ಸಂಪತ್ತು, ಸಂಬಂಧಗಳಲ್ಲಿ ಒಂದನ್ನು ಆಯ್ಕೆ ಮಾಡಿ: ಪಾಟೀಲ್

0
288

ಕಲಬುರಗಿ: ಬಸವಾದಿ ಶರಣರ ವಚನದ ಸಾಹಿತ್ಯದಲ್ಲಿ ಸಾಧನೆಯ ಶಕ್ತಿ ಅಡಗಿದೆ. ಅವರ ವಿಚಾರಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವಿಸಿದರೆ ನಮಗೆ ಗೊತ್ತಾಗದೆ ನಮ್ಮ ಬದುಕು ಉಜ್ವಲವಾಗುತ್ತದೆ ಎಂದು ಮಾಜಿ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.

ಇಂದು ಶ್ರೀನಿವಾಸ ಸರಡಗಿಯ ಶ್ರೀ ಚಿನ್ನದಕಂತಿ ಚಿಕ್ಕವೀರೇಶ್ವರ ಸಂಸ್ಥಾನ ಹಿರೇಮಠ, ಸ್ನೇಹ ಸಂಗಮ ವಿವಿದೊದ್ದೇಶ ಸೇವಾ ಸಂಘ ಹಾಗೂ ಅಖಿಲ ಭಾರತ ಯುವಜನ ಒಕ್ಕೂಟ ಗ್ರಾಮ ಘಟಕದಿಂದ ಶ್ರೀಮಠದ ಆವರಣದಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ “ನಿರ್ಭಯ ಸಾಧಕ” ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತಾ ವಿದ್ಯಾರ್ಥಿಗಳು ಮುಂದೆ ಸಂಪತ್ತು ಹಾಗೂ ಸಂಬಂಧ ಇವುಗಳಲ್ಲಿ ಒಂದನ್ನು ಆಯ್ಕೆ ಮಾಡಬೇಕಾದರೆ ಸಂಬಂಧವನ್ನೆ ಆಯ್ಕೆ ಮಾಡಿಕೊಳ್ಳಿ. ಏಕೆಂದರೆ ಸಂಪತ್ತನ್ನು ಮರಳಿ ಪಡೆಯಬಹುದು ಆದರೆ ಕಳೆದುಕೊಂಡ ಸಂಬಂಧ ಮರಳಿ ಸಿಗಲಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ತೋರಿಕೆಯ ಜೀವನ ನಡೆಸಬೇಡಿ ಅದು ನಿಮ್ಮ ವ್ಯಕ್ತಿತ್ವವನ್ನು ಕಡಿಮೆ ಮಾಡುತ್ತದೆ. ತೋರಿಕೆ ಇಲ್ಲದೆ ಸರಳತೆಯಿಂದ ಬದುಕಿ ತೋರಿಸಿ. ಆಗ ಪ್ರಪಂಚವೇ ನಿಮಗೆ ಕೊಂಡಾಡುತ್ತದೆ ಎಂದರು.

Contact Your\'s Advertisement; 9902492681

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ಷ.ಬ್ರ. ಡಾ. ರೇವಣಸಿದ್ಧ ಶಿವಾಚಾರ್ಯರು ಆಶೀರ್ವದಿಸಿ ಮಾತನಾಡುತ್ತಾ ಮನುಷ್ಯನು ಅನ್ನದಾನ ಮಾಡುವುದಕ್ಕಿಂತ ಅನ್ನಕ್ಕೆ ದಾರಿ ಮಾಡಿಕೊಡುವುದು ಶ್ರೇಷ್ಠ ಇಂದಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳು ಹೆಚ್ಚು ಅಂಕ ಪಡೆದರೆ ಸಾಲದು. ಉತ್ತಮ ಸಂಸ್ಕಾರದೊಂದಿಗೆ ಬದುಕುವುದು ಕಲಿಯಬೇಕು. ಹೆತ್ತ ತಾಯಿ-ತಂದೆ ಎಷ್ಟು ಶ್ರೇಷ್ಟರೆಂದರೆ ಅವರು ಕಷ್ಟಪಟ್ಟಿರುವ ಬೆವರಿನ ಹನಿಯ ಬೆಲೆಯನ್ನು ಮಕ್ಕಳಿಂದ ತೀರಿಸಲು ಸಾಧ್ಯವಿಲ್ಲ. ಅದಕ್ಕಾಗಿ ಉನ್ನತ ಶಿಕ್ಷಣ ಹೊಂದುವುದರೊಂದಿಗೆ ಸಂಸ್ಕಾರವಂತಹ ಸಮಾಜ ನಿರ್ಮಾಣ ಮಾಡುವುದು ಇಂದಿನ ಯುವಕರ ಕರ್ತವ್ಯವಾಗಿದೆ ಎಂದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಎಸ್. ಅಟ್ಟೂರ ಮಾತನಾಡುತ್ತಾ ಸಂಘವು ಪ್ರತಿ ವರ್ಷ ನೂರಾರು ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಾ ಬಂದಿದೆ. ಆದರೆ ಈ ಬಾರಿ ಕೊರೊನಾ ಸೋಂಕಿನ ವಾತಾವರಣದಿಂದ ಅಂತರ ಕಾಯ್ದುಕೊಳ್ಳುವ ಉದ್ದೇಶಕ್ಕಾಗಿ ಸರಣ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಮುಂದೆ ಬೇರೆ ಬೇರೆ ಸ್ಥಳಗಳಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವುದರೊಂದಿಗೆ ಉನ್ನತ ಭವಿಷ್ಯ ರೂಪಿಸಿಕೊಳ್ಳಲಿ ಎಂದು ನುಡಿದರು.

ಮುಖ್ಯ ಅತಿಥಿಗಳಾಗಿ ಖ್ಯಾತ ಉದ್ದಿಮೆದಾರರಾದ ವಿನೋದಕುಮಾರ ಪಾಟೀಲ, ಮಹಾನಗರ ಪಾಲಿಕೆ ಸದಸ್ಯರಾದ ಶಿವು ಸ್ವಾಮಿ ವೇದಿಕೆಯ ಮೇಲಿದ್ದರು. ಸಂತೋಷ ಆಡೆ ಸ್ವಾಗತಿಸಿದರು, ರವಿಕುಮಾರ ಶಹಾಪುರಕರ ನಿರೂಪಿಸಿದರು, ಎನ್.ಎಸ್. ಹಿರೇಮಠ ವಂದಿಸಿದರು.

ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಾದ ವಿಶಾಲ ಗಂಗಾಣ , ಐಶ್ವರ್ಯ ಹಡಪದ, ಶ್ರವಣಕುಮಾರ ಕಮಕನೂರ, ಚನ್ನವೀರಕುಮಾರ ಗಂಗಾಣ , ಸ್ವಾತಿ ಹಿರೇಮಠ, ನಾಗೇಶ ಶ್ರೀಮನಿ, ಭಾಗ್ಯಶ್ರೀ ಕಂಠಿಕರ್, ಶಶಿಕಲಾ ವಗ್ಗೆ ಹಾಗೂ ಪಿ.ಯು.ಸಿ. ವಿದ್ಯಾರ್ಥಿಗಳಾದ ಪ್ರೇಮಾ ಗಂಗಾಣ , ಸ್ನೇಹಾ ಆಕಾರ, ಶಿವರಾಜ ಕುಮಾರ ಪೂಜಾರಿ, ಲಕ್ಷ್ಮೀ ರುದನೂರ, ಅಂಕುಶ ರುದನೂರ “ನಿರ್ಭಯ ಸಾಧಕ” ಪ್ರಶಸ್ತಿ ಪಡೆದುಕೊಂಡರು.

ಸಂಗಯ್ಯ ಹಿರೇಮಠ, ಆನಂದ ಆಡೆ, ಶರಣಗೌಡ ಪಾಟೀಲ, ರಘುನಂದನ ಕುಲಕಣ ್, ಕಲ್ಯಾಣರಾವ ಮುರುಡ, ಶಿವರುದ್ರ ಕರಿಕಲ, ಮಲಕಾರಿ ಪೂಜಾರಿ, ಭೀಮಾಶಂಕರ ಚಕ್ಕಿ, ಮಹಬೂಬ ಪಟೇಲ, ಲಿಂಗರಾಜ ಮಾಲಿಪಾಟೀಲ, ಶಾಂತಲಿಂಗ ಪಾಟೀಲ, ವಿರುಪಾಕ್ಷಯ್ಯ ಮಠಪತಿ ಇತರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here