Monday, July 15, 2024
ಮನೆಬಿಸಿ ಬಿಸಿ ಸುದ್ದಿದೇವೆಗೌಡ ರಾಜ್ಯಸಭಾ ಸದಸ್ಯರಾಗಿ ನೇಮಕ:ಸುರಪುರ ಜೆಡಿಎಸ್ ಹರ್ಷಾಚರಣೆ

ದೇವೆಗೌಡ ರಾಜ್ಯಸಭಾ ಸದಸ್ಯರಾಗಿ ನೇಮಕ:ಸುರಪುರ ಜೆಡಿಎಸ್ ಹರ್ಷಾಚರಣೆ

ಸುರಪುರ: ದೇಶದ ಮಾಜಿ ಪ್ರಧಾನಿಗಳಾದ ದೇವೆಗೌಡ ಅವರು ರಾಜ್ಯಸಭಾ ಸದಸ್ಯರಾಗಿ ನೇಮಕಗೊಳ್ಳುವ ಮೂಲಕ ದೇಶದ ಅಭಿವೃಧ್ಧಿಯ ಪರವಾಗಿ ಸಂಸತ್ತಿನಲ್ಲಿ ಧ್ವನಿ ಎತ್ತಲು ಅನುಕೂಲಾಗಿದೆ ಎಂದು ಜಾತ್ಯಾತೀತ ಜನತಾ ದಳ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಸ್ತಾದ ವಜಾಹತ್ ಹುಸೇನ್ ಹರ್ಷ ವ್ಯಕ್ತಪಡಿಸಿದರು.

ನಗರದ ಜೆಡಿಎಸ್ ಕಚೇರಿ ಉಸ್ತಾದ್ ಮಂಜಿಲ್‌ನಲ್ಲಿ ಹರ್ಷಾಚರಣೆ ಕಾರ್ಯಕ್ರಮ ನಡೆಸಿ ಮಾತನಾಡಿ,ದೇವೆಗೌಡ ಅವರು ಪ್ರಧಾನಿಗಳಾಗಿ ಈ ದೇಶದ ರೈತರಿಗೆ ಅನೇಕ ಯೋಜನೆಗಳನ್ನು ನೀಡಿದ್ದಾರೆ.ಅಲ್ಲದೆ ನಮ್ಮ ಕರ್ನಾಟಕಕ್ಕೂ ಅನೇಕ ಕೊಡುಗೆಗಳನ್ನು ನೀಡಿದ್ದಾರೆ.ಇಂದು ಅವರು ಮತ್ತೆ ರಾಜ್ಯಸಭಾ ಸದಸ್ಯರಾಗಿ ಸಂಸತ್ತು ಪ್ರವೇಶ ಮಾಡಿರುವುದು ಹರ್ಷ ಮೂಡಿಸಿದೆ,ಈ ಸಭೆಯ ಮೂಲಕ ದೇವೆಗೌಡರಿಗೆ ಶುಭ ಕೋರುತ್ತಾ ಅಭಿನಂಧನೆ ಸಲ್ಲಿಸುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ತಿಪ್ಪಣ್ಣ ಪೊಲೀಸ್ ಪಾಟೀಲ್,ಶೌಕತ್ ಅಲಿ,ಅಲ್ತಾಫ್ ಮಹಿಬೂಬ್,ಶಿವಪ್ಪ ಸದಬ್,ರಾಮಚಂದ್ರ ನಾಯ್ಕ ಕೊಡೇಕಲ್,ಭೀಮನಗೌಡ ಹೆಬ್ಬಾಳ,ಬಸವರಾಜ ಕಲ್ಲದೇವನಹಳ್ಳಿ,ರಂಗಣ್ಣ ದೊರೆ,ವಿನಾಯಕ ಬಳಿಚಕ್ರ ಸೇರಿದಂತೆ ಅನೇಕರಿದ್ದರು.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular