ಕಲಬುರಗಿ: ಇತ್ತಿಚೆಗೆ ತೆಲಂಗಾಣ ಮುಖ್ಯ ರಸ್ತೆ ಮೇಲೆ ಕಾರಿನಲ್ಲಿ ಪ್ರಯಾಣಿ ಸುತಿರುವ ವಕೀಲ ದಂಪತಿಗಳ ಮರಣತಿಕ ಹತ್ಯೆ ನಂತರ ಮೊನ್ನೆ ಶುಕ್ರವಾರದ ಮಧ್ಯಾಹ್ನ ಹೊಸಪೇಟೆಯ ನ್ಯಾಯವಾದಿ ವೆಂಕಟೇಶ ಬರಬರ ಹತ್ಯೆ ಖಂಡಿಸಿ ಜಿಲ್ಲೆಯ ನ್ಯಾಯವಾದಿ ಸಂಘದಿಂದ ಪ್ರತಿಭಟನೆ ಜರುಗಿತು.
ಬರುವ ಅಧಿವೇಶನದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ವಕೀಲರ ಹಿತ ಕಾಯುವ ನಿಟ್ಟಿನಲ್ಲಿ ನ್ಯಾಯವಾದಿಗಳ ರಕ್ಷಣಾ ಕಾಯ್ದೆ ರಚಿಸ ಬೇಕೆಂದು ಪ್ರತಿಭಟನಾ ನಿರತ ನ್ಯಾಯವಾದಿಗಳು ಆಗ್ರಹಿಸಿದ್ದಾರೆ.
ಕೆಬಿಎನ್ ಟ್ರೋಫಿ ಪಂದ್ಯ: ಕಲಬುರಗಿಯಲ್ಲಿ ಕ್ರಿಕೆಟ್ ದಿಗ್ಗಜ ಮೊಹ್ಮದ್ ಅಜರೋದ್ದಿನ್, ಕೈಫ್
ಸಂಘದ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಹಾಗೂ ಎಲ್ಲಾ ಪದಾಧೀಕಾರಿಗಳು ಪಾಲ್ಗೊಂಡಿದ್ದು, ಮರವಣೆಗೆ ನಡೆಸುವ ಮೂಲಕ ಹಕ್ಕೊತ್ತಾಯ ಮಂಡಿಸಿದರು.
ನ್ಯಾವದಿಗಳ ರಕ್ಷಣಾ ಕಾಯ್ದೆ ಜಾರಿಗೆ ತರಲು ತಡ ಮಾಡಿದರೆ ಉಗ್ರವಾಗಿ ಪ್ರತ್ಯೇಕ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸರಕಾರಕ್ಕೆ ಒತ್ತಾಯಿಸಲಾಯಿತು.