬೆಳೆದಿದ್ದೇವೆ. ನನ್ನ ಹಾಗೂ ನಮ್ಮ ತಂದೆಯವರ ಮೇಲೆ ಈ ಭಾಗದ ಜನರ ತೀರಿಸಲಾಗದಷ್ಟು ಋಣವಿದೆ. ಜನ ನಮಗೆ ಅಧಿಕಾರ ನೀಡಿರುವುದು ಅವರ ಸೇವೆ ಮಾಡಲು ಎಂಬುವುದನ್ನು ಅರಿತು ಅವರ ಕಷ್ಟಕ್ಕೆ ಹೆಗಲು ನೀಡುತ್ತಿದ್ದೇವೆ ಅಷ್ಟೇ.

” ಒಬ್ಬ ಮಹಾನ್ ವ್ಯಕ್ತಿಯು ಖ್ಯಾತ ವ್ಯಕ್ತಿಯಿಂದ ಭಿನ್ನವಾಗಿರುತ್ತಾನೆ, ಏಕೆಂದರೆ ಅವರು ಸಮಾಜದ ಸೇವಕರಾಗಲು ಸಿದ್ಧರಾಗಿದ್ದಾರೆ ” ಎಂಬ ಅಂಬೇಡ್ಕರ್ ಅವರ ನುಡಿಯನ್ನು ನಂಬಿ ನಾನು ಅವರ ಹಾದಿಯಲ್ಲಿ ನಡೆಯುತ್ತಿದ್ದೇನೆ.

ಈ ಭಾಗದ ಜನರು ನನ್ನನ್ನು ನಂಬಿ ಅವರ ಸೇವೆಗಾಗಿ ನನ್ನನ್ನು ಆಯ್ಕೆಮಾಡಿ ವಿಧಾನಸಭೆಗೆ ಕಳುಹಿಸಿದ್ದಾರೆ. ಈ ಭಾಗದ ಪ್ರತಿ ಪ್ರಜೆಯ ಕಷ್ಟ – ಸುಖಗಳಲ್ಲಿ ಭಾಗಿಯಾಗುವುದು ನನ್ನ ಕರ್ತವ್ಯವೆಂದು ನಂಬಿದ್ದೇನೆ. ಮುಂದೆಯೂ ಅವರ ನಂಬಿಕೆ ಉಳಿಸಿಕೊಳ್ಳುವತ್ತ ನನ್ನ ಪ್ರಯತ್ನ ಮುಂದುವರೆಸುತ್ತೇನೆ. ನಿಮ್ಮ ಪ್ರಶಂಸೆಯ ನುಡಿಗಳು ಸದಾ ಸ್ಪೂರ್ತಿದಾಯಕವಾಗಿ ಜನಪರ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗಲು ನನಗೆ ಮತ್ತಷ್ಟು ಇಂಬು ನೀಡಿದಂತಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here