ಅಮ್ಮಾ ಕ್ಯಾಂಟೀನ್ ಸೇವೆ ಶ್ಲಾಘನೀಯವಾದದ್ದು: ಶ್ರೀಮತಿ ಲೀಲಾ ಕಾರಟಗ

0
196

ಶಹಾಪುರ: ಮಣಿಕಂಠನ್ ಚಾರಿಟೇಬಲ್ ಟ್ರಸ್ಟ್ ಶಹಾಪುರ ವತಿಯಿಂದ ಸುಮಾರು ಎರಡು ವರ್ಷಗಳ ಹಿಂದೆ ಸ್ಥಾಪನೆಗೊಂಡಿರುವ ಅಮ್ಮ ಕ್ಯಾಂಟೀನ್ ನ ಪ್ರಥಮ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ ಯುವ ಮುಖಂಡರಾದ ಅಮರೇಶಗೌಡ ದರ್ಶನಾಪುರ ಉದ್ಘಾಟಿಸಿದರು.

ಗುರು ಮಣಿಕಂಠನ್ ಅವರ ತಾಯಿಯಾದ ಲಿಂಗೈಕ್ಯ ಶ್ರೀಮತಿ ಲಕ್ಷ್ಮೀ ದೇವಿಯವರ ೩೫ ನೇ ಸ್ಮರಣೋತ್ಸವದ ಅಂಗವಾಗಿ ಬಡವರಿಗೆ, ದುರ್ಬಲ ವರ್ಗದವರಿಗೆ, ವಿದ್ಯಾರ್ಥಿಗಳ ಅನುಕೂಲದ ದೃಷ್ಟಿಯಿಂದ ತಾಯಿ ನೆನಪಲಿ ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವ ಅಮ್ಮ ಕ್ಯಾಂಟೀನಿನ ಕಾರ್ಯ ತುಂಬಾ ಶ್ಲಾಘನೀಯವಾದದ್ದು ಎಂದು ಉಪನ್ಯಾಸಕಿ ಲೀಲಾ ಕಾರಟಗಿ ಹೇಳಿದರು.

Contact Your\'s Advertisement; 9902492681

ಕೇವಲ ೧೦ ರೂಪಾಯಿಯಲ್ಲಿ ಊಟ ಮತ್ತು ಉಪಹಾರ ರುಚಿಕಟ್ಟಾಗಿ ಹಾಗೂ ಸ್ವಚ್ಛತೆಯಿಂದ ಅಮ್ಮಾ ಕ್ಯಾಂಟೀನ್ ಸೇವೆ ಮಾಡುತ್ತಾ ಬಂದಿದೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ರಕ್ತದಾನ, ಅನ್ನದಾನ, ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿತ್ತು.

ಈ ಸಮಾರಂಭದ ವೇದಿಕೆ ಮೇಲೆ ಸೂಗುರೇಶ್ವರ ಶಿವಾಚಾರ್ಯರು ದಿವ್ಯ ಸಾನ್ನಿಧ್ಯ ವಹಿಸಿದ್ದರು ಹಾಗೂ ಬಸವಯ್ಯ ಶರಣರು ಚರಬಸವೇಶ್ವರ ಸಂಸ್ಥಾನ ಗದ್ದುಗೆಯ ಶ್ರೀಗಳು ಜೊತೆಗಿದ್ದರು.ಹಿರಿಯ ಮುಖಂಡರಾದ ಚಂದ್ರಶೇಖರ ಸಾಹು ಆರಬೋಳ ಕಸಾಪ ಅಧ್ಯಕ್ಷ ಸಿದ್ದಲಿಂಗಣ್ಣ ಆನೆಗುಂದಿ ಡಾ ಚಂದ್ರಶೇಖರ ಸುಬೇದಾರ ಬಸನಗೌಡ ಮರ್ಕಲ್ ಅವು ಇತರರು ಉಪಸ್ಥಿತರಿದ್ದರು.

ಈ ಸಮಾರಂಭದ ಘನತೆ ಅಧ್ಯಕ್ಷತೆಯನ್ನು ಮಣಿಕಂಠನ್ ಚಾರಿಟೆಬಲ್ ಟ್ರಸ್ಟಿನ ಉಪಾಧ್ಯಕ್ಷರಾದ ರವಿ ಕಿರಣ್ ಅವರು ವಹಿಸಿಕೊಂಡಿದ್ದರು ಶ್ರೀಮತಿ ಕವಿತಾ ಪತ್ತಾರ ಪ್ರಾರ್ಥಿಸಿದರು ಗುರು ಮಣಿಕ೦ಟನ ಪ್ರಾಸ್ತಾವಿಕವಾಗಿ ಮಾತನಾಡಿದರು ಮಲ್ಲಿಕಾರ್ಜುನ್ ಚಾಮನಾಳ ಸ್ವಾಗತಿಸಿದರು ಬಸವರಾಜ ಸಿನ್ನೂರ ನಿರೂಪಿಸಿ ವಂದಿಸಿದರು.

ಉತ್ತರ ಕರ್ನಾಟಕದ ಪ್ರಖ್ಯಾತ ಕಲಾವಿದ ಸರಿಗಮಪ ಜೀ ಕನ್ನಡದ ವಿಜೇತ ಮೈಬೂಸಾಬ್ ಹಾಗೂ ಉತ್ತರ ಕರ್ನಾಟಕದ ಗಾಯಕರಾದ ಬಾಷಾ ಕಿನಾಳ ಮಲೆನಾಡಿನ ಗಾಯಕಿ ಶ್ರೀಮತಿ ಶರಾವತಿ ಅವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಜರುಗಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here