ಕಲಬುರಗಿ: ಪಾಲಿಕೆ ಯೋಜಿತ ಸಿಬ್ಬಂದಿಗಳ ವರ್ಗಾವಣೆ ಆಗ್ರಹ

0
33

ಕಲಬುರಗಿ: ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ನಾನಾ ಇಲಾಖೆಗಳಿಂದ ನಿಯೋಜನೆ ಮೇಲೆ ಪಾಲಿಕೆಗೆ ವರ್ಗಾವಣೆಗೊಂಡು ಕೆಲಸ ಮಾಡುತ್ತಿರುವ ಸಿಬ್ಬಂದಿಗಳನ್ನು ಕೂಡಲೇ ಮೂಲ ಇಲಾಖೆಗಳಿಗೆ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿ ಭಾರತೀಯ ಯುವ ಸೈನ್ಯದ ಸದಸ್ಯರು ಪಾಲಿಕೆ ಎದುರು ಪ್ರತಿಭಟನೆ ಮಾಡಿದರು.

ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿರುವ ಸಂಘಟನೆ ಮುಖಂಡರು, ಕಳೆದ ಹಲವಾರು ವರ್ಷಗಳಿಂದ ಪಾಲಿಕೆ ಮೂಲ ಸಿಬ್ಬಂದಿ ಬೇರೆ ಜಿಲ್ಲೆ ಊರುಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ನಾನಾ ಇಲಾಖೆ ಸಿಬ್ಬಂದಿ ನಿಯೋಜನೆಯಲ್ಲಿದ್ದಾರೆ. ಇದರಿಂದ ಪಾಲಿಕೆ ಕೆಲಸವೂ ಅಷ್ಟಕಷ್ಟೆ ನಡೆಯುತ್ತಿದೆ. ಆದ್ದರಿಂದ ಕೂಡಲೇ ಅವರನ್ನು ವರ್ಗಾವಣೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

Contact Your\'s Advertisement; 9902492681

ಸೈನ್ಯಯ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಚಿಂಚನಸೂರು, ಮಹಿಳಾ ಘಟಕದ ಅಧ್ಯಕ್ಷೆ ಸೋನುಬಾಯಿ ಶೃಂಗೇರಿ, ರಾಜಶೇಖರ ಹೆರೂರು, ಗಣೇಶ ಕಟ್ಟಿಮನಿ, ಗೌತಮ್ ಹರಸೂರು, ಅಮಿತಕುಮಾರ, ಬಾಗೇಶ ಶಹಾಬಾದ, ರಾಹುಲ್ ಸೂರ್ಯವಂಶಿ, ಪ್ರಶಾಂತ ಹೂಗಾರ, ಬಸವರಾಜ ಬೇಲೂರು ಮತ್ತಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here